ಆ್ಯಪ್ನಗರ

ಮೈಸೂರು ದಸರಾ ಹಿನ್ನೆಲೆ ಅರಮನೆ ಆವರಣದಲ್ಲಿ ಸಿಡಿಮದ್ದಿನ ತಾಲೀಮು: ಬೆದರಿದ ಈಶ್ವರ!

ಮೈಸೂರು ದಸರಾಗೆ ಪೂರ್ವಭಾವಿಯಾಗಿ ಸಿಡಿಮದ್ದಿನ ತಾಲೀಮು ಆರಂಭವಾಗಿದೆ. ಜಂಬೂ ಸವಾರಿಗೆ ಹೊಸ ಆನೆಗಳನ್ನು ಸೇರಿ ಎಲ್ಲ ಆನೆಗಳನ್ನು ಸಜ್ಜುಗೊಳಿಸಲು ಮೊದಲನೇ ಸುತ್ತಿನ ಸಿಡಿಮದ್ದು ತಾಲೀಮು ನಡೆಸಲಾಗಿದೆ.

Vijaya Karnataka 13 Sep 2019, 3:25 pm
ಮೈಸೂರು: ವಿಶ್ವವಿಖ್ಯಾತ ದಸರಾಗೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನೆಲೆ ಜಂಬೂ ಸವಾರಿಯ ಆನೆಗಳಿಗೆ ಸಿಡಿಮದ್ದಿನ ತಾಲೀಮು ಆರಂಭವಾಗಿದೆ. ದಸರಾದ ಸುಪ್ರಸಿದ್ಧ ಜಂಬೂ ಸವಾರಿ ವೇಳೆ ಸಿಡಿ ಮದ್ದು ಪ್ರದರ್ಶನ ನಡೆಸುವುದರಿಂದ ಇದರ ತಾಲೀಮು ನಡೆಸಲಾಗಿದೆ.

ಇನ್ನು, ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಸಿಡಿ ಮದ್ದು ಪ್ರದರ್ಶನ ವೇಳೆ ಆನೆಗಳು ಬೆದರಿವೆ. ಈಶ್ವರ ಸೇರಿದಂತೆ ಕೆಲವು ಹೊಸ ಆನೆಗಳು ಗಾಬರಿಯಿಂದ ಸ್ಥಳದಿಂದ ಓಡಲು ಯತ್ನಿಸಿದೆ. ಈ ಸಂಬಂಧ ಮಾಹಿತಿ ನೀಡಿದ ಡಿಸಿಎಫ್ ಅಲೆಕ್ಸಾಂಡರ್, ಮೊದಲ ಬಾರಿಗೆ ಕೆಲವು ಆನೆಗಳು ಬೆದರುವುದು ಸಹಜ. ಆದರೆ ದಸರಾಗೆ ಸಿದ್ಧವಾಗಬೇಕಿರುವುದರಿಂದ ಸಿಡಿ ಮದ್ದಿನ ತಾಲೀಮು ಅಗತ್ಯ. ಇನ್ನೂ ಎರಡು ಸುತ್ತು ಸಿಡಿಮದ್ದಿನ ತಾಲೀಮು ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.


ಇನ್ನೊಂದೆಡೆ, ಸಿಡಿಮದ್ದಿನ ತಾಲೀಮಿನ ವೇಳೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಸಹ ಸ್ಥಳದಲ್ಲಿ ಹಾಜರಿದ್ದರು.

ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 8 ರವರೆಗೆ ವಿಶ್ವವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ರಾಜ್ಯ ಸರಕಾರದ ವತಿಯಿಂದ ನಡೆಯಲಿದೆ. ಇನ್ನು, ಈ ಬಾರಿಯ ದಸರಾವನ್ನು ಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪ ಉದ್ಘಾಟನೆ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ