ಆ್ಯಪ್ನಗರ

ತುರ್ತು ಪರಿಸ್ಥಿತಿ ಹಿಂದೆ ಸ್ವಾರ್ಥವಿಲ್ಲ

ತುರ್ತು ಪರಿಸ್ಥಿತಿ ಘೋಷಣೆಯಲ್ಲಿ ಇಂದಿರಾ ಗಾಂಧಿ ಅವರ ಯಾವುದೇ ಸ್ವಾರ್ಥ ಮತ್ತು ರಾಜಕೀಯ ಉದ್ದೇಶವಿರಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌ ತಿಳಿಸಿದರು.

Vijaya Karnataka 19 Nov 2018, 5:00 am
ಮೈಸೂರು: ತುರ್ತು ಪರಿಸ್ಥಿತಿ ಘೋಷಣೆಯಲ್ಲಿ ಇಂದಿರಾ ಗಾಂಧಿ ಅವರ ಯಾವುದೇ ಸ್ವಾರ್ಥ ಮತ್ತು ರಾಜಕೀಯ ಉದ್ದೇಶವಿರಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌ ತಿಳಿಸಿದರು.
Vijaya Karnataka Web news/mysuru/emergency
ತುರ್ತು ಪರಿಸ್ಥಿತಿ ಹಿಂದೆ ಸ್ವಾರ್ಥವಿಲ್ಲ


ನಗರ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 101ನೇ ಜನ್ಮದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ''ಅಂತಾರಾಷ್ಟ್ರೀಯ ಮಟ್ಟದ ಗಲಭೆ ಮತ್ತು ದೇಶದ ಆಂತರಿಕ ವ್ಯತ್ಯಾಸಗಳನ್ನು ಸರಿದೂಗಿಸಿ ಗಣತಂತ್ರ ಒಕ್ಕೂಟ ವ್ಯವಸ್ಥೆಯನ್ನು ಶಾಂತಿಯುತವಾಗಿ ಮುನ್ನಡೆಸುವ ಏಕೈಕ ಉದ್ದೇಶದಿಂದ 1975ರಲ್ಲಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು.

''1975ರಲ್ಲಿ ಚೀನಾ ಗಡಿಭಾಗದಲ್ಲಿ ದೊಡ್ಡ ಮಟ್ಟದ ಗಲಭೆ, ಬಾಂಗ್ಲದೇಶದ ಅಧ್ಯಕ್ಷರಾದ ಶೇಖ್‌ ಮುಜಾಬೀರ್‌ ರೆಹಮಾನ್‌ ಖಾನ್‌ ಅವರ ಕಗ್ಗೊಲೆ ಮತ್ತು ಉತ್ತರ ಭಾರತದಲ್ಲಿ ಜೆಪಿ ಚಳವಳಿಯ ಅಸಹಕಾರ ಹಾಗೂ ಪಾಕಿಸ್ತಾನ, ಚೀನಾ ಗಡಿ ಭಾಗಗಳಲ್ಲಿ ಯುದ್ಧ ಸನ್ನದ್ಧತೆ ಇದ್ದ ಕಾರಣ ದೇಶದ ಏಕತೆಯನ್ನು ಕಾಪಾಡುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಘೋಷಿಸಿದರು,'' ಎಂದರು.

''ಭಾರತದ ಬಹಳಷ್ಟು ಮಂದಿ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಳು ಮತ್ತು ಕೆಲವು ಬಿಜೆಪಿಯ ಸ್ವಯಂ ಘೋಷಿತ ರಾಷ್ಟ್ರೀಯವಾದಿಗಳು 1975ರ ತುರ್ತು ಪರಿಸ್ಥಿತಿಯ ಘೋಷಣೆಯನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ದೇಶದ ಸಂವಿಧಾನದ ಪರಮೋಚ್ಛ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರ ಎಂದು ಟೀಕಿಸಿದ್ದವು. ಇದರಲ್ಲಿ ರಾಜಕೀಯಗೋಸ್ಕರ ವಿರೋಧಿಸಿದ್ದರೆ ವಿನಾ, ದೇಶದ ಸಮಗ್ರತೆ, ಏಕತೆ ದೃಷ್ಟಿಯಿಂದಲ್ಲ,'' ಎಂದು ಹೇಳಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಉಪಾಧ್ಯಕ್ಷಷ ಎ.ಆರ್‌.ಪ್ರಕಾಶ್‌ ಕುಮಾರ್‌, ಪ್ರಧಾನಕಾರ್ಯದರ್ಶಿ ಎಚ್‌.ಎಲ್‌.ಬಸವರಾಜ ನಾಯಕ, ಸೇವಾದಳ ಕಾಂಗ್ರೆಸ್‌ನ ಅಧ್ಯಕ್ಷೆ ಗೀತಾ, ಚಂದ್ರು, ಈಶ್ವರ್‌ ಚಕ್ಕಡಿ, ಆರ್‌.ಎಚ್‌.ಕುಮಾರ್‌, ವರುಣಾ ನಾಗರಾಜು, ದೊರೆಸ್ವಾಮಿ, ಮಹಿಳಾ ಕಾಂಗ್ರೆಸ್‌ ನಾಗರತ್ನ, ಕಮಲ, ಸುಶೀಲ ಚಂದ್ರಪ್ಪ ಮುಂತಾದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ