ಆ್ಯಪ್ನಗರ

ಉದ್ಯೋಗ ಭದ್ರತೆ ಖಿನ್ನತೆ: ನೆದರ್ಲೆಂಡ್‌ನಲ್ಲಿ ಚನ್ನಪಟ್ಟಣದ ಟೆಕ್ಕಿ ಆತ್ಮಹತ್ಯೆ

ಉದ್ಯೋಗ ಭದ್ರತೆಯ ಖಿನ್ನತೆಯಿಂದ ಬಳಲುತ್ತಿದ್ದ ಚನ್ನಪಟ್ಟಣ ಮೂಲದ ಟೆಕ್ಕಿಯೊಬ್ಬರು ನಾರ್ವೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಗುರುವಾರ ನಡೆದಿದೆ. ಮೃತದೇಹವನ್ನು ನೆದರ್ಲೆಂಡ್ಸ್ ನಿಂದ ತರುವ ನಿಟ್ಟಿನಲ್ಲಿ ಟೆಕ್ಕಿಯ ಕುಟುಂಬಿಕರು ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವು ಪಡೆಯಲು ನಿರ್ಧರಿಸಿದ್ದಾರೆ.

Vijaya Karnataka 4 Sep 2018, 11:31 am
ಮೈಸೂರು: ಉದ್ಯೋಗ ಭದ್ರತೆಯ ಖಿನ್ನತೆಯಿಂದ ಬಳಲುತ್ತಿದ್ದ ಚನ್ನಪಟ್ಟಣ ಮೂಲದ ಟೆಕ್ಕಿಯೊಬ್ಬರು ನಾರ್ವೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಗುರುವಾರ ನಡೆದಿದೆ. ಮೃತದೇಹವನ್ನು ನೆದರ್ಲೆಂಡ್ಸ್ ನಿಂದ ತರುವ ನಿಟ್ಟಿನಲ್ಲಿ ಟೆಕ್ಕಿಯ ಕುಟುಂಬಿಕರು ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವು ಪಡೆಯಲು ನಿರ್ಧರಿಸಿದ್ದಾರೆ.
Vijaya Karnataka Web Techie


ಶಿವಪ್ರಸಾದ್‌ ನೀಲಕಂಠಯ್ಯ ಸಾವಿಗೀಡಾದ ಟೆಕ್ಕಿ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಅವರು ನೆದರ್ಲೆಂಡ್‌ನ ಲಿಬರ್ಟಿ ಗ್ಲೋಬಲ್‌ ಎಂಬ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.

ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಂನಿಂದ 16 ಕಿ.ಮೀ ದೂರದಲ್ಲಿರುವ ಯುತ್ರೂನ್‌ ನಗರದಲ್ಲಿ ವಾಸವಿದ್ದ ಅವರು ತಾವು ವಾಸವಿದ್ದ ಮನೆಯ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದ್ಯೋಗಿ ಕರ್ನಾಟಕ ಮೂಲದ ಶಿವಾನಂದ್‌ ಎಂಬುವವರು ವಿಕಗೆ ತಿಳಿಸಿದ್ದಾರೆ.

ನೆದರ್ಲೆಂಡ್‌ನಲ್ಲಿ ಹಲವು ಕಂಪನಿಗಳು ಉದ್ಯೋಗಿಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತವೆ. ಅದೇ ರೀತಿ ಶಿವಪ್ರಸಾದ್‌ ಅವರೂ ಕೆಲಸ ಮಾಡುತ್ತಿದ್ದರು. ಇನ್ನೇನು ಅವರ ಕೆಲಸದ ಅವಧಿ ಮುಗಿಯುವುದರಲ್ಲಿತ್ತು. ಮುಂದೇನು ಮಾಡುವುದು ಎಂದು ಅವರು ಸದಾ ಯೋಚಿಸುತ್ತಿದ್ದರು. ಆದರೆ ಇಂಥ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ನಾನು ಬಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ಪೊಲೀಸರು ಕರೆ ಮಾಡಿ ಘಟನೆ ಬಗ್ಗೆ ವಿವರ ನೀಡಿ ಗುರುತು ಹಿಡಿಯಲು ಹೇಳಿದರು ಶಿವಪ್ರಸಾದ್‌ ಅವರನ್ನು ಗುರುತುಹಿಡಿದ ನಂತರ ಶವಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಮಂಗಳವಾರ ಶವಪರೀಕ್ಷೆ ಮುಗಿಯಲಿದೆ. ಅವರು ವಾಸವಿದ್ದ ಮನೆಯ ಮಾಲೀಕರೂ ಕೂಡ ಭಾರತೀಯರು ಹಾಗಾಗಿ ಅವರೂ ಕೂಡ ದಾಖಲೆಗಳನ್ನು ಪೂರೈಸಲು ಓಡಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಶಿವಪ್ರಸಾದ್‌ ಅವರಿಗೆ ಮದುವೆಯಾಗಿ ಒಂದು ಮಗುವಿದೆ. ತಿಂಗಳಿನಿಂದ ಇಲ್ಲಿದ್ದ ಅವರು ಕಳೆದ ಗುರುವಾರ ತವರಿಗೆ ಮರಳಿದ್ದರು ಎಂದು ಶಿವಾನಂದ್‌ ಹೇಳಿದ್ದಾರೆ.

ಮೂರ್ನಾಲ್ಕು ದಿನ ಹಿಡಿಯಬಹುದು: ಶಿವಪ್ರಸಾದ್‌ ಅವರ ಸಾವಿನ ವಿಷಯವನ್ನು ನೆದರ್ಲೆಂಡ್‌ನ ಭಾರತೀಯ ರಾಜತಾಂತ್ರಿಕ ಕಚೇರಿಗೆ ಮುಟ್ಟಿಸಲಾಗಿದೆ. ಅವರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಬಹಳಷ್ಟಿವೆ ಮೂರ್ನಾಲ್ಕು ದಿನಗಳಲ್ಲಿ ಶವವನ್ನು ತವರಿಗೆ ಕಳುಹಿಸಿಕೊಡುವ ಸಾಧ್ಯತೆಯಿದೆ ಎಂದು ಶಿವಾನಂದ್‌ ಹೇಳಿದ್ದಾರೆ.

ಆತಂಕದಲ್ಲಿ ಕುಟುಂಬ: ಸಾವಿನ ವಿಷಯ ತಿಳಿದ ಬೆಂಗಳೂರಿನಲ್ಲಿ ನೆಲೆಸಿರುವ ಪತ್ನಿ ರೂಪಾ ಹಾಗೂ ಶಿವಪ್ರಸಾದ್‌ ಅವರ ಸಹೋದರ ಪರಶಿವಮೂರ್ತಿ ಹಾಗೂ ಕುಟುಂಬದವರು ಆತಂಕದಲ್ಲಿದ್ದು ಘಟನೆಯ ಬಗ್ಗೆ ಖಚಿತತೆ ಇರದೆ ಪರದಾಡುತ್ತಿದ್ದಾರೆ. ನೆದರ್ಲೆಂಡ್‌ ರಾಜತಾಂತ್ರಿಕ ಕಚೇರಿ ಸಹಾಯವಾಣಿಗೂ ಕರೆ ಮಾಡಲು ಪ್ರಯತ್ನಿಸುತ್ತಿದ್ದು ಅದೂ ಕೂಡ ಸಾಧ್ಯವಾಗುತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ