ಆ್ಯಪ್ನಗರ

ಸಾಲ ಮನ್ನಾ ಆಗದಿದ್ದಕ್ಕೆ ಬೇಸರ: ಯುವ ರೈತ ಆತ್ಮಹತ್ಯೆ

ಸಾಲ ಮನ್ನಾ ಯೋಜನೆಯಡಿ ತಂಬಾಕು ಬೆಳೆಗಾಗಿ ಮಾಡಿದ್ದ ಬ್ಯಾಂಕ್‌ ಸಾಲ ಮನ್ನಾ ಆಗದಿರುವುದು ಹಾಗೂ ತಂಬಾಕು ಬೆಳೆ ಕೈಕೊಟ್ಟ ಪರಿಣಾಮ ...

Vijaya Karnataka 28 Jul 2019, 5:00 am
ಹುಣಸೂರು: ಸಾಲ ಮನ್ನಾ ಯೋಜನೆಯಡಿ ತಂಬಾಕು ಬೆಳೆಗಾಗಿ ಮಾಡಿದ್ದ ಬ್ಯಾಂಕ್‌ ಸಾಲ ಮನ್ನಾ ಆಗದಿರುವುದು ಹಾಗೂ ತಂಬಾಕು ಬೆಳೆ ಕೈಕೊಟ್ಟ ಪರಿಣಾಮ ಸಾಲಬಾಧೆಯಿಂದ ಬೇಸತ್ತ ಯುವ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ.
Vijaya Karnataka Web farmer suicide
ಸಾಲ ಮನ್ನಾ ಆಗದಿದ್ದಕ್ಕೆ ಬೇಸರ: ಯುವ ರೈತ ಆತ್ಮಹತ್ಯೆ


ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸ ವಾರಂಚಿ ಗ್ರಾಮದ ಲೇ.ಸುಬ್ಬೇಗೌಡ ಅವರ ಪುತ್ರ ಮಂಜೇಗೌಡ(30) ಮೃತರು. ತಾಯಿ ಮತ್ತು ಒಬ್ಬ ಸಹೋದರ, ನಾಲ್ವರು ಸಹೋದರಿಯರಿದ್ದಾರೆ.

''ಕುಟುಂಬ 3.36 ಎಕರೆ ಜಮೀನು ಹೊಂದಿದ್ದು, ತಂಬಾಕು, ಮುಸುಕಿನ ಜೋಳ ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಗುರುಪುರ ಎಸ್‌ಬಿಐ ಬ್ಯಾಂಕಿನಲ್ಲಿ 1,90 ಲಕ್ಷ ರೂ. ಜಂಟಿ ಬೆಳೆ ಸಾಲ ಹಾಗೂ 3.50 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದ ಮಂಜೇಗೌಡ ಜುಗುಪ್ಸೆಗೊಂಡು ನಮ್ಮ ಮನೆ ಬಳಿಯ ಬ್ಯಾರನ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,'' ಎಂದು ಸಹೋದರ ಶಿವರುದ್ರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ