ಮೈಸೂರು: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮೈಸೂರು ಘಟಕದ ಕಚೇರಿ ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾ ಯೂತ್ ರೆಡ್ಕ್ರಾಸ್ ಸಂಯೋಜನಾಧಿಕಾರಿ ಡಾ.ಎಂ.ಎಸ್.ಜಯಂತ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮೈಸೂರು ಜಿಲ್ಲಾಶಾಖೆ ವತಿಯಿಂದ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಯುವ ರೆಡ್ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದರು.
‘‘ರೆಡ್ಕ್ರಾಸ್ ಸಂಸ್ಥೆಗೆ ಮೈಸೂರಿನಲ್ಲಿ ಒಂದು ಅಸ್ಥಿತ್ವವಿಲ್ಲ. ರಕ್ತದಾನ ಮಾಡಬೇಕೆಂಬವರಿಗೆ ಸಂಸ್ಥೆಯ ಕಚೇರಿ ಎಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಮೈಸೂರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಲು ಜಾಗ ನೀಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಸಮಸ್ಯೆ,’’ತಿಳಿಸಿದರು.
‘‘ಇದಲ್ಲದೆ ನಗರದ ಲಲಿತಮಹಲ್ನಲ್ಲಿ ರೆಡ್ಕ್ರಾಸ್ ಸಂಸ್ಥೆ ಹುಂಡಿಯನ್ನು ಇಟ್ಟಿತ್ತು. ಅದು ಯಾವ ಕಾಲದಲ್ಲಿ ಇಟ್ಟಿತ್ತು ಎಂಬುದು ತಿಳಿದಿಲ್ಲ. ಆ ಹುಂಡಿ ಈಗ ಪೂರ್ಣಗೊಂಡಿದೆ. ಅದಲ್ಲಿರುವ ಹಣವನ್ನು ತೆಗೆದುಕೊಂಡು ಹೋಗುವಂತೆ ಲಲಿತಮಹಲ್ನವರು ತಿಳಿಸಿದ್ದಾರೆ. ಆದರೆ ಅದರ ಕೀಲಿಕೈ ಯಾರ ಬಳಿ ಇದೆ ತಿಳಿದಿಲ್ಲ. ಹೀಗಾಗಿ ಆ ಹುಂಡಿಯನ್ನು ತೆರೆಯಲು ಅವಕಾಶ ಮಾಡಿಕೊಡಬೇಕು,’’ ಎಂದರು.
ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ‘‘ದೇಶದಲ್ಲಿ ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಜರುಗಿದಾಗ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ರೆಡ್ಕ್ರಾಸ್ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತಿದೆ. ಇದರ ಬಗ್ಗೆ ಸಾಕಷ್ಟು ತರಬೇತಿ ಇರಬೇಕು. ಸರಕಾರ ಒಂದೇ ಎಲ್ಲವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಸರಕಾರದೊಂದಿಗೆ ಇಂತಹ ಸಂಸ್ಥೆಗಳು ಸಹ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಮೊದಲಿಗೆ ಸಂಘಟನೆ ಶಕ್ತಿಯುತವಾಗಿರಬೇಕು,’’ ಎಂದರು.
‘‘ರೆಡ್ಕ್ರಾಸ್ ಸಂಸ್ಥೆಯನ್ನು ಮೈಸೂರಿನಲ್ಲಿ ಶಕ್ತಿಯುತವಾಗಿ ಬಳಸಿಕೊಳ್ಳಲು, ಅದರ ವ್ಯಾಪ್ತಿಯನ್ನು ವಿಸ್ತರಿಸಲು ಜಿಲ್ಲಾಡಳಿತ ಆಲೋಚಿಸುತ್ತಿದೆ. ಹೀಗಾಗಿ ಇಂದಿನ ಸಮಾವೇಶದಲ್ಲಿ ಚರ್ಚೆಯಾಗುವ ವಿಚಾರಗಳು, ಸಲಹೆಗಳೊಂದಿಗೆ ಅಧಿಕಾರಿಗಳ ಸಲಹೆಗಳನ್ನು ಪಡೆದು ಸಭೆಯನ್ನು ಕರೆದು ಇದರ ಬಗ್ಗೆ ಚರ್ಚಿಸಲಾಗುವುದು,’’ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ ಸಂಸ್ಥೆಯ ಕೈಪಿಡಿ ಬಿಡುಗಡೆಗೊಳಿಸಿದರು. ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಎಸ್.ಶ್ರೀಕಂಠಸ್ವಾಮಿ, ಯೂತ್ ರೆಡ್ಕ್ರಾಸ್ ಸಂಸ್ಥೆ ಸದಸ್ಯ ಕಾರ್ಯದರ್ಶಿ ಡಾ.ದಿವಾಕರ್ ಚಾಂಡಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮೈಸೂರು ಜಿಲ್ಲಾ ಶಾಖೆಯ ಸಭಾಪತಿ ಡಾ.ಕೆ.ಬಿ.ಗುರುಮೂರ್ತಿ, ಜಂಟಿ ಕಾರ್ಯದರ್ಶಿ ಬಿ.ಎಸ್.ವನಜಾ ಇದ್ದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮೈಸೂರು ಜಿಲ್ಲಾಶಾಖೆ ವತಿಯಿಂದ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಯುವ ರೆಡ್ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದರು.
‘‘ರೆಡ್ಕ್ರಾಸ್ ಸಂಸ್ಥೆಗೆ ಮೈಸೂರಿನಲ್ಲಿ ಒಂದು ಅಸ್ಥಿತ್ವವಿಲ್ಲ. ರಕ್ತದಾನ ಮಾಡಬೇಕೆಂಬವರಿಗೆ ಸಂಸ್ಥೆಯ ಕಚೇರಿ ಎಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಮೈಸೂರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಲು ಜಾಗ ನೀಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಸಮಸ್ಯೆ,’’ತಿಳಿಸಿದರು.
‘‘ಇದಲ್ಲದೆ ನಗರದ ಲಲಿತಮಹಲ್ನಲ್ಲಿ ರೆಡ್ಕ್ರಾಸ್ ಸಂಸ್ಥೆ ಹುಂಡಿಯನ್ನು ಇಟ್ಟಿತ್ತು. ಅದು ಯಾವ ಕಾಲದಲ್ಲಿ ಇಟ್ಟಿತ್ತು ಎಂಬುದು ತಿಳಿದಿಲ್ಲ. ಆ ಹುಂಡಿ ಈಗ ಪೂರ್ಣಗೊಂಡಿದೆ. ಅದಲ್ಲಿರುವ ಹಣವನ್ನು ತೆಗೆದುಕೊಂಡು ಹೋಗುವಂತೆ ಲಲಿತಮಹಲ್ನವರು ತಿಳಿಸಿದ್ದಾರೆ. ಆದರೆ ಅದರ ಕೀಲಿಕೈ ಯಾರ ಬಳಿ ಇದೆ ತಿಳಿದಿಲ್ಲ. ಹೀಗಾಗಿ ಆ ಹುಂಡಿಯನ್ನು ತೆರೆಯಲು ಅವಕಾಶ ಮಾಡಿಕೊಡಬೇಕು,’’ ಎಂದರು.
ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ‘‘ದೇಶದಲ್ಲಿ ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಜರುಗಿದಾಗ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ರೆಡ್ಕ್ರಾಸ್ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತಿದೆ. ಇದರ ಬಗ್ಗೆ ಸಾಕಷ್ಟು ತರಬೇತಿ ಇರಬೇಕು. ಸರಕಾರ ಒಂದೇ ಎಲ್ಲವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಸರಕಾರದೊಂದಿಗೆ ಇಂತಹ ಸಂಸ್ಥೆಗಳು ಸಹ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಮೊದಲಿಗೆ ಸಂಘಟನೆ ಶಕ್ತಿಯುತವಾಗಿರಬೇಕು,’’ ಎಂದರು.
‘‘ರೆಡ್ಕ್ರಾಸ್ ಸಂಸ್ಥೆಯನ್ನು ಮೈಸೂರಿನಲ್ಲಿ ಶಕ್ತಿಯುತವಾಗಿ ಬಳಸಿಕೊಳ್ಳಲು, ಅದರ ವ್ಯಾಪ್ತಿಯನ್ನು ವಿಸ್ತರಿಸಲು ಜಿಲ್ಲಾಡಳಿತ ಆಲೋಚಿಸುತ್ತಿದೆ. ಹೀಗಾಗಿ ಇಂದಿನ ಸಮಾವೇಶದಲ್ಲಿ ಚರ್ಚೆಯಾಗುವ ವಿಚಾರಗಳು, ಸಲಹೆಗಳೊಂದಿಗೆ ಅಧಿಕಾರಿಗಳ ಸಲಹೆಗಳನ್ನು ಪಡೆದು ಸಭೆಯನ್ನು ಕರೆದು ಇದರ ಬಗ್ಗೆ ಚರ್ಚಿಸಲಾಗುವುದು,’’ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ ಸಂಸ್ಥೆಯ ಕೈಪಿಡಿ ಬಿಡುಗಡೆಗೊಳಿಸಿದರು. ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಎಸ್.ಶ್ರೀಕಂಠಸ್ವಾಮಿ, ಯೂತ್ ರೆಡ್ಕ್ರಾಸ್ ಸಂಸ್ಥೆ ಸದಸ್ಯ ಕಾರ್ಯದರ್ಶಿ ಡಾ.ದಿವಾಕರ್ ಚಾಂಡಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮೈಸೂರು ಜಿಲ್ಲಾ ಶಾಖೆಯ ಸಭಾಪತಿ ಡಾ.ಕೆ.ಬಿ.ಗುರುಮೂರ್ತಿ, ಜಂಟಿ ಕಾರ್ಯದರ್ಶಿ ಬಿ.ಎಸ್.ವನಜಾ ಇದ್ದರು.