ಆ್ಯಪ್ನಗರ

75 ಕಿ.ಮೀ.ವ್ಯಾಪ್ತಿಯಲ್ಲಿಜಗಮಗಿಸಲಿದೆ ದೀಪಾಲಂಕಾರ

ನಾಡಹಬ್ಬ ದಸರಾ ಸಂದರ್ಭ ಮೂರು ಕೋಟಿ ರೂ. ವೆಚ್ಚದಲ್ಲಿಸುಮಾರು 75 ಕಿ.ಮೀ. ವ್ಯಾಪ್ತಿಯಲ್ಲಿವಿದ್ಯುತ್‌ ದೀಪಾಲಂಕಾರ ನಡೆಯಲಿದ್ದು, ವಿಶೇಷವಾಗಿ ಗಮನ ಸೆಳೆಯಲಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

Vijaya Karnataka 13 Sep 2019, 5:00 am
ಮೈಸೂರು: ನಾಡಹಬ್ಬ ದಸರಾ ಸಂದರ್ಭ ಮೂರು ಕೋಟಿ ರೂ. ವೆಚ್ಚದಲ್ಲಿಸುಮಾರು 75 ಕಿ.ಮೀ. ವ್ಯಾಪ್ತಿಯಲ್ಲಿವಿದ್ಯುತ್‌ ದೀಪಾಲಂಕಾರ ನಡೆಯಲಿದ್ದು, ವಿಶೇಷವಾಗಿ ಗಮನ ಸೆಳೆಯಲಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
Vijaya Karnataka Web dussehra 2019
75 ಕಿ.ಮೀ.ವ್ಯಾಪ್ತಿಯಲ್ಲಿಜಗಮಗಿಸಲಿದೆ ದೀಪಾಲಂಕಾರ


ನಗರ ಮುಡಾ ಕಚೇರಿಯಲ್ಲಿವಿದ್ಯುತ್‌ ದೀಪಾಲಂಕಾರದ ಪೋಸ್ಟರ್‌ ಬಿಡುಗಡೆ ಮಾಡಿ ಗುತ್ತಿಗೆದಾರೊಂದಿಗೆ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ಈ ಹಿಂದಿನ ಎಲ್ಲಾದಸರಾವನ್ನು ಈ ಬಾರಿಯ ವಿದ್ಯುತ್‌ ಅಲಂಕಾರ ಮೀರಿಸಲಿದೆ. ಸೆಸ್ಕ್‌ ಎಂಡಿ ಡಾ. ಎಚ್‌.ಎನ್‌. ಗೋಪಾಲಕೃಷ್ಣ ಅವರ ನೇತೃತ್ವದಲ್ಲಿನಿಗಮದ ಸಿಬ್ಬಂದಿ ಈ ಕುರಿತು ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಸುಮಾರು ಮೂರು ಕೋಟಿ ರೂ.ಗಳನ್ನು ಸೆಸ್ಕ್‌ ವೆಚ್ಚ ಮಾಡುತ್ತಿದೆ ಎಂದರು.

''ಕಳೆದ ಬಾರಿಯ ದಸರಾದಲ್ಲಿ54 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿಅಲಂಕಾರ ಮಾಡಲಾಗಿತ್ತು. ಈ ಬಾರಿ 75 ಕಿ.ಮೀಗೆ ವಿಸ್ತರಿಸಲು ಸೂಚನೆ ನೀಡಿದ್ದೇನೆ. ಕಳೆದ ಬಾರಿ 49 ವೃತ್ತಗಳನ್ನು ಅಲಂಕರಿಸಲಾಗಿತ್ತು. ಈ ವರ್ಷ 91 ವೃತ್ತಗಳನ್ನು ಗುರುತಿಸಲಾಗಿದೆ. ಸುಮಾರು 12 ವಿಶೇಷ ಪ್ರತಿಕೃತಿಗಳು ಗಮನ ಸೆಳೆಯಲಿವೆ. ಪಶ್ಚಿಮ ಬಂಗಾಳದಲ್ಲಿದುರ್ಗಾಪೂಜೆಯ ಪರಂಪರೆಯನ್ನು ಈ ಬಾರಿಯ ದಸರಾದಲ್ಲಿಬಳಸಲಾಗುವುದು,'' ಎಂದು ಮಾಹಿತಿ ನೀಡಿದರು.

''ಹಳೆಯ ದೀಪಗಳನ್ನು ಬಳಸದಂತೆ ಗುತ್ತಿಗೆದಾರರು ಎಚ್ಚರ ವಹಿಸಬೇಕು. ವಿದ್ಯುತ್‌ ಉಳಿತಾಯಕ್ಕೆ ಎಲ್‌ಇಡಿ ಬಲ್ಬ್ಗಳನ್ನು ಬಳಸಲಾಗುವುದು. ಸುಮಾರು 65 ಸಾವಿರ ಯುನಿಟ್‌ಗಳು ಅಲಂಕಾರಕ್ಕೆ ಉಪಯೋಗವಾಗಲಿದೆ. ಮೈಸೂರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನೂ ಈ ಅಲಂಕಾರವನ್ನು ಇಷ್ಟಪಡಬೇಕು. ಕೇವಲ ದಸರಾ ಸಮಯದಲ್ಲಿಮಾತ್ರವಲ್ಲದೆ ಅ.17 ರಂದು ಚಾಮುಂಡೇಶ್ವರಿಯ ತೆಪ್ಪೋತ್ಸವ ನಡೆಯಲಿದ್ದು, ಅಲ್ಲಿತನಕವೂ ವಿದ್ಯುತ್‌ ಅಲಂಕಾರ ಮುಂದುವರಿಯಲಿದೆ,'' ಎಂದರು.

''ಕೇವಲ ಮೈಸೂರು ಮಾತ್ರವಲ್ಲದೆ ಚಾಮರಾಜನಗರದಲ್ಲಿದಸರಾ ಸಂದರ್ಭ ಅಲಂಕಾರಕ್ಕೆ ನಿಗಮ 15 ಲಕ್ಷ ರೂ.ಗಳನ್ನು ಹಾಗೂ ಶ್ರೀರಂಗಪಟ್ಟಣ ದಸರಾಕ್ಕೆ 10 ಲಕ್ಷ ರೂ.ಗಳನ್ನು ವೆಚ್ಚ ಮಾಡುತ್ತಿದೆ. ದಸರಾಕ್ಕೆ ಸಂಬಂಧಿಸಿದ ಎಲ್ಲಾತಯಾರಿ ಸೆ.25ರೊಳಗೆ ಮುಗಿಯಬೇಕು. ಅಲ್ಲದೆ, ಯಾವುದೇ ಬಡಾವಣೆಯಲ್ಲಿ, ರಿಂಗ್‌ ರಸ್ತೆಯಲ್ಲಿಕತ್ತಲೆ ಇರಬಾರದು. ಮುಡಾ ಹಾಗೂ ಖಾಸಗಿ ಬಡಾವಣೆಯಾಗಿದ್ದರೂ ಬೆಳಕಿನ ವ್ಯವಸ್ಥೆ ಮಾಡಬೇಕು. ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ವಿಶೇಷ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು,'' ಎಂದರು.

''ಗುತ್ತಿಗೆದಾರರು ಇದು ನಮ್ಮ ದಸರಾ ಎಂದು ಸ್ವಯಂಪ್ರೇರಣೆಯಿಂದ ಕೆಲಸ ಮಾಡಬೇಕು. ನಿಮ್ಮ ಬಿಲ್‌ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳುತ್ತೇನೆ. ಅದೇ ರೀತಿ ಯಾರಿಗೂ ಕಮಿಷನ್‌ ನೀಡಬೇಕಿಲ್ಲ. ಒಂದು ವೇಳೆ ಯಾರಾದರೂ ಕಮಿಷನ್‌ ಕೇಳಿದರೆ ನನಗೆ ಮಾಹಿತಿ ನೀಡಿ. ಒಟ್ಟಿನಲ್ಲಿಸರಕಾರಕ್ಕೆ ಯಾವುದೇ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಿ,'' ಎಂದರು.

ಶಾಸಕ ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಸೆಸ್ಕ್‌ ಎಂಡಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಅಧೀಕ್ಷಕ ಎಂಜಿನಿಯರ್‌ ಮುನಿಗೋಪಾಲರಾಜು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ