ನಾಗರಾಜ್ ನವೀಮನೆ, ಮೈಸೂರು
100ನೇ ವರ್ಷದ ಘಟಿಕೋತ್ಸವದ ಸಂಭ್ರಮದಲ್ಲಿರುವ ಮೈಸೂರು ವಿವಿಯಲ್ಲಿ ಈ ಬಾರಿ ಅಪರೂಪ ಎಂಬಂತೆ ಅಪ್ಪ-ಮಗ ಇಬ್ಬರೂ ಒಟ್ಟಿಗೆ ಪಿಎಚ್.ಡಿ ಪದವಿ ಮುಗಿಸಿದ್ದಾರೆ. ಮುಂದಿನ ತಿಂಗಳು ನಡೆಯುವ ಘಟಿಕೋತ್ಸವದಲ್ಲಿ ಒಟ್ಟಿಗೆ ಪಿಎಚ್.ಡಿ ಅವಾರ್ಡ್ ಪಡೆಯಲು ಅಣಿಯಾಗಿದ್ದಾರೆ.
ಸಾಮಾನ್ಯವಾಗಿ ಅಪ್ಪನನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಆದರೆ, ಮೈಸೂರಿನಲ್ಲಿ ಮಗ ಓದುವುದರಿಂದ ಸ್ಫೂರ್ತಿ ಪಡೆದ ಅಪ್ಪ ತಾನು ಆಸೆಪಟ್ಟಂತೆ ಪುತ್ರನೊಂದಿಗೆ ಎಂಬಿಎ ಪಡೆಯುವ ಜತೆಗೆ ಪಿಎಚ್.ಡಿ ಪದವಿಯನ್ನೂ ಪೂರೈಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ನಾಗಕೃಷ್ಣ ರಾಜೆ ಅರಸ್ (63 ವರ್ಷ) ಹಾಗೂ ಪ್ರಮು ಕುಮಾರ್ ರಾಜೇ ಅರಸ್ ಎಂ.ಎನ್. (35 ವರ್ಷ) ಒಟ್ಟಿಗೆ ಪಿಎಚ್.ಡಿ ಪೂರೈಸಿರುವ ತಂದೆ-ಮಗ. ಇವರಿಬ್ಬರಿಗೂ ಮ್ಯಾನೇಜ್ಮೆಂಟ್ (ಆಡಳಿತ) ವಿಷಯದಲ್ಲಿ ಡಾ.ವಿ.ಎಸ್.ಸೋಮನಾಥ್ ಅವರು ಮಾರ್ಗದರ್ಶನ ಮಾಡಿದ್ದರು. ಇದೀಗ ತಂದೆ, ಮಗ ಬೇರೆ ಬೇರೆ ಟಾಪಿಕ್ನಲ್ಲಿ ಮಂಡಿಸಿದ ಪಿಎಚ್.ಡಿ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿದೆ. ಅಕ್ಟೋಬರ್ನಲ್ಲಿನಡೆಯುವ ಘಟಿಕೋತ್ಸವದಲ್ಲಿ ಇಬ್ಬರೂ ಪಿಎಚ್.ಡಿ ಅವಾರ್ಡ್ ತೆಗೆದುಕೊಳ್ಳುವ ಅಪರೂಪದ ದೃಶ್ಯಕ್ಕೆ ಮೈವಿವಿ ಸಾಕ್ಷಿಯಾಗಲಿದೆ. ವಿಶೇಷವೆಂದರೆ ಅಪ್ಪ ಎಂಎಸ್ಸಿ ಹಾಗೂ ಮಗ ಎಂಬಿಎ ಓದುವಾಗ ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತ ಕೆಂಗೇರಿಯ ಬಿಜಿಎಸ್ ಕಾಲೇಜ್ ಆಫ್ ಮ್ಯಾನೇಜ್ಮೆಂಚ್ ಸ್ಟಡೀಸ್ನಲ್ಲಿಪ್ರಮು ಕುಮಾರ್ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
''ಒಂದೇ ವಿಶ್ವವಿದ್ಯಾಲಯದಲ್ಲಿ ಒಂದೇ ವಿಷಯದಲ್ಲಿ ಅಪ್ಪ-ಮಗ ಇಬ್ಬರೂ ಪಿಎಚ್.ಡಿ ಪೂರೈಸಿರುವುದು ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ ಎನ್ನಬಹುದು. ನಾಗಕೃಷ್ಣ ರಾಜೇ ಅರಸ್ ತಮ್ಮ ಅನುಭವ ಮೇಲೆ ಪಿಎಚ್.ಡಿ ಮಾಡಿದರು. ಮಗ ಪ್ರಚಲಿತ ವಿದ್ಯಮಾನವನ್ನು ಪ್ರಬಂಧದ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಇಬ್ಬರೂ ಬುದ್ಧಿವಂತರು. ಹಳೆ ಬೇರು ಹೊಸ ಚಿಗುರು ಬೆರೆತರೆ ಮರ ಸೊಗಸು ಎಂಬಂತೆ ಅದ್ಭುತವಾಗಿ ಇಬ್ಬರು ಪಿಎಚ್.ಡಿ ಪ್ರಬಂಧ ಮಂಡಿಸಿದ್ದು ಖುಷಿ ತಂದಿದೆ. ನನ್ನ ವೃತ್ತಿ ಜೀವನದಲ್ಲಿ ಇದು ಸಂತೋಷದ ಸಂಗತಿ'' ಎಂದು ಡಾ.ವಿ.ಎಸ್.ಸೋಮನಾಥ್ ಹರ್ಷ ವ್ಯಕ್ತಪಡಿಸಿದರು.
ಒಟ್ಟಿಗೆ ಎಂಬಿಎ ಓದಿದರು: ನಾಗಕೃಷ್ಣ ರಾಜೆ ಅರಸ್ ಅವರು 1980ರಲ್ಲೇ ಎಂಎಸ್ಸಿ ಪೂರೈಸಿದ್ದರು. ನಂತರ ಕರ್ನಾಟಕ ಸೋಫ್ಸ್ ಮತ್ತು ಡಿಟರ್ಜೆಂಚ್ ಲಿಮಿಟೆಡ್ಗೆ ಸೇರಿಕೊಂಡು 2017ರ ನವೆಂಬರ್ನಲ್ಲಿ ನಿವೃತ್ತರಾದರು. ಆರ್ಥಿಕ ಕಾರಣಕ್ಕೆ ಮುಂದೆ ಉನ್ನತ ಶಿಕ್ಷಣ ಮಾಡಲು ಸಾಧ್ಯವಾಗಿರಲಿಲ್ಲ. ಈ ಕೊರಗು ಅವರನ್ನು ಸದಾ ಕಾಡುತ್ತಲೇ ಇತ್ತು. ಈ ನಡುವೆ ಮಗ ಬಿಕಾಂ ಮುಗಿಸಿ ಯುಎಸ್ಎನಲ್ಲಿ ಎಂಬಿಎ ಮಾಡಿದರು. ನಾಗಕೃಷ್ಣ ಅವರು ದೂರ ಶಿಕ್ಷಣದ ಮೂಲಕ ಎಂಬಿಎ ಪ್ರವೇಶ ಪಡೆದರು. 2010ರಲ್ಲಿ ಇಬ್ಬರೂ ಒಟ್ಟಿಗೆ ಓದಿ ಎಂಬಿಎ ಮುಗಿಸಿದರು. ನಂತರ 2015ರಲ್ಲಿ ಮೈಸೂರು ವಿವಿ ವತಿಯಿಂದ ನಡೆದ ಪಿಎಚ್.ಡಿ ಸಾಮಾನ್ಯ ಪರೀಕ್ಷೆಯನ್ನು ಎದುರಿಸಿ ಪಾಸಾದರು. ನಂತರ ಐದು ವರ್ಷ ಸಂಶೋಧನೆ ನಡೆಸಿ, ಇದೀಗ ಪಿಎಚ್.ಡಿ ಪ್ರಬಂಧ ಮಂಡಿಸಿದ್ದು, ವಿವಿ ಅದನ್ನು ಅಂಗೀಕರಿಸಿದೆ.
ಚಿಕ್ಕ ವಯಸ್ಸಿನಿಂದ ಓದುವ ಹವ್ಯಾಸವಿತ್ತು. ಸಂಶೋಧನೆ ಮಾಡುವ ಆಸಕ್ತಿ ಇತ್ತು. ಕಾರ್ಖಾನೆಯಲ್ಲಿಕೆಲಸ ಮಾಡುವಾಗಲೂ ಸಣ್ಣಪುಟ್ಟ ಸಂಶೋಧನೆ ಮಾಡುತ್ತಿದ್ದೆ. ಇದನ್ನೇ ಸ್ಫೂರ್ತಿಯಾಗಿ ಪಡೆದುಕೊಂಡು ಮಗನೊಂದಿಗೆ ಒಟ್ಟಿಗೆ ಪಿಎಚ್.ಡಿ ಮುಗಿಸಿದೆ. ಇದಕ್ಕೆ ಸಹಕರಿಸಿದ ಪತ್ನಿಯ ನೆರವು ಮರೆಯಲಾರೆ.
- ನಾಗಕೃಷ್ಣ ರಾಜೆ ಅರಸ್
ನನ್ನ ತಂದೆಗೆ ಬಾಲ್ಯದಿಂದಲೂ ನಮ್ಮ ಕುಟುಂಬದಲ್ಲಿ ಉನ್ನತ ವಿದ್ಯಾವಂತ ವ್ಯಕ್ತಿಯಾಗಬೇಕೆಂಬ ಆಸೆ ಇತ್ತು. ಹಾಗಾಗಿ ಅಮ್ಮನ ಸಹಕಾರದಿಂದ ನಾನು ಓದುವಾಗಲೇ ಎಂಬಿಎಗೆ ಸೇರಿಕೊಂಡರು. ನಂತರ ನನ್ನೊಂದಿಗೆ ಪಿಎಚ್.ಡಿ ವ್ಯಾಸಂಗ ಮಾಡಲು ನಿರ್ಧರಿಸಿದರು. ಇದೀಗ ನಾವಿಬ್ಬರೂ ಒಟ್ಟಾಗಿ ಪಿಎಚ್.ಡಿ ಪಡೆದಿರುವುದು ಹೆಮ್ಮೆಯ ಕ್ಷಣ.
- ಪ್ರಮು ಕುಮಾರ್ ರಾಜೇ ಅರಸ್ ಎಂ.ಎನ್
100ನೇ ವರ್ಷದ ಘಟಿಕೋತ್ಸವದ ಸಂಭ್ರಮದಲ್ಲಿರುವ ಮೈಸೂರು ವಿವಿಯಲ್ಲಿ ಈ ಬಾರಿ ಅಪರೂಪ ಎಂಬಂತೆ ಅಪ್ಪ-ಮಗ ಇಬ್ಬರೂ ಒಟ್ಟಿಗೆ ಪಿಎಚ್.ಡಿ ಪದವಿ ಮುಗಿಸಿದ್ದಾರೆ. ಮುಂದಿನ ತಿಂಗಳು ನಡೆಯುವ ಘಟಿಕೋತ್ಸವದಲ್ಲಿ ಒಟ್ಟಿಗೆ ಪಿಎಚ್.ಡಿ ಅವಾರ್ಡ್ ಪಡೆಯಲು ಅಣಿಯಾಗಿದ್ದಾರೆ.
ಸಾಮಾನ್ಯವಾಗಿ ಅಪ್ಪನನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಆದರೆ, ಮೈಸೂರಿನಲ್ಲಿ ಮಗ ಓದುವುದರಿಂದ ಸ್ಫೂರ್ತಿ ಪಡೆದ ಅಪ್ಪ ತಾನು ಆಸೆಪಟ್ಟಂತೆ ಪುತ್ರನೊಂದಿಗೆ ಎಂಬಿಎ ಪಡೆಯುವ ಜತೆಗೆ ಪಿಎಚ್.ಡಿ ಪದವಿಯನ್ನೂ ಪೂರೈಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ನಾಗಕೃಷ್ಣ ರಾಜೆ ಅರಸ್ (63 ವರ್ಷ) ಹಾಗೂ ಪ್ರಮು ಕುಮಾರ್ ರಾಜೇ ಅರಸ್ ಎಂ.ಎನ್. (35 ವರ್ಷ) ಒಟ್ಟಿಗೆ ಪಿಎಚ್.ಡಿ ಪೂರೈಸಿರುವ ತಂದೆ-ಮಗ. ಇವರಿಬ್ಬರಿಗೂ ಮ್ಯಾನೇಜ್ಮೆಂಟ್ (ಆಡಳಿತ) ವಿಷಯದಲ್ಲಿ ಡಾ.ವಿ.ಎಸ್.ಸೋಮನಾಥ್ ಅವರು ಮಾರ್ಗದರ್ಶನ ಮಾಡಿದ್ದರು. ಇದೀಗ ತಂದೆ, ಮಗ ಬೇರೆ ಬೇರೆ ಟಾಪಿಕ್ನಲ್ಲಿ ಮಂಡಿಸಿದ ಪಿಎಚ್.ಡಿ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿದೆ. ಅಕ್ಟೋಬರ್ನಲ್ಲಿನಡೆಯುವ ಘಟಿಕೋತ್ಸವದಲ್ಲಿ ಇಬ್ಬರೂ ಪಿಎಚ್.ಡಿ ಅವಾರ್ಡ್ ತೆಗೆದುಕೊಳ್ಳುವ ಅಪರೂಪದ ದೃಶ್ಯಕ್ಕೆ ಮೈವಿವಿ ಸಾಕ್ಷಿಯಾಗಲಿದೆ. ವಿಶೇಷವೆಂದರೆ ಅಪ್ಪ ಎಂಎಸ್ಸಿ ಹಾಗೂ ಮಗ ಎಂಬಿಎ ಓದುವಾಗ ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತ ಕೆಂಗೇರಿಯ ಬಿಜಿಎಸ್ ಕಾಲೇಜ್ ಆಫ್ ಮ್ಯಾನೇಜ್ಮೆಂಚ್ ಸ್ಟಡೀಸ್ನಲ್ಲಿಪ್ರಮು ಕುಮಾರ್ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
''ಒಂದೇ ವಿಶ್ವವಿದ್ಯಾಲಯದಲ್ಲಿ ಒಂದೇ ವಿಷಯದಲ್ಲಿ ಅಪ್ಪ-ಮಗ ಇಬ್ಬರೂ ಪಿಎಚ್.ಡಿ ಪೂರೈಸಿರುವುದು ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ ಎನ್ನಬಹುದು. ನಾಗಕೃಷ್ಣ ರಾಜೇ ಅರಸ್ ತಮ್ಮ ಅನುಭವ ಮೇಲೆ ಪಿಎಚ್.ಡಿ ಮಾಡಿದರು. ಮಗ ಪ್ರಚಲಿತ ವಿದ್ಯಮಾನವನ್ನು ಪ್ರಬಂಧದ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಇಬ್ಬರೂ ಬುದ್ಧಿವಂತರು. ಹಳೆ ಬೇರು ಹೊಸ ಚಿಗುರು ಬೆರೆತರೆ ಮರ ಸೊಗಸು ಎಂಬಂತೆ ಅದ್ಭುತವಾಗಿ ಇಬ್ಬರು ಪಿಎಚ್.ಡಿ ಪ್ರಬಂಧ ಮಂಡಿಸಿದ್ದು ಖುಷಿ ತಂದಿದೆ. ನನ್ನ ವೃತ್ತಿ ಜೀವನದಲ್ಲಿ ಇದು ಸಂತೋಷದ ಸಂಗತಿ'' ಎಂದು ಡಾ.ವಿ.ಎಸ್.ಸೋಮನಾಥ್ ಹರ್ಷ ವ್ಯಕ್ತಪಡಿಸಿದರು.
ಒಟ್ಟಿಗೆ ಎಂಬಿಎ ಓದಿದರು: ನಾಗಕೃಷ್ಣ ರಾಜೆ ಅರಸ್ ಅವರು 1980ರಲ್ಲೇ ಎಂಎಸ್ಸಿ ಪೂರೈಸಿದ್ದರು. ನಂತರ ಕರ್ನಾಟಕ ಸೋಫ್ಸ್ ಮತ್ತು ಡಿಟರ್ಜೆಂಚ್ ಲಿಮಿಟೆಡ್ಗೆ ಸೇರಿಕೊಂಡು 2017ರ ನವೆಂಬರ್ನಲ್ಲಿ ನಿವೃತ್ತರಾದರು. ಆರ್ಥಿಕ ಕಾರಣಕ್ಕೆ ಮುಂದೆ ಉನ್ನತ ಶಿಕ್ಷಣ ಮಾಡಲು ಸಾಧ್ಯವಾಗಿರಲಿಲ್ಲ. ಈ ಕೊರಗು ಅವರನ್ನು ಸದಾ ಕಾಡುತ್ತಲೇ ಇತ್ತು. ಈ ನಡುವೆ ಮಗ ಬಿಕಾಂ ಮುಗಿಸಿ ಯುಎಸ್ಎನಲ್ಲಿ ಎಂಬಿಎ ಮಾಡಿದರು. ನಾಗಕೃಷ್ಣ ಅವರು ದೂರ ಶಿಕ್ಷಣದ ಮೂಲಕ ಎಂಬಿಎ ಪ್ರವೇಶ ಪಡೆದರು. 2010ರಲ್ಲಿ ಇಬ್ಬರೂ ಒಟ್ಟಿಗೆ ಓದಿ ಎಂಬಿಎ ಮುಗಿಸಿದರು. ನಂತರ 2015ರಲ್ಲಿ ಮೈಸೂರು ವಿವಿ ವತಿಯಿಂದ ನಡೆದ ಪಿಎಚ್.ಡಿ ಸಾಮಾನ್ಯ ಪರೀಕ್ಷೆಯನ್ನು ಎದುರಿಸಿ ಪಾಸಾದರು. ನಂತರ ಐದು ವರ್ಷ ಸಂಶೋಧನೆ ನಡೆಸಿ, ಇದೀಗ ಪಿಎಚ್.ಡಿ ಪ್ರಬಂಧ ಮಂಡಿಸಿದ್ದು, ವಿವಿ ಅದನ್ನು ಅಂಗೀಕರಿಸಿದೆ.
ಚಿಕ್ಕ ವಯಸ್ಸಿನಿಂದ ಓದುವ ಹವ್ಯಾಸವಿತ್ತು. ಸಂಶೋಧನೆ ಮಾಡುವ ಆಸಕ್ತಿ ಇತ್ತು. ಕಾರ್ಖಾನೆಯಲ್ಲಿಕೆಲಸ ಮಾಡುವಾಗಲೂ ಸಣ್ಣಪುಟ್ಟ ಸಂಶೋಧನೆ ಮಾಡುತ್ತಿದ್ದೆ. ಇದನ್ನೇ ಸ್ಫೂರ್ತಿಯಾಗಿ ಪಡೆದುಕೊಂಡು ಮಗನೊಂದಿಗೆ ಒಟ್ಟಿಗೆ ಪಿಎಚ್.ಡಿ ಮುಗಿಸಿದೆ. ಇದಕ್ಕೆ ಸಹಕರಿಸಿದ ಪತ್ನಿಯ ನೆರವು ಮರೆಯಲಾರೆ.
- ನಾಗಕೃಷ್ಣ ರಾಜೆ ಅರಸ್
ನನ್ನ ತಂದೆಗೆ ಬಾಲ್ಯದಿಂದಲೂ ನಮ್ಮ ಕುಟುಂಬದಲ್ಲಿ ಉನ್ನತ ವಿದ್ಯಾವಂತ ವ್ಯಕ್ತಿಯಾಗಬೇಕೆಂಬ ಆಸೆ ಇತ್ತು. ಹಾಗಾಗಿ ಅಮ್ಮನ ಸಹಕಾರದಿಂದ ನಾನು ಓದುವಾಗಲೇ ಎಂಬಿಎಗೆ ಸೇರಿಕೊಂಡರು. ನಂತರ ನನ್ನೊಂದಿಗೆ ಪಿಎಚ್.ಡಿ ವ್ಯಾಸಂಗ ಮಾಡಲು ನಿರ್ಧರಿಸಿದರು. ಇದೀಗ ನಾವಿಬ್ಬರೂ ಒಟ್ಟಾಗಿ ಪಿಎಚ್.ಡಿ ಪಡೆದಿರುವುದು ಹೆಮ್ಮೆಯ ಕ್ಷಣ.
- ಪ್ರಮು ಕುಮಾರ್ ರಾಜೇ ಅರಸ್ ಎಂ.ಎನ್