ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಮುಡಾ ನಿವೇಶನ ಮಾರಾಟ ಮಾಡಿದ್ದ ವ್ಯಕ್ತಿಯ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿದ ವೆಂಕಟೇಶ್ ಸೇರಿದಂತೆ ಎಂ.ಬಿ.ವಿಠಲ್, ಸೀತಾದೇವಿ ಮತ್ತು ಡಿ.ಹಾಪುರಾಮ್ ಚೌಧರಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರಂ ಬಡಾವಣೆಯಲ್ಲಿನ ಮುಡಾದ 35*40 ಅಳತೆಯ ನಿವೇಶನವನ್ನು ವೆಂಕಟೇಶ್ ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಎಂ.ಬಿ.ವಿಠಲ್ ಎಂಬುವರಿಗೆ ಮಾರಾಟ ಮಾಡಿದ್ದು, ಅವರು ಅದನ್ನು ಸೀತಾದೇವಿ ಮತ್ತು ಡಿ.ಹಾಪುರಾಮ್ಚೌಧರಿ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಇವರಿಬ್ಬರು ಸ್ಥಳದಲ್ಲಿಕಟ್ಟಡ ನಿರ್ಮಿಸುತ್ತಿದ್ದು, ಈ ಬಗ್ಗೆ ಮುಡಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ ಇರುವುದು ಕಂಡು ಬಂದಿದೆ.
ಈ ಸಂಬಂಧ ಮುಡಾ ವಲಯ ಅಧಿಕಾರಿ ಭಾಸ್ಕರ್ ಅವರು ಈ ನಾಲ್ವರ ವಿರುದ್ಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿದ ವೆಂಕಟೇಶ್ ಸೇರಿದಂತೆ ಎಂ.ಬಿ.ವಿಠಲ್, ಸೀತಾದೇವಿ ಮತ್ತು ಡಿ.ಹಾಪುರಾಮ್ ಚೌಧರಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರಂ ಬಡಾವಣೆಯಲ್ಲಿನ ಮುಡಾದ 35*40 ಅಳತೆಯ ನಿವೇಶನವನ್ನು ವೆಂಕಟೇಶ್ ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಎಂ.ಬಿ.ವಿಠಲ್ ಎಂಬುವರಿಗೆ ಮಾರಾಟ ಮಾಡಿದ್ದು, ಅವರು ಅದನ್ನು ಸೀತಾದೇವಿ ಮತ್ತು ಡಿ.ಹಾಪುರಾಮ್ಚೌಧರಿ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಇವರಿಬ್ಬರು ಸ್ಥಳದಲ್ಲಿಕಟ್ಟಡ ನಿರ್ಮಿಸುತ್ತಿದ್ದು, ಈ ಬಗ್ಗೆ ಮುಡಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ ಇರುವುದು ಕಂಡು ಬಂದಿದೆ.
ಈ ಸಂಬಂಧ ಮುಡಾ ವಲಯ ಅಧಿಕಾರಿ ಭಾಸ್ಕರ್ ಅವರು ಈ ನಾಲ್ವರ ವಿರುದ್ಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.