ಮೈಸೂರು: ಮೈಸೂರಿನಲ್ಲಿ ಶೀಘ್ರದಲ್ಲೇ ರಫ್ತು ಕೇಂದ್ರ (ಎಕ್ಸ್ಪೋರ್ಟ್ ಹಬ್)ಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಕೆ. ಲಿಂಗರಾಜು ಹೇಳಿದರು. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ನಾನಾ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 'ವಾಣಿಜ್ಯ ಸಪ್ತಾಹ - ರಫ್ತುದಾರರ ಸಮಾವೇಶ'ದಲ್ಲಿ ಮಾತನಾಡಿದ ಅವರು, 'ಪ್ರತಿ ಜಿಲ್ಲೆಯನ್ನೂ ಎಕ್ಸ್ಪೋರ್ಟ್ ಹಬ್ ಅನ್ನಾಗಿ ಮಾಡಬೇಕೆಂಬುದು ಪ್ರಧಾನ ಮಂತ್ರಿಗಳ ಮಹದಾಸೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ರಫ್ತು ಕೇಂದ್ರದ ಕಮಿಟಿ ರಚಿಸಿದ್ದು, 5-6 ಕೋಟಿ ರೂ. ವೆಚ್ಚದಲ್ಲಿ ಎಕ್ಸ್ಪೋರ್ಟ್ ಹೌಸ್ ಕೂಡ ನಿರ್ಮಾಣ ಹಂತದಲ್ಲಿದೆ. ಸದ್ಯದಲ್ಲೇ ಪೂರ್ಣಗೊಂಡು ಕಾರ್ಯನಿರ್ವಹಿಸಲಿದೆ. ಆ ಮೂಲಕ ರಫ್ತುದಾರರಿಗೆ ಸಮಗ್ರ ಮಾಹಿತಿ, ನೆರವು ನೀಡುವುದು ಇದರ ಉದ್ದೇಶವಾಗಿದೆ'ಎಂದರು.
ಮೈಸೂರಿನಲ್ಲಿ 9 ಭೌಗೋಳಿಕ ವೈಶಿಷ್ಟ್ಯ: 'ರಾಜ್ಯದಲ್ಲಿ 48 ಭೌಗೋಳಿಕ ವೈಶಿಷ್ಟ್ಯ (ಜಿಯೋಗ್ರಾಫಿಕಲ್ ಇಂಡಿಕೇಷನ್)ಗಳಿದ್ದು, ಅದರಲ್ಲಿ 9 ಮೈಸೂರು ಜಿಲ್ಲೆಯ ಉತ್ಪನ್ನಗಳಾಗಿವೆ. ಮೈಸೂರು ಮಲ್ಲಿಗೆ, ಕರಕುಶಲ, ಇನ್ಲೆಕಲೆ ಸೇರಿದಂತೆ 9 ಜಿಐಗೆ ಒತ್ತು ಕೊಟ್ಟು ರಫ್ತು ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವಾಣಿಜ್ಯ ಸಪ್ತಾಹ - ರಫ್ತುದಾರರ ಸಮಾವೇಶ ಹಮ್ಮಿಕೊಂಡಿದ್ದೇವೆ' ಎಂದರು.
ಸರಕು ರಫ್ತುದಾರರಿಗೆ ಎದುರಾಗುವ ಸಮಸ್ಯೆ, ಸವಾಲು, ಬದಲಾವಣೆ, ಕೇಂದ್ರ ಮತ್ತು ರಾಜ್ಯದ ಸರಕಾರದಿಂದ ದೊರೆಯುವ ಸೌಲಭ್ಯ ಮತ್ತಿತರ ವಿಷಯಗಳ ಕುರಿತು ತಜ್ಞರು ಮಾಹಿತಿ ನೀಡಿದರು.
ಜಿಪಂ ಸಿಇಒ ಎ. ಎಂ. ಯೋಗೀಶ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ. ಗೋಪಿನಾಥ್, ಚೇಂಬರ್ ಆಫ್ ಕಾಮರ್ಸ್ನ ಸತೀಶ್, ಹಿಮಾ ಅಸೋಸಿಯೇಷನ್ನ ಸುಬ್ರಹ್ಮಣ್ಯ, ಪರಿಶಿಷ್ಟ ಜಾತಿ, ಪಂಗಡದ ಮಂಜುನಾಥ್, ಮೈಸೂರು ಕೈಗಾರಿಕಾ ಸಂಘದ ಸುರೇಶ್ ಕುಮಾರ್ ಜೈನ್, ಬೆಂಗಳೂರಿನ ಡಿಜಿಎಫ್ಟಿ ಕಚೇರಿಯ ರಾಜಕುಮಾರ್, ಜಿಲ್ಲಾ ಮಟ್ಟದ ಎಕ್ಸ್ಪೋರ್ಟ್ ಕಮಿಟಿ ಸದಸ್ಯರು, ಉದ್ಯಮಿದಾರರು, ಕೈಗಾರಿಕೋದ್ಯಮಿಗಳು ಇದ್ದರು.
ಸೇವಾ ವಲಯದಲ್ಲಿ ಮೈಸೂರು ನಂ.2
ಸೇವಾ ವಲಯದಲ್ಲಿ ಬೆಂಗಳೂರು ನಂತರ ಮೈಸೂರು ಎರಡನೇ ಸ್ಥಾನದಲ್ಲಿದ್ದು, ಸರಕು ರಫ್ತು ವಹಿವಾಟಿನಲ್ಲಿ ರಾಜ್ಯದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಕೆ. ಲಿಂಗರಾಜು ತಿಳಿಸಿದರು.
'2020 ಸೆಪ್ಟೆಂಬರ್ನಿಂದ ಮಾರ್ಚ್ 2021ರ ವರೆಗೆ ಜಿಲ್ಲೆಯಿಂದ 2,914 ಕೋಟಿ ರೂ.ನಷ್ಟು ಸರಕು ರಫ್ತು ವಹಿವಾಟು ನಡೆಸಿದೆ. ಮೈಸೂರಿನಲ್ಲಿ ಸುಮಾರು 157 ಘಟಕಗಳಿಂದ ಅಮೆರಿಕ, ಜರ್ಮನಿ, ವಿಯಟ್ನಾಂ, ಅರಬ್ ರಾಷ್ಟ್ರ ಸೇರಿದಂತೆ ಸುಮಾರು 63 ದೇಶಗಳಿಗೆ ನಾನಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಟಿವಿಎಸ್, ಜೆ. ಕೆ. ಟೈರ್ಸ್, ಆಟೋಮೆಟಿವ್ ಎಕ್ಸೆಲ್, ರಂಗರಾವ್ ಆ್ಯಂಡ್ ಸನ್ಸ್ ಸೇರಿದಂತೆ ನಾನಾ ಪ್ರಮುಖ ಸಂಸ್ಥೆಗಳ ಉತ್ಪನ್ನಗಳು ಒಳಗೊಂಡಿದೆ' ಎಂದು ಹೇಳಿದರು.
'ಇದಲ್ಲದೆ ಜಿಲ್ಲೆಯಿಂದ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್, ಮಸಾಲ ಪದಾರ್ಥಗಳು, ಕಬ್ಬಿಣ ಸಾಮಗ್ರಿ, ಸಾಫ್ಟ್ವೇರ್, ಪ್ಲೈವುಡ್ಗೆ ಸಂಬಂಧಿಸಿದ ವಸ್ತುಗಳು, ಸಿದ್ಧ ಉಡುಪುಗಳು, ಔಷಧ, ಆಭರಣ, ಕರಕುಶಲ ವಸ್ತುಗಳು, ಕಾಫಿ, ಉಣ್ಣೆ ಉತ್ಪನ್ನಗಳು, ಗ್ರಾನೈಟ್, ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಪ್ರಮುಖ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಜಿಲ್ಲೆಯೂ ಪ್ರಮುಖ ಪಾತ್ರ ವಹಿಸಿದೆ' ಎಂದು ತಿಳಿಸಿದರು.
'ಜತೆಗೆ ರೇಷ್ಮೆ ಉತ್ಪನ್ನಗಳು, ಮೈಸೂರು ಸಿಲ್ಕ್ಸ್, ಕೃಷಿ ಜತೆಗೆ ಹತ್ತು ಹಲವು ಉತ್ಪನ್ನಗಳನ್ನು ತನ್ನದೇ ಆದ ಬ್ರ್ಯಾಂಡ್ನಡಿಯಲ್ಲಿ ನಾನಾ ದೇಶಗಳಿಗೆ ಎಕ್ಸ್ಪೋರ್ಟ್ ಮಾಡಲಾಗುತ್ತಿದೆ' ಎಂದು ಮಾಹಿತಿ ನೀಡಿದರು.
ರಫ್ತು ವಹಿವಾಟಿನಲ್ಲೂ ಮುಂಚೂಣಿಯಲ್ಲಿರಿ
ಸೇವಾ ವಲಯದಲ್ಲಿ ಜಿಲ್ಲೆಉತ್ತಮ ಸ್ಥಿತಿಯಲ್ಲಿದೆ. ಅದೇ ರೀತಿ ಸರಕು ರಫ್ತಿನಲ್ಲೂ ಉತ್ತಮ ಸ್ಥಾನ ಹೊಂದಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 'ಮೈಸೂರಿನಲ್ಲಿ ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಸಂಸ್ಥೆಗಳು ವಿಶ್ವ ಮಾನ್ಯತೆ ಗಳಿಸಿ ಸೇವೆ ಒದಗಿಸುತ್ತಿವೆ. ಅದೇ ರೀತಿ ಸರಕು ರಫ್ತು ವಹಿವಾಟಿನಲ್ಲೂ ಜಗತ್ತಿನಾದ್ಯಂತ ಪಸರಿಸಬೇಕಿದೆ' ಎಂದು ಹೇಳಿದರು. 'ನೆಸ್ಲೆ ಇಂಡಿಯಾ, ಪಿಡಿಲೈಟ್ ಮೊನೊಪಲಿಯಾಗಿದ್ದು, ಅದರಂತೆ ರಾಜರತ್ನ, ಜೆ. ಕೆ. ಟೈರ್ಸ್ ಮತ್ತಿತರ ಸಂಸ್ಥೆಯ ಉತ್ಪನ್ನಗಳು ವಿಶ್ವದಾದ್ಯಂತ ಮಾರುಕಟ್ಟೆಯನ್ನು ಆವರಿಸಿಕೊಳ್ಳಬೇಕಿದೆ. ಇದಕ್ಕಾಗಿ ಸರಕಾರ, ಜಿಲ್ಲಾಡಳಿತ ನಿಮಗೆ ಉತ್ತೇಜನ ನೀಡಲಿದೆ' ಎಂದು ಹೇಳಿದರು.
ಮೈಸೂರಿನಲ್ಲಿ 9 ಭೌಗೋಳಿಕ ವೈಶಿಷ್ಟ್ಯ: 'ರಾಜ್ಯದಲ್ಲಿ 48 ಭೌಗೋಳಿಕ ವೈಶಿಷ್ಟ್ಯ (ಜಿಯೋಗ್ರಾಫಿಕಲ್ ಇಂಡಿಕೇಷನ್)ಗಳಿದ್ದು, ಅದರಲ್ಲಿ 9 ಮೈಸೂರು ಜಿಲ್ಲೆಯ ಉತ್ಪನ್ನಗಳಾಗಿವೆ. ಮೈಸೂರು ಮಲ್ಲಿಗೆ, ಕರಕುಶಲ, ಇನ್ಲೆಕಲೆ ಸೇರಿದಂತೆ 9 ಜಿಐಗೆ ಒತ್ತು ಕೊಟ್ಟು ರಫ್ತು ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವಾಣಿಜ್ಯ ಸಪ್ತಾಹ - ರಫ್ತುದಾರರ ಸಮಾವೇಶ ಹಮ್ಮಿಕೊಂಡಿದ್ದೇವೆ' ಎಂದರು.
ಸರಕು ರಫ್ತುದಾರರಿಗೆ ಎದುರಾಗುವ ಸಮಸ್ಯೆ, ಸವಾಲು, ಬದಲಾವಣೆ, ಕೇಂದ್ರ ಮತ್ತು ರಾಜ್ಯದ ಸರಕಾರದಿಂದ ದೊರೆಯುವ ಸೌಲಭ್ಯ ಮತ್ತಿತರ ವಿಷಯಗಳ ಕುರಿತು ತಜ್ಞರು ಮಾಹಿತಿ ನೀಡಿದರು.
ಜಿಪಂ ಸಿಇಒ ಎ. ಎಂ. ಯೋಗೀಶ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ. ಗೋಪಿನಾಥ್, ಚೇಂಬರ್ ಆಫ್ ಕಾಮರ್ಸ್ನ ಸತೀಶ್, ಹಿಮಾ ಅಸೋಸಿಯೇಷನ್ನ ಸುಬ್ರಹ್ಮಣ್ಯ, ಪರಿಶಿಷ್ಟ ಜಾತಿ, ಪಂಗಡದ ಮಂಜುನಾಥ್, ಮೈಸೂರು ಕೈಗಾರಿಕಾ ಸಂಘದ ಸುರೇಶ್ ಕುಮಾರ್ ಜೈನ್, ಬೆಂಗಳೂರಿನ ಡಿಜಿಎಫ್ಟಿ ಕಚೇರಿಯ ರಾಜಕುಮಾರ್, ಜಿಲ್ಲಾ ಮಟ್ಟದ ಎಕ್ಸ್ಪೋರ್ಟ್ ಕಮಿಟಿ ಸದಸ್ಯರು, ಉದ್ಯಮಿದಾರರು, ಕೈಗಾರಿಕೋದ್ಯಮಿಗಳು ಇದ್ದರು.
ಸೇವಾ ವಲಯದಲ್ಲಿ ಮೈಸೂರು ನಂ.2
ಸೇವಾ ವಲಯದಲ್ಲಿ ಬೆಂಗಳೂರು ನಂತರ ಮೈಸೂರು ಎರಡನೇ ಸ್ಥಾನದಲ್ಲಿದ್ದು, ಸರಕು ರಫ್ತು ವಹಿವಾಟಿನಲ್ಲಿ ರಾಜ್ಯದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಕೆ. ಲಿಂಗರಾಜು ತಿಳಿಸಿದರು.
'2020 ಸೆಪ್ಟೆಂಬರ್ನಿಂದ ಮಾರ್ಚ್ 2021ರ ವರೆಗೆ ಜಿಲ್ಲೆಯಿಂದ 2,914 ಕೋಟಿ ರೂ.ನಷ್ಟು ಸರಕು ರಫ್ತು ವಹಿವಾಟು ನಡೆಸಿದೆ. ಮೈಸೂರಿನಲ್ಲಿ ಸುಮಾರು 157 ಘಟಕಗಳಿಂದ ಅಮೆರಿಕ, ಜರ್ಮನಿ, ವಿಯಟ್ನಾಂ, ಅರಬ್ ರಾಷ್ಟ್ರ ಸೇರಿದಂತೆ ಸುಮಾರು 63 ದೇಶಗಳಿಗೆ ನಾನಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಟಿವಿಎಸ್, ಜೆ. ಕೆ. ಟೈರ್ಸ್, ಆಟೋಮೆಟಿವ್ ಎಕ್ಸೆಲ್, ರಂಗರಾವ್ ಆ್ಯಂಡ್ ಸನ್ಸ್ ಸೇರಿದಂತೆ ನಾನಾ ಪ್ರಮುಖ ಸಂಸ್ಥೆಗಳ ಉತ್ಪನ್ನಗಳು ಒಳಗೊಂಡಿದೆ' ಎಂದು ಹೇಳಿದರು.
'ಇದಲ್ಲದೆ ಜಿಲ್ಲೆಯಿಂದ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್, ಮಸಾಲ ಪದಾರ್ಥಗಳು, ಕಬ್ಬಿಣ ಸಾಮಗ್ರಿ, ಸಾಫ್ಟ್ವೇರ್, ಪ್ಲೈವುಡ್ಗೆ ಸಂಬಂಧಿಸಿದ ವಸ್ತುಗಳು, ಸಿದ್ಧ ಉಡುಪುಗಳು, ಔಷಧ, ಆಭರಣ, ಕರಕುಶಲ ವಸ್ತುಗಳು, ಕಾಫಿ, ಉಣ್ಣೆ ಉತ್ಪನ್ನಗಳು, ಗ್ರಾನೈಟ್, ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಪ್ರಮುಖ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಜಿಲ್ಲೆಯೂ ಪ್ರಮುಖ ಪಾತ್ರ ವಹಿಸಿದೆ' ಎಂದು ತಿಳಿಸಿದರು.
'ಜತೆಗೆ ರೇಷ್ಮೆ ಉತ್ಪನ್ನಗಳು, ಮೈಸೂರು ಸಿಲ್ಕ್ಸ್, ಕೃಷಿ ಜತೆಗೆ ಹತ್ತು ಹಲವು ಉತ್ಪನ್ನಗಳನ್ನು ತನ್ನದೇ ಆದ ಬ್ರ್ಯಾಂಡ್ನಡಿಯಲ್ಲಿ ನಾನಾ ದೇಶಗಳಿಗೆ ಎಕ್ಸ್ಪೋರ್ಟ್ ಮಾಡಲಾಗುತ್ತಿದೆ' ಎಂದು ಮಾಹಿತಿ ನೀಡಿದರು.
ರಫ್ತು ವಹಿವಾಟಿನಲ್ಲೂ ಮುಂಚೂಣಿಯಲ್ಲಿರಿ
ಸೇವಾ ವಲಯದಲ್ಲಿ ಜಿಲ್ಲೆಉತ್ತಮ ಸ್ಥಿತಿಯಲ್ಲಿದೆ. ಅದೇ ರೀತಿ ಸರಕು ರಫ್ತಿನಲ್ಲೂ ಉತ್ತಮ ಸ್ಥಾನ ಹೊಂದಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 'ಮೈಸೂರಿನಲ್ಲಿ ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಸಂಸ್ಥೆಗಳು ವಿಶ್ವ ಮಾನ್ಯತೆ ಗಳಿಸಿ ಸೇವೆ ಒದಗಿಸುತ್ತಿವೆ. ಅದೇ ರೀತಿ ಸರಕು ರಫ್ತು ವಹಿವಾಟಿನಲ್ಲೂ ಜಗತ್ತಿನಾದ್ಯಂತ ಪಸರಿಸಬೇಕಿದೆ' ಎಂದು ಹೇಳಿದರು. 'ನೆಸ್ಲೆ ಇಂಡಿಯಾ, ಪಿಡಿಲೈಟ್ ಮೊನೊಪಲಿಯಾಗಿದ್ದು, ಅದರಂತೆ ರಾಜರತ್ನ, ಜೆ. ಕೆ. ಟೈರ್ಸ್ ಮತ್ತಿತರ ಸಂಸ್ಥೆಯ ಉತ್ಪನ್ನಗಳು ವಿಶ್ವದಾದ್ಯಂತ ಮಾರುಕಟ್ಟೆಯನ್ನು ಆವರಿಸಿಕೊಳ್ಳಬೇಕಿದೆ. ಇದಕ್ಕಾಗಿ ಸರಕಾರ, ಜಿಲ್ಲಾಡಳಿತ ನಿಮಗೆ ಉತ್ತೇಜನ ನೀಡಲಿದೆ' ಎಂದು ಹೇಳಿದರು.