ಮೈಸೂರು: ಈ ಬಾರಿ ದಸರಾ ಮಹೋತ್ಸವಕ್ಕೆ ಎರಡು ಹಂತದಲ್ಲಿಭದ್ರತೆ ಕೈಗೊಳ್ಳಲಾಗುತ್ತಿದ್ದು, ಬರೋಬ್ಬರಿ ಎಂಟು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರತಿ ವರ್ಷ ದಸರಾ ಮಹೋತ್ಸವಕ್ಕೆ ಮೈಸೂರು ಸೇರಿದಂತೆ ನೆರೆ ಜಿಲ್ಲೆಗಳಿಂದ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ವಿದ್ಯುನ್ಮಾನ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬರೋಬ್ಬರಿ 12,100 ಸಿಸಿ ಟಿವಿ ಕ್ಯಾಮೆರಾಗಳ ಮೂಲಕ ಇಡೀ ದಸರಾ ಉತ್ಸವದ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ.
ಭದ್ರತೆಗಾಗಿ 8,407 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಸೆ.29ರಿಂದ ಅ.5ರವರೆಗೆ ಮೊದಲನೇ ಹಂತದಲ್ಲಿಭದ್ರತೆ ಕೈಗೊಳ್ಳಲಾಗಿದ್ದು, ಜಂಬೂ ಸವಾರಿ ನಡೆಯುವ ಕೊನೆಯ ದಿನ ಸೇರಿದಂತೆ ಅ.6ರಿಂದ 8ರವರೆಗೆ ಎರಡನೇ ಹಂತದಲ್ಲೂಸೂಕ್ತ ಭದ್ರತಾ ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ.
ದಸರಾ ಮಹೋತ್ಸವಕ್ಕೆ ಉಗ್ರರಿಂದ ಯಾವುದೇ ಭೀತಿಯಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪೊಲೀಸರನ್ನು ಕಡಿಮೆ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಸಿಸಿ ಟಿವಿ ಕ್ಯಾಮೆರಾಗಳನ್ನು ಹೆಚ್ಚಿನ ಮಟ್ಟದಲ್ಲಿಬಳಸಿಕೊಳ್ಳುವ ಮೂಲಕ ಇಡೀ ದಸರಾ ಮಹೋತ್ಸವದ ಕಾರ್ಯಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
-ಕೆ.ಟಿ.ಬಾಲಕೃಷ್ಣ, ನಗರ ಪೊಲೀಸ್ ಆಯುಕ್ತ.
ಪ್ರತಿ ವರ್ಷ ದಸರಾ ಮಹೋತ್ಸವಕ್ಕೆ ಮೈಸೂರು ಸೇರಿದಂತೆ ನೆರೆ ಜಿಲ್ಲೆಗಳಿಂದ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ವಿದ್ಯುನ್ಮಾನ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬರೋಬ್ಬರಿ 12,100 ಸಿಸಿ ಟಿವಿ ಕ್ಯಾಮೆರಾಗಳ ಮೂಲಕ ಇಡೀ ದಸರಾ ಉತ್ಸವದ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ.
ಭದ್ರತೆಗಾಗಿ 8,407 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಸೆ.29ರಿಂದ ಅ.5ರವರೆಗೆ ಮೊದಲನೇ ಹಂತದಲ್ಲಿಭದ್ರತೆ ಕೈಗೊಳ್ಳಲಾಗಿದ್ದು, ಜಂಬೂ ಸವಾರಿ ನಡೆಯುವ ಕೊನೆಯ ದಿನ ಸೇರಿದಂತೆ ಅ.6ರಿಂದ 8ರವರೆಗೆ ಎರಡನೇ ಹಂತದಲ್ಲೂಸೂಕ್ತ ಭದ್ರತಾ ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ.
ದಸರಾ ಮಹೋತ್ಸವಕ್ಕೆ ಉಗ್ರರಿಂದ ಯಾವುದೇ ಭೀತಿಯಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪೊಲೀಸರನ್ನು ಕಡಿಮೆ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಸಿಸಿ ಟಿವಿ ಕ್ಯಾಮೆರಾಗಳನ್ನು ಹೆಚ್ಚಿನ ಮಟ್ಟದಲ್ಲಿಬಳಸಿಕೊಳ್ಳುವ ಮೂಲಕ ಇಡೀ ದಸರಾ ಮಹೋತ್ಸವದ ಕಾರ್ಯಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
-ಕೆ.ಟಿ.ಬಾಲಕೃಷ್ಣ, ನಗರ ಪೊಲೀಸ್ ಆಯುಕ್ತ.