ಆ್ಯಪ್ನಗರ

ಜ.26ಕ್ಕೆ ದಿಲ್ಲಿಯಂತೆ ಬೆಂಗಳೂರಿನಲ್ಲಿ ಸಾವಿರಾರು ರೈತರ ಪರೇಡ್‌: ಕೋಡಿಹಳ್ಳಿ ಚಂದ್ರಶೇಖರ್‌

ಕೇಂದ್ರ ಸರಕಾರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆಯುವಂತೆ ಬೆಂಗಳೂರಲ್ಲೂ ರೈತರು ಗಣರಾಜ್ಯೋತ್ಸವ ದಿನದಂದು ಪರೇಡ್‌ ನಡೆಸಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ. 17 ರಿಂದ 18 ಕಿಮೀ ಪ್ರತಿಭಟನೆಯನ್ನು ನಡೆಸಲಿದ್ದಾರೆ ಎಂದು ಅವರು ಹೇಳಿದರು.

Vijaya Karnataka Web 21 Jan 2021, 9:43 pm
ಮೈಸೂರು: ಸರಕಾರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ಪರೇಡ್‌ನಂತೆ ರಾಜ್ಯದ ರಾಜಧಾನಿಯಲ್ಲೂ ಸಾವಿರಾರು ರೈತರು ಪರೇಡ್‌ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.
Vijaya Karnataka Web kodihalli chandrashekar
ಕೋಡಿಹಳ್ಳಿ ಚಂದ್ರಶೇಖರ್‌, ರೈತ ಸಂಘದ ರಾಜ್ಯಾಧ್ಯಕ್ಷ (ಸಂಗ್ರಹ ಚಿತ್ರ)


ಜ.26ರಂದು ರಾಜ್ಯದಲ್ಲಿ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ನಂತರ ಬೆಂಗಳೂರು-ತುಮಕೂರು ರಸ್ತೆಯ ನೈಸ್‌ ಜಂಕ್ಷನ್‌ನಿಂದ ಆರಂಭವಾಗುವ ಪರೇಡ್‌ ಫ್ರೀಡಂ ಪಾರ್ಕ್ ತಲುಪುತ್ತದೆ. ಸುಮಾರು 8-10 ಸಾವಿರ ವಾಹನಗಳಲ್ಲಿ ಸುಮಾರು 25 ಸಾವಿರ ರೈತರು ರಾಷ್ಟ್ರ ಧ್ವಜ ಹಾಗೂ ಹಸಿರು ಬಾವುಟ ಹಿಡಿದು 17 ರಿಂದ 18 ಕಿಮೀ ಜಾಥಾ ನಡೆಸಲಿದ್ದಾರೆ. ಈ ಜಾಥಾದಲ್ಲಿ ಕೃಷಿ ಕಾಯಿದೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಸ್ತಬ್ಧಚಿತ್ರಗಳು ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಂತಿಯುತ ಪ್ರತಿಭಟನೆ
ನಾವು ಅಹಿಂಸಾ ಮಾರ್ಗದಲ್ಲಷ್ಟೇ ಪ್ರತಿಭಟಿಸುತ್ತೇವೆ. ಬೆಂಕಿ ಹಚ್ಚುವ, ಕಲ್ಲು ಹೊಡೆಯುವಂತಹ ರಾಷ್ಟ್ರದ್ರೋಹದ ಕೆಲಸಗಳನ್ನು ಮಾಡುವುದಿಲ್ಲ. ಬಾವುಟ ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ಆದ್ದರಿಂದ ನಮಗೆ ಪರೇಡ್‌ ಮಾಡಲು ಸರಕಾರ ಅವಕಾಶ ಕೊಡಲೇಬೇಕು. ಇಲ್ಲವಾದಲ್ಲಿ ರೈತರನ್ನು ಪೊಲೀಸರು ಎಲ್ಲೆಲ್ಲಿ ತಡೆಯುತ್ತಾರೋ ಅಲ್ಲಲ್ಲೇ ಪ್ರತಿಭಟನೆ ನಡೆಸಿ ಎಂದು ರೈತರಿಗೆ ಕರೆ ನೀಡಿದ್ದೇವೆ ಎಂದರು. ಮತ್ತೆ ಸ್ವಚ್ಛ ನಗರಿ ಪಟ್ಟ ಪಡೆಯಲು ಸಜ್ಜಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು..ರೈತ ಮುಖಂಡರಾದ ಭೈರೇಗೌಡ, ಜಿಲ್ಲಾಧ್ಯಕ್ಷ ಬೆಟ್ಟೇಗೌಡ, ರಂಗನಾಥ್‌, ಬಸವೇಗೌಡ, ಆನಂದ್‌ ಪಾಟೀಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ