ಕೊಳ್ಳೇಗಾಲ: ನಕಲಿ ಅಂಕಪಟ್ಟಿ ಹಾಗೂ ಸುಳ್ಳು ಪ್ರಮಾಣ ಪತ್ರ ನೀಡಿ ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆದಿದ್ದ ಕಂದಾಯ ಇಲಾಖೆ ದ್ವಿತೀಯ ದರ್ಜೆ ಗುಮಾಸ್ತ ಎಂ. ಮನೋಜ್ ವಿರುದ್ಧ ತಹಸೀಲ್ದಾರ್ ಕಾಮಾಕ್ಷ ಮ್ಮ ಅವರು ಪಟ್ಟಣದ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೌನೇಶ್ವರಯ್ಯ 2014ರ ನ. 30ರಂದು ನಿಧನರಾಗಿದ್ದರು. ಮೃತರ ಪತ್ನಿ ಜಯಲಕ್ಷ್ಮಿ ಅನುಕಂಪದ ಆಧಾರದ ಮೇಲೆ ಮಗ ಎಂ.ಮನೋಜ್ಗೆ ಕೆಲಸ ನೀಡುವಂತೆ ಕೋರಿದ್ದರು. ಮನೋಜ್, ತಾನು ಮೈಸೂರಿನ ಮುಕ್ತ ವಿವಿಯಲ್ಲಿ ಬಿಎ ಪದವಿ ಪಡೆದಿದ್ದು, ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡುವಂತೆ ಕೋರಿದ್ದರು.
2012-13ರ ನಂತರ ಪಡೆದ ಪದವಿಯನ್ನು ಮಾನ್ಯ ಮಾಡದಂತೆ ಉನ್ನತ ಶಿಕ್ಷ ಣ ಇಲಾಖೆ ಅಪರ ಕಾರ್ಯದರ್ಶಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿಎ ಪದವಿಯನ್ನು ಪರಿಗಣಿಸದೆ ಪಿಯುಸಿ ವಿದ್ಯಾರ್ಹತೆ ಆಧಾರದ ಮೇರೆಗೆ ಜಿಲ್ಲಾಧಿಕಾರಿಯವರು ದ್ವಿತಿಯ ದರ್ಜೆ ಸಹಾಯಕ ಹುದ್ದೆ ನೀಡಿದ್ದರು. ಮನೋಜ್, ತಾನು ಬಿಎ ಪದವಿ ಪಡೆದಿದ್ದು, ನನ್ನ ವಿದ್ಯಾರ್ಹತೆಗೆ ತಕ್ಕಂತೆ ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಮುಕ್ತ ವಿವಿ ಕುಲಸಚಿವರು ಎಂ.ಮನೋಜ್ನ ಅಂಕಪಟ್ಟಿ ಪರಿಶೀಲಿಸಿದಾಗ ಬಿಎ ಪರೀಕ್ಷೆ ಬರೆಯದೆ ಇರುವುದು ದೃಢಪಟ್ಟಿತು. ಮನೋಜ್ ನೀಡಿರುವ ದಾಖಲೆಗಳು ನೈಜತೆಯಿಂದ ಕೂಡಿಲ್ಲ, ಮುಕ್ತ ವಿವಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣ ಪತ್ರ ನೀಡಿದ ಮನೋಜ್ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿರುವ ಹಿನ್ನೆಲೆಯಲ್ಲಿ ಕಾಮಾಕ್ಷ ಮ್ಮ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
---------------
ಜೀಪ್ ಚಾಲಕ ಅಮಾನತು
ಕರ್ತವ್ಯ ಲೋಪ, ಇಲಾಖೆಯ ನಿಯಮಗಳಿಗೆ ವಿರುದ್ಧದ ನಡವಳಿಕೆ ಹೊಂದಿರುವ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಜೀಪ್ ಚಾಲಕ ಮೋನೇಶ್ ಅವರನ್ನು ಡಿ.ಆರ್. ಪೊಲೀಸ್ ಅಧಿಕಾರಿ ಅಮಾನತುಗೊಳಿಸಿದ್ದಾರೆ. ಮೋನೇಶ್ ಬಗ್ಗೆ ಸಾರ್ವಜನಿಕರಿಂದ ಬಂದ ದೂರು ಹಾಗೂ ಕರ್ತವ್ಯಲೋಪ ಸೇರಿದಂತೆ ಇತರೆ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಹಿಂದಿನ ಪಿಎಸ್ಐ ವರದಿ ನೀಡಿದ್ದರು. ವರದಿಯನ್ನಾಧÜರಿಸಿ ಡಿ.ಆರ್. ವಿಭಾಗದ ಎಸ್ಪಿ ಅಮಾನತು ಮಾಡಿ ಆದೇಶಿಸಿದ್ದಾರೆ.