ಮೈಸೂರು : ಅ.12ರಿಂದ ರೈತ ದಸರಾ ಉಪ ಸಮಿತಿ ವತಿಯಿಂದ ಜೆ.ಕೆ.ಮೈದಾನದಲ್ಲಿ ರೈತ ದಸರಾ ಆಧಿರಂಭಧಿಗೊಧಿಳ್ಳಧಿಲಿದ್ದು, ಕೃಷಿ ಸಚಿವ ಎನ್.ಎಚ್.ಶಿವಶಂಕರ್ ಚಾಲನೆ ನೀಡಲಿದ್ದಾರೆ.
ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಪೂಜಾ ಕುಣಿತ, ಕಂಸಾಲೆ, ಗಾಡಿಗೊಂಬೆ, ನಂದಿಧ್ವಜ, ಡೊಳ್ಳುಕುಣಿತ, ನಗಾರಿ, ಕರಡಿಕುಣಿತ, ಕೊಂಬುಕಹಳೆಯೊಂದಿಗೆ ಮೆರವಣಿಗೆ ಸಾಗಲಿದೆ. ಮೆಧಿರಧಿವಧಿಣಿಗೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ, ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಉತ್ತಮ ವಿಸ್ತರಣಾ ಕಾರ್ಯಕರ್ತರಿಗೆ ಸನ್ಮಾನಿಸಲಾಗುವುದು.
ನಂತರ ರೈತರು ಹಾಗೂ ವಿಜ್ಞಾನಿಗಳ ಜತೆ ಸಂವಾದ ನಡೆಯಲಿದೆ. ಇಸ್ರೇಲ್ ಮಾದರಿ ಕೃಷಿ ಹಾಗೂ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕುರಿತು ಚರ್ಚೆ ನಡೆಯುತ್ತದೆ.
ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ 30 ಮಳಿಗೆಗಳು ಇರಲಿದೆ, ಪಶುಪಾಲನಾ ಇಲಾಖೆಯಿಂದ 15 ಸ್ವಾಲ್ ಗಳಲ್ಲಿ ವಿವಿಧ ರೀತಿಯ ಪಶು, ಸಾಕು ಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಅಲಂಕಾರಿಕ ಮೀನುಗಳ ಪ್ರದರ್ಶನ ಆಕರ್ಷಣೆಯಾಗಲಿದೆ.
ಅ.13ರಂದು ರೈತ ದಸರಾ ಕ್ರೀಡಾಕೂಟ ಮಡೆಯಲಿದೆ. ನಿಧಾನಗತಿಯ ಸೈಕಲ್ ಸವಾರಿ, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲಿನ ಓಟ ಏರ್ಪಡಿಸಲಾಗಿದೆ. ರೈತ ಮಹಿಳೆಯರಿಗೆ ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ಮೂರು ಕಾಲಿನ ಓಟ, ಕಪ್ಪೆ ಜಿಗಿತದ ಸ್ಪರ್ಧೆ ನಡೆಯಲಿದೆ. ಅ.14ರಂದು ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ.
14ರಿಂದ ಲಲಿತಕಲೆ, ಕರಕುಶಲ ಉಪಸಮಿತಿ ಕಾರ್ಯಕ್ರಮ
ದಸರಾ ಪ್ರಯುಕ್ತ ಲಲಿತಕಲೆ, ಕರಕುಶಲ ಉಪ ಸಮಿತಿಯಿಂದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು ಹಾಗೂ ಪರಂಪರæ ಮತ್ತೆ ಮರುಕಳುಹಿಸುವಂತೆ ಮಾಡಲು ಅವುಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.
ಅ.14ರಿಂದ 16ರವರೆಗೆ ಕಲಾಮಂದಿರದ ಆವರಣದಲ್ಲಿ ಗಾಂಧಿ ಚರಕದಿಂದ ನೂಲು ತೆಗೆಯುವ, ಮಡಕೆ ಮಾಡುವ, ಬುಟ್ಟಿ ಹಣೆಯುವ, ಅಕ್ಕಿ ಕಾಳಿನಿಂದ ಗಣಪತಿ ಮಾಡುವ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ.
ಮಕ್ಕಳ ಸ್ಥಳದಲ್ಲಿ ಚಿತ್ರಬಿಡಿಸುವ ಶಿಬಿರ: ಶಾಲಾ ಮಕ್ಕಳಿಗೆ 3 ವಿಭಾಗಗಳಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಶಿಬಿರ ಏರ್ಪಡಿಸಿದೆ. ಅ.14ರಂದು ಮ.2ರಿಂದ 4ರವರಗೆ ಕಲಾಮಂದಿರದ ಹೊರ ಆವರಣದಲ್ಲಿ ಮಕ್ಕಳಿಗೆ ಚಿತ್ರ ಬಿಡಿಸುವ ಶಿಬಿರ ಆಯೋಜಿಸಿದೆ. ಚಿತ್ರ ರಚನೆಗೆ ಬೇಕಾಗುವ ಬಣ್ಣ ಇತ್ಯಾದಿಗಳನ್ನು ಸ್ಪರ್ಧಿಗಳೇ ತರುವುದು. ಡ್ರಾಯಿಂಗ್ ಶೀಟ್ಧಿಗಳನ್ನು ಮಾತ್ರ ಸಮಿತಿ ಒದಗಿಸುತ್ತದೆ.
ಕಲಾಕೃತಿ ಚಿತ್ರಕಲೆ ಸ್ಪರ್ಧೆ: ದಸರಾ ಪ್ರಯುಕ್ತ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ರಾಜ್ಯದ ಕಲಾವಿದ ಕಲಾಕೃತಿಗಳ ಸ್ಪರ್ಧೆ, ಪ್ರದರ್ಶನಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ಪಧಿರ್ಧೆ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಅನ್ವಯಕಲೆ, ಛಾಯಚಿತ್ರಕಲೆ, ಸಾಂಪ್ರದಾಯಿಕ ಚಿತ್ರಕಲೆ, ಸಾಂಪ್ರದಾಯಿಕ ಶಿಲ್ಪಕಲೆ, ಕರಕುಶಲ ಕಲೆ ಹಾಗೂ ಇನ್ಲೇ ವಿಭಾಗಗಳಲ್ಲಿ ನಡೆಯಲಿದೆ. ಕಲಾಕೃತಿಗಳನ್ನು ಕಾರ್ಯದರ್ಶಿಗಳು, ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಹಾಗೂ ಆಡಳಿತಾಧಿಕಾರಿಗಳು, ಕಾವಾ, ಇವರಿಗೆ ತಲುಪಿಸಬಹುದು. ಕಲಾಮಂದಿರದ ಮನೆಯಂಗಳದ ಎದುರಿನ ಕೊಠಡಿಯಲ್ಲಿ ಕಲಾಕೃತಿಗಳನ್ನು ಸಲ್ಲಿಸಲು ಅ.11 ಕೊನೆಯ ದಿನ. ದೂ.0821-2438931.
ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಪೂಜಾ ಕುಣಿತ, ಕಂಸಾಲೆ, ಗಾಡಿಗೊಂಬೆ, ನಂದಿಧ್ವಜ, ಡೊಳ್ಳುಕುಣಿತ, ನಗಾರಿ, ಕರಡಿಕುಣಿತ, ಕೊಂಬುಕಹಳೆಯೊಂದಿಗೆ ಮೆರವಣಿಗೆ ಸಾಗಲಿದೆ. ಮೆಧಿರಧಿವಧಿಣಿಗೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ, ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಉತ್ತಮ ವಿಸ್ತರಣಾ ಕಾರ್ಯಕರ್ತರಿಗೆ ಸನ್ಮಾನಿಸಲಾಗುವುದು.
ನಂತರ ರೈತರು ಹಾಗೂ ವಿಜ್ಞಾನಿಗಳ ಜತೆ ಸಂವಾದ ನಡೆಯಲಿದೆ. ಇಸ್ರೇಲ್ ಮಾದರಿ ಕೃಷಿ ಹಾಗೂ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕುರಿತು ಚರ್ಚೆ ನಡೆಯುತ್ತದೆ.
ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ 30 ಮಳಿಗೆಗಳು ಇರಲಿದೆ, ಪಶುಪಾಲನಾ ಇಲಾಖೆಯಿಂದ 15 ಸ್ವಾಲ್ ಗಳಲ್ಲಿ ವಿವಿಧ ರೀತಿಯ ಪಶು, ಸಾಕು ಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಅಲಂಕಾರಿಕ ಮೀನುಗಳ ಪ್ರದರ್ಶನ ಆಕರ್ಷಣೆಯಾಗಲಿದೆ.
ಅ.13ರಂದು ರೈತ ದಸರಾ ಕ್ರೀಡಾಕೂಟ ಮಡೆಯಲಿದೆ. ನಿಧಾನಗತಿಯ ಸೈಕಲ್ ಸವಾರಿ, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲಿನ ಓಟ ಏರ್ಪಡಿಸಲಾಗಿದೆ. ರೈತ ಮಹಿಳೆಯರಿಗೆ ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ಮೂರು ಕಾಲಿನ ಓಟ, ಕಪ್ಪೆ ಜಿಗಿತದ ಸ್ಪರ್ಧೆ ನಡೆಯಲಿದೆ. ಅ.14ರಂದು ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ.
14ರಿಂದ ಲಲಿತಕಲೆ, ಕರಕುಶಲ ಉಪಸಮಿತಿ ಕಾರ್ಯಕ್ರಮ
ದಸರಾ ಪ್ರಯುಕ್ತ ಲಲಿತಕಲೆ, ಕರಕುಶಲ ಉಪ ಸಮಿತಿಯಿಂದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು ಹಾಗೂ ಪರಂಪರæ ಮತ್ತೆ ಮರುಕಳುಹಿಸುವಂತೆ ಮಾಡಲು ಅವುಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.
ಅ.14ರಿಂದ 16ರವರೆಗೆ ಕಲಾಮಂದಿರದ ಆವರಣದಲ್ಲಿ ಗಾಂಧಿ ಚರಕದಿಂದ ನೂಲು ತೆಗೆಯುವ, ಮಡಕೆ ಮಾಡುವ, ಬುಟ್ಟಿ ಹಣೆಯುವ, ಅಕ್ಕಿ ಕಾಳಿನಿಂದ ಗಣಪತಿ ಮಾಡುವ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ.
ಮಕ್ಕಳ ಸ್ಥಳದಲ್ಲಿ ಚಿತ್ರಬಿಡಿಸುವ ಶಿಬಿರ: ಶಾಲಾ ಮಕ್ಕಳಿಗೆ 3 ವಿಭಾಗಗಳಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಶಿಬಿರ ಏರ್ಪಡಿಸಿದೆ. ಅ.14ರಂದು ಮ.2ರಿಂದ 4ರವರಗೆ ಕಲಾಮಂದಿರದ ಹೊರ ಆವರಣದಲ್ಲಿ ಮಕ್ಕಳಿಗೆ ಚಿತ್ರ ಬಿಡಿಸುವ ಶಿಬಿರ ಆಯೋಜಿಸಿದೆ. ಚಿತ್ರ ರಚನೆಗೆ ಬೇಕಾಗುವ ಬಣ್ಣ ಇತ್ಯಾದಿಗಳನ್ನು ಸ್ಪರ್ಧಿಗಳೇ ತರುವುದು. ಡ್ರಾಯಿಂಗ್ ಶೀಟ್ಧಿಗಳನ್ನು ಮಾತ್ರ ಸಮಿತಿ ಒದಗಿಸುತ್ತದೆ.
ಕಲಾಕೃತಿ ಚಿತ್ರಕಲೆ ಸ್ಪರ್ಧೆ: ದಸರಾ ಪ್ರಯುಕ್ತ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ರಾಜ್ಯದ ಕಲಾವಿದ ಕಲಾಕೃತಿಗಳ ಸ್ಪರ್ಧೆ, ಪ್ರದರ್ಶನಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ಪಧಿರ್ಧೆ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಅನ್ವಯಕಲೆ, ಛಾಯಚಿತ್ರಕಲೆ, ಸಾಂಪ್ರದಾಯಿಕ ಚಿತ್ರಕಲೆ, ಸಾಂಪ್ರದಾಯಿಕ ಶಿಲ್ಪಕಲೆ, ಕರಕುಶಲ ಕಲೆ ಹಾಗೂ ಇನ್ಲೇ ವಿಭಾಗಗಳಲ್ಲಿ ನಡೆಯಲಿದೆ. ಕಲಾಕೃತಿಗಳನ್ನು ಕಾರ್ಯದರ್ಶಿಗಳು, ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಹಾಗೂ ಆಡಳಿತಾಧಿಕಾರಿಗಳು, ಕಾವಾ, ಇವರಿಗೆ ತಲುಪಿಸಬಹುದು. ಕಲಾಮಂದಿರದ ಮನೆಯಂಗಳದ ಎದುರಿನ ಕೊಠಡಿಯಲ್ಲಿ ಕಲಾಕೃತಿಗಳನ್ನು ಸಲ್ಲಿಸಲು ಅ.11 ಕೊನೆಯ ದಿನ. ದೂ.0821-2438931.