ಆ್ಯಪ್ನಗರ

ಕರ್ತವ್ಯನಿರತ ಸ್ಟಾಫ್‌ ನರ್ಸ್‌ ಹೃದಯಾಘಾತದಿಂದ ಸಾವು

ತಾಲೂಕಿನ ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಮೇಲ್‌ ಸ್ಟಾಫ್‌ ನರ್ಸ್‌ ಹೃದಯಾಘಾತದಿಂದ ಮೃತಪಟ್ಟರು.

Vijaya Karnataka 24 Jul 2018, 5:00 am
ಹುಣಸೂರು : ತಾಲೂಕಿನ ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಮೇಲ್‌ ಸ್ಟಾಫ್‌ ನರ್ಸ್‌ ಹೃದಯಾಘಾತದಿಂದ ಮೃತಪಟ್ಟರು.
Vijaya Karnataka Web duty staff nurse death from heart attack
ಕರ್ತವ್ಯನಿರತ ಸ್ಟಾಫ್‌ ನರ್ಸ್‌ ಹೃದಯಾಘಾತದಿಂದ ಸಾವು


ಸೋಮವಾರ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಟಾಫ್‌ ನರ್ಸ್‌ ಸುರೇಶ್‌(30) ಮೃತರು. ಮೂಲತಃ ಮೈಸೂರು ತಾಲೂಕಿನ ಮಾರಗೌಡನಹಳ್ಳಿಯ ನಿವಾಸಿಯಾಗಿದ್ದು, ಇವರ ತಂದೆ ಶಿವಣ್ಣ ಮೈಸೂರಿನ ಜಿಲ್ಲಾ ಮಲೇರಿಯಾ ನಿಯಂತ್ರಣ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಗಿದ್ದಿಷ್ಟು: ಸೋಮವಾರ ಬೆಳಗ್ಗೆ ಪಿರಿಯಾಪಟ್ಟಣ ತಾಲೂಕು ಇಟ್ಟಗಳ್ಳಿಯ ಪತ್ನಿಯ ಮನೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದ ಸುರೇಶ್‌ ಮಧ್ಯಾಹ್ನ ಎದೆ ನೋವೆಂದು ಸಹೋದ್ಯೋಗಿಗಳಿಗೆ ತಿಳಿಸಿದ್ದರು. ಬಳಿಕ ಆಸ್ಪತ್ರೆಯ ವೈದ್ಯ ಡಾ. ಜೋಗೇಂದ್ರನಾಥ್‌ ಅವರು ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಎರಡು ವರ್ಷಗಳಿಂದ ಆರೋಗ್ಯ ಇಲಾಖೆಯ ಸೇವೆಗೆ ಸೇರಿದ್ದ ಸುರೇಶ್‌ ಅವರು, ಹನಗೋಡಿನಿಂದಲೇ ಕರ್ತವ್ಯ ಆರಂಭಿಸಿದ್ದರು.

ಆರು ತಿಂಗಳ ಹಿಂದಷ್ಟೆ ವಿವಾಹ: ಸುರೇಶ್‌ ಆರು ತಿಂಗಳ ಹಿಂದೆಯಷ್ಟೆ ಪಿರಿಯಾಪಟ್ಟಣ ತಾಲೂಕಿನ ಇಟ್ಟಗಳ್ಳಿಯ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವ್‌ರ ಪುತ್ರಿ ಕಾವ್ಯಾ ಅವರನ್ನು ವಿವಾಹವಾಗಿದ್ದರು. ಈಕೆ ಮೂರು ತಿಂಗಳ ಗರ್ಭಿಣಿಯಾಗಿದ್ದು, ಎರಡೂ ಕುಟುಂಬಗಳಲ್ಲಿ ದುಖಃ ಮಡುಗಟ್ಟಿದೆ.

ಕರ್ತವ್ಯದ ಮೂಲಕ ಎಲ್ಲರ ಪ್ರೀತಿ ಪಾತ್ರರಾಗಿದ್ದ ಸುರೇಶ್‌ ಅವರ ಸಾವು ಹನಗೋಡು ಗ್ರಾಮಸ್ಥರನ್ನು ಘಾಸಿಗೊಳಿಸಿದೆ.

ಆಸ್ಪತ್ರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ದೇವತಾಲಕ್ಷ್ಮಿ ಸೇರಿದಂತೆ ಇಲಾಖೆಯ ಸಹೋದ್ಯೋಗಿಗಳು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ