ಆ್ಯಪ್ನಗರ

ರೈತರು ಸಿರಿಧ್ಯಾನ ಬೆಳೆಯಿರಿ

ಹವಾಮಾನ ವೈಪರೀತ್ಯದಿಂದ ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗಿರುವ ಕಾರಣ ರೈತರು ನೀರನ್ನು ಮಿತವಾಗಿ ಬಳಕೆ ಮಾಡಿ ಸಿರಿಧಾನ್ಯಗಳನ್ನು ಬೆಳೆಯುವ ಕಡೆ ಹೆಚ್ಚು ಒತ್ತು ನೀಡುವಂತೆ ಕಷಿ ಇಲಾಖೆ ಉಪನಿರ್ದೆಶಕ ಸೋಮಶೇಖರ್ ಸಲಹೆ ನೀಡಿದರು.

ವಿಕ ಸುದ್ದಿಲೋಕ 7 Jun 2017, 5:15 am
ಕಷ್ಣರಾಜನಗರ: ಹವಾಮಾನ ವೈಪರೀತ್ಯದಿಂದ ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗಿರುವ ಕಾರಣ ರೈತರು ನೀರನ್ನು ಮಿತವಾಗಿ ಬಳಕೆ ಮಾಡಿ ಸಿರಿಧಾನ್ಯಗಳನ್ನು ಬೆಳೆಯುವ ಕಡೆ ಹೆಚ್ಚು ಒತ್ತು ನೀಡುವಂತೆ ಕಷಿ ಇಲಾಖೆ ಉಪನಿರ್ದೆಶಕ ಸೋಮಶೇಖರ್ ಸಲಹೆ ನೀಡಿದರು.
Vijaya Karnataka Web farmers grow up
ರೈತರು ಸಿರಿಧ್ಯಾನ ಬೆಳೆಯಿರಿ


ತಾಲೂಕಿನ ಹೊಸಅಗ್ರಹಾರ ಹೋಬಳಿ ಕೇಂದ್ರದಲ್ಲಿ ಕಷಿ ಇಲಾಖೆ ಮತ್ತು ಇತರ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ಕಷಿ ಅಭಿಯಾನ ಕಾರ‌್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಳೆ ರಾಜ್ಯದ ಹಲವೆಡೆ ಇಂದಿಗೂ ಆಗಿಲ್ಲ ಆದರೂ ಮೈಸೂರು, ಹಾಸನ, ಮಡಿಕೇರಿ, ಮಂಡ್ಯ ಭಾಗದಲ್ಲಿ ಸ್ವಲ್ಪಮಟ್ಟಿಗೆ ಆಗಿದ್ದು, ಬೆಳೆ ಉಳಿಯುವಂತಾಗಿದೆ ಇಂತಹ ಸಂದರ್ಭದಲ್ಲಿ ರೈತರು ನೀರನ್ನು ಮಿತವಾಗಿ ಬಳಸಿ ಉಳಿಸುವ ಕಡೆ ಹೆಚ್ಚು ಗಮನಹರಿಸಬೇಕು ಅಲ್ಲದೆ ಸಿರಿಧಾನ್ಯಗಳನ್ನು ಬೆಳೆಯುವ ಕಡೆ ಒತ್ತು ನೀಡಬೇಕು ಎಂದು ಹೇಳಿದರು.

ಕಷಿ ಅಭಿಯಾನ ಕಾರ‌್ಯಕ್ರಮವು ಎಲ್ಲ ಇಲಾಖೆ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ರೈತರ ಹತ್ತು ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವುದಾಗಿದ್ದು ,ಸವಲತ್ತುಗಳನ್ನು ವಿತರಿಸುವ ಕಾರ‌್ಯಕ್ರಮವಾಗಿದೆ. ಎಲ್ಲಾ ರೈತರು ಇಂತಹ ಕಾರ‌್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗಪಡೆದುಕೊಳ್ಳಬೇಕು ಎಂದರು.

ಈಗಾಗಲೇ ನಮ್ಮ ಭಾಗದಲ್ಲಿ ಮಳೆ ಆಶಾದಾಯಕ ವಾಗಿದ್ದು, ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು ಕಷಿ ಯಾಂತ್ರೀಕರಣ, ಹನಿ ನೀರಾವರಿ, ಸೇರಿದಂತೆ ಹಲವಾರು ಯೋಜನೆ ಯಡಿ ಅರ್ಹ ಫಲಾನುಭವಿ ರೈತರು ಸೂಕ್ತ ದಾಖಲಾತಿ ಸಲ್ಲಿಸಿ ಯೋಜನೆ ಗಳ ಸದುಪಯೋಗಪಡೆದು ಕೊಳ್ಳುವಂತೆ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಾನಂದ ಮಾತನಾಡಿದರು, ಕಷಿ ಇಲಾಖೆ ನಿವತ್ತ ಅಧಿಕಾರಿ ಹೊಂಬೇಗೌಡ, ಕಷಿ ಸಹಾಯಕ ನಿರ್ದೇಶಕ ಕೆ.ರಂಗರಾಜನ್, ಗ್ರಾಮ ಪಂಚಾಯಿತಿ ಸದಸ್ಯ ರಾಜಮ್ಮ, ಸ್ವಾಮಿ, ಚಂದ್ರಪ್ಪ, ಶಿವಯ್ಯ, ಮಣಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಯದುಗಿರೀಶ್, ರೇಷ್ಮೆ ಇಲಾಖೆ ಸುಂದರ್‌ಅಯ್ಯಂಗಾರ್, ಸಿಡಿಪಿಒ ಲೀಲಾಂಬಿಕೆ, ಅಕ್ಕಮಹಾದೇವಿ, ಪ್ರಗತಿಪರ ರೈತ ಮಹಿಳೆ ಇಂದಿರಮ್ಮ, ವಿವಿಧ ಇಲಾಖೆ ಅಧಿಕಾರಿಗಳು, ಕಷಿ ಇಲಾಖೆಯ ಲೋಕೇಶ್, ವೆಂಕಟೇಶ್, ಪ್ರಸಾದ್, ರಮೇಶ್,ಜೆ.ರಾಜೇಶ್, ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನಾಧಿಕಾರಿ ಗಾಯಿತ್ರಿ, ಉಮೇಶ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ