ಆ್ಯಪ್ನಗರ

ಶೋಷಿತ ಸಮುದಾಯಕ್ಕೆ ಸಿಗದ ಸಮಾನತೆ

ಅಂಬೇಡ್ಕರ್ ದೇಶಕ್ಕೆ ವಿಶ್ವಮಾನ್ಯ ಸಂವಿಧಾನ ನೀಡಿದ್ದು, ದೌರ್ಜನ್ಯಕ್ಕೊಳಗಾದ ಜನರಿಗೆ ಇಂದಿಗೂ ಸಮಾನತೆ ಸಿಕ್ಕಿಲ್ಲ ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ನೇತಾರ ಡಾ.ವಿ.ಲಕ್ಷ್ಮೀನಾರಾಯಣ್ ವಿಷಾದಿಸಿದರು.

Vijaya Karnataka 21 Apr 2018, 5:15 am
ಹುಣಸೂರು: ಅಂಬೇಡ್ಕರ್ ದೇಶಕ್ಕೆ ವಿಶ್ವಮಾನ್ಯ ಸಂವಿಧಾನ ನೀಡಿದ್ದು, ದೌರ್ಜನ್ಯಕ್ಕೊಳಗಾದ ಜನರಿಗೆ ಇಂದಿಗೂ ಸಮಾನತೆ ಸಿಕ್ಕಿಲ್ಲ ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ನೇತಾರ ಡಾ.ವಿ.ಲಕ್ಷ್ಮೀನಾರಾಯಣ್ ವಿಷಾದಿಸಿದರು.
Vijaya Karnataka Web equality to the disadvantaged community
ಶೋಷಿತ ಸಮುದಾಯಕ್ಕೆ ಸಿಗದ ಸಮಾನತೆ


ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ದ.ಸಂ.ಸ ವತಿಯಿಂದ ಅಂಬೇಡ್ಕರ್ ಮತ್ತು ಬಸವ ಜಯಂತಿ ಅಂಗವಾಗಿ ಅಪಮೌಲ್ಯಗೊಳ್ಳುತ್ತಿರುವ ಮತದಾನ, ಕುಸಿಯುತ್ತಿರುವ ಜನತಂತ್ರದ ಅಂತ:ಸತ್ವ ಕುರಿತ ಜಾಗತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್‌ರ ಹೋರಾಟದ ಮೂಲ ತಿರುಳು ಶೋಷಿತ ಸಮುದಾಯಕ್ಕೆ ಎಲ್ಲರಿಗೂ ಸಮಾನತೆ, ಪ್ರಜಾಸತ್ತೆ ಸ್ಥಾಪಿಸುವುದು ಹಾಗೂ ಜಾತಿವಿನಾಶ ವಾಗಬೇಕು ಎನ್ನುವುದಾಗಿತ್ತು. ಆದರೆ, ಇದು ಸಾಧ್ಯ ವಾಗಿಲ್ಲ. ಹಾಗಿದ್ದರೆ ದಲಿತರ ಹೋರಾಟ ಹೇಗಿರಬೇಕು? ದೇಶದ ಅಂಬೇಡ್ಕರ್ ನೀಡಿರುವ ಸಂವಿಧಾನ ಒಂದಾ ದರೆ, ಇತರರು ಆಚರಿಸುತ್ತಿರುವ ಮನುಸತಿ ಸಂವಿಧಾನ ಕೊನೆಗಾಣಬೇಕಲ್ಲವೇ? ದಲಿತರು ಇವೆಲ್ಲದರ ವಿರುದ್ಧ ನೇತತ್ವ ವಹಿಸಿಕೊಂಡು ಹೋರಾಡಬೇಕಿದೆ ಎಂದರು.

ಅಂಬೇಡ್ಕರ್ ಸ್ಥಾಪಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಗೆ ಮರುಜೀವ ಕೊಡೋಣ. ಆ ಮೂಲಕ ರಾಜಕೀಯ ಅಧಿಕಾರ ಪಡೆಯುವ ಹೆಗ್ಗುರುತು ದಲಿತ ಸಮುದಾಯ ವಾಗಬೇಕು. ಇತರೆ ಸಮುದಾಯದಲ್ಲೂ ಇರುವ ಬಡವರನ್ನೂ ಸೇರಿಸಿಕೊಂಡು ಹೋರಾಟ ಆರಂಭಿಸಿ. ಕೇವಲ ಸಾಂಸ್ಕೃತಿಕ ಹೋರಾಟ ಸಾಕಾಗಲ್ಲ. ಯುದ್ಧೋಪಾದಿಯ ನಿರಂತರ ಹೋರಾಟ ನಡೆಸಿ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬದಲಾವಣೆ ನಿಮ್ಮ ಕೈಯಲ್ಲೇ ಇದೆ. ಹೋರಾಟವು ತಾರ್ಕಿಕ ಅಂತ್ಯ ಕಾಣದೇ ಬಿಡಬಾರದೆಂದು ತಿಳಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ವಿ.ರತಿರಾವ್, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ ಮಾತನಾಡಿದರು.

ಜಿಲ್ಲಾ ಸಂಚಾಲಕ ಹೆಗ್ಗನೂರು ನಿಂಗರಾಜು, ಬಿ.ಡಿ.ಶಿವಬುದ್ದಿ, ತಾಲೂಕು ಸಂಚಾಲಕ ರಾಮಕಷ್ಣ ಅತ್ತಿಗುಪ್ಪೆ, ಮಹಿಳಾ ಘಟಕದ ಸಂಚಾಲಕಿ ಮಹದೇವಮ್ಮ, ಡೇವಿಡ್, ರಾಜು ಚಿಕ್ಕಹುಣಸೂರು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ