ಆ್ಯಪ್ನಗರ

ವಾಹನಗಳ ಹಾರ್ನ್ ಶಬ್ಧಕ್ಕೆ ತಾಲೀಮು ವೇಳೆ ಬೆದರಿದ ದಸರಾ ಆನೆಗಳು

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 12 ಆನೆಗಳು ಮಂಗಳವಾರ ರಾಜಮಾರ್ಗದಲ್ಲಿ ತಾಲೀಮು ನಡೆಸಿದವು. ಆದರೆ, ತಾಲೀಮು ನಡೆಸುವಾಗ ವಾಹನಗಳ ಶಬ್ಧಕ್ಕೆ ಬೆದರಿದ ಘಟನೆಯೂ ನಡೆದಿದೆ.

Vijaya Karnataka 11 Sep 2019, 9:47 am
ಮೈಸೂರು : ಜಂಬೂ ಸವಾರಿಯ ಕೇಂದ್ರ ಬಿಂದುವಾಗಿರುವ ಆನೆಗಳು ತಾಲೀಮು ನಡೆಸುತ್ತಿದ್ದಾಗ ವಾಹನಗಳ ಶಬ್ಧಕ್ಕೆ ಬೆದರಿದ ಘಟನೆ ಮೈಸೂರಿನಲ್ಲಿ ನಡೆದಿದೆ.
Vijaya Karnataka Web elephants threatened during workout
ವಾಹನಗಳ ಹಾರ್ನ್ ಶಬ್ಧಕ್ಕೆ ತಾಲೀಮು ವೇಳೆ ಬೆದರಿದ ದಸರಾ ಆನೆಗಳು


ಚಾಮರಾಜ ಒಡೆಯರ್‌ ವೃತ್ತದಿಂದ ಕೆ.ಆರ್‌.ವೃತ್ತದ ನಡುವೆ ಗಜಪಡೆ ಸಾಗುತ್ತಿದ್ದಾಗ ಆನೆಗಳು ಸ್ವಲ್ಪ ಬೆದರಿದವು. ಪುರಭವನದ ಕಡೆ ರಸ್ತೆಯಲ್ಲಿ ದ್ವಿಮುಖ ಸಂಚಾರವಿದ್ದ ಕಾರಣ ವಾಹನಗಳ ಹಾರನ್‌ ಸದ್ದಿಗೆ ಮೊದಲ ಬಾರಿಗೆ ತಾಲೀಮಿನಲ್ಲಿ ಭಾಗಿಯಾಗಿದ್ದ ಆನೆಗಳು ಸ್ವಲ್ಪ ಹೊತ್ತು ನಿಂತಲ್ಲೇ ನಿಂತಿದ್ದವು. ಮುಂಚೂಣಿಯಲ್ಲಿ ಸಾಗುತ್ತಿದ್ದ ಅರ್ಜುನನೂ ಆ ಆನೆಗಳತ್ತ ಮುಖಮಾಡಿ ನಿಂತು ನಂತರ ಹೊರಟನು.

ದಸರಾ ಆನೆಗಳ ತಾಲೀಮು : ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 12 ಆನೆಗಳು ಮಂಗಳವಾರ ರಾಜಮಾರ್ಗದಲ್ಲಿ ತಾಲೀಮು ನಡೆಸಿದವು.

ಮೊದಲ ಹಾಗೂ ಎರಡನೇ ತಂಡದ ಆನೆಗಳು ಅಂಬಾರಿ ಆನೆ 'ಅರ್ಜುನ'ನ ನೇತೃತ್ವದಲ್ಲಿ ತಾಲೀಮಿನಲ್ಲಿ ಹೆಜ್ಜೆ ಹಾಕಿದವು. 2ನೇ ತಂಡದಲ್ಲಿ ಬಂದಿದ್ದ 'ಬಲರಾಮ, ಕಾವೇರಿ, ವಿಕ್ರಮ, ದುರ್ಗಾಪರಮೇಶ್ವರಿ, ಜಯಪ್ರಕಾಶ್‌ ಹಾಗೂ ಲಕ್ಷ್ಮೀ ಆನೆಗಳು ಸಂಜೆ ಒಟ್ಟಿಗೆ ತಾಲೀಮು ನಡೆಸಿದವು.

ಗೋಪಿಗೆ ಅನಾರೋಗ್ಯ:
ಇದೇ ವೇಳೆ ಗೋಪಿ ಆನೆ ಅನಾರೋಗ್ಯದಿಂದಾಗಿ ತಾಲೀಮಿನಲ್ಲಿ ಭಾಗವಹಿಸಿರಲಿಲ್ಲ. ''ಗೋಪಿಗೆ ಬೇಧಿಯಾಗಿತ್ತು. ಹೀಗಾಗಿ ತಾಲೀಮಿಗೆ ಕರೆದೊಯ್ದಿರಲಿಲ್ಲ. ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಆರಾಮಾಗಿದ್ದಾನೆ,'' ಎಂದು ಪಶು ವೈದ್ಯ ಡಾ.ನಾಗರಾಜು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ