ಆ್ಯಪ್ನಗರ

ಕಿಡಿಗೇಡಿಗಳಿಂದ ಬೆಂಕಿ: ಹತ್ತಾರು ಎಕರೆ ಅರಣ್ಯ ನಾಶ

ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಬಳಿಯ ಕಿರು ಅರಣ್ಯ ವಲಯದ ಹತ್ತಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

Vijaya Karnataka 23 Feb 2019, 5:00 am
ಕೋಣನೂರು (ಮೈಸೂರು ಜಿಲ್ಲೆ): ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಬಳಿಯ ಕಿರು ಅರಣ್ಯ ವಲಯದ ಹತ್ತಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
Vijaya Karnataka Web fire tens of acres of forest destroyed
ಕಿಡಿಗೇಡಿಗಳಿಂದ ಬೆಂಕಿ: ಹತ್ತಾರು ಎಕರೆ ಅರಣ್ಯ ನಾಶ


ಗುರುವಾರ ಸಂಜೆ ಗ್ರಾಮದ ಹೊರವಲಯದ ಹನುಮನಪುರ ರಸ್ತೆಯಲ್ಲಿರುವ ಜಾನುವಾರು ಮೇವಿನ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಾಳಿಯ ವೇಗದಿಂದ ಸುತ್ತಲಿನ ಜಮೀನಿಗೂ ಹಬ್ಬಿದೆ. ಬೆಂಕಿಯು ನಿಯಂತ್ರಣಕ್ಕೆ ಬಾರದ ಕಾರಣ ಹೆಚ್ಚಿನ ಅವಘಡ ಹೆಚ್ಚಿದೆ.

ಅರಣ್ಯ ಪ್ರದೇಶವು ಗ್ರಾಮದ ನೂರಾರು ದನಕರುಗಳು, ಕುರಿ, ಮೇಕೆಗಳು ಸೇರಿದಂತೆ ಕಡವೆ, ಜಿಂಕೆಗಳು, ಸಾರಂಗಗಳು ವಾಸಿಸುವ ಸ್ಥಳವಾಗಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳು ಮೇವಿಗೆ ಪರದಾಡುವ ಪರಿಸ್ಥಿತಿ ತಲೆದೋರುವಂತಾಗಿದೆ. ಹುಣಸೆ, ತೆಂಗು, ಸೇರಿದಂತೆ ಬೆಲೆ ಬಾಳುವ ಹತ್ತಾರು ಮರಗಳು ಬೆಂಕಿಗೆ ಆಹುತಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ