ಆ್ಯಪ್ನಗರ

ಮೈಸೂರು: ಪ್ಯಾಕೇಜ್ಡ್‌ ಡ್ರಿಂಕಿಂಗ್‌ ವಾಟರ್‌ ಕುಡಿದು 5 ವರ್ಷದ ಬಾಲಕ ಅಸ್ವಸ್ಥ!

ಮೈಸೂರಿನ ಟಿ ನರಸೀಪುರದಲ್ಲಿ ಬಾಟಲಿ ನೀರು ಕುಡಿದು 5 ವರ್ಷದ ಬಾಲಕ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ವೈರಸ್ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಮಧ್ಯಾಹ್ನದ ಊಟದೊಂದಿಗೆ ಪೋಷಕರು ಕ್ರಿಸ್ಟಲ್‌ ಕಂಪೆನಿಯ ಬಾಟಲಿ ನೀರು ಖರೀದಿ ಮಾಡಿ ಮಗುವಿಗೆ ಕೊಟ್ಟಿದ್ದರು.

Vijaya Karnataka Web 12 Mar 2020, 4:39 pm
ಮೈಸೂರು: ಇತ್ತೀಚಿನ ದಿನಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಏಂಬ ಗೊಂದಲ ನಮ್ಮ ತಲೆ ಹೊಕ್ಕುವುದು ಸಾಮಾನ್ಯ. ಅದಕ್ಕೆ ಪೂರವೆಂಬಂತಹ ಘಟನೆಯೊಂದು ನಮ್ಮ ನಡುವೆಯೇ ನಡೆದಿದೆ. ಬೇಸಿಗೆ ಹಿನ್ನೆಲೆ ಹೆಚ್ಚಾಗಿ ನಾವು ಕುಡಿಯುವ ನೀರಿನ ಮೊರೆ ಹೋಗುತ್ತೇವೆ. ದಾಹ ತೀರಿಸಿಕೊಳ್ಳಲು ನೀರೇ ಪರಿಹಾರ. ಆದರೆ ಅದೇ ನೀರೇ ಮೃತ್ಯಕೂಪದತ್ತ ದೂಡಿದರೇ ಗತಿ ಏನು ?
Vijaya Karnataka Web ಮೈಸೂರು


ಹೌದು, ಮೈಸೂರಿನ ಟಿ ನರಸೀಪುರದಲ್ಲಿ ಕ್ರಿಸ್ಟಲ್‌ ಎಂಬ ನೀರಿನ ಕಂಪೆನಿಯ ಬಾಟಲಿ ನೀರು ಕುಡಿದು ಶಾಲಾ ಬಾಲಕ ಅಸ್ವಸ್ಥಗೊಂಡ ಘಟನೆ ನಡೆದಿದೆ. ಮಗುವಿನ ಶಾಲೆಗೆ ಮಧ್ಯಾಹ್ನದ ಊಟದೊಂದಿಗೆ ಪೋಷಕರು ಇತ್ತೀಚೆಗೆ ವೈರಸ್‌ ಸೋಂಕು ಹರಡುತ್ತಿದ್ದ ಹಿನ್ನೆಲೆ ಪ್ಯಾಕೇಜ್ಡ್‌ ವಾಟರ್‌ ಕೊಡೋಣವೆಂದು ಹತ್ತಿರದ ಅಂಗಡಿಗೆ ತೆರಳಿ ಈ ಕ್ರಿಸ್ಟಲ್‌ ಕಂಪೆನಿಯ ನೀರಿನ ಬಾಟೆಲ್‌ ಕೊಟ್ಟಿದ್ದಾರೆ.

ಆದರೆ ಊಟವಾದ ಬಳಿಕ ಇದೇ ಬಾಟಲ್ ನೀರು ಕುಡಿದ ಬಾಲಕ ಕೂಡಲೇ ವಾಂತಿ ಮಾಡಿಕೊಂಡಿದ್ದಾನೆ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದಾರೆ. ಅಸ್ವಸ್ಥ ಬಾಲಕನನ್ನು ಪ್ರಣವ್ ( 5) ವರ್ಷ ಎಂದು ಗುರುತಿಸಲಾಗಿದೆ. ಅಲ್ಲದೇ ತಮ್ಮ ಮಗು ಕುಡಿದ ನೀರಿನಲ್ಲಿ ಆಸಿಡ್ ಮಿಶ್ರಿತವಾಗಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಕೂಡಲೇ ಈ ನೀರಿನ ಬಾಟಲಿ ಕಂಪೆನಿ ವಿರುದ್ಧ ತನಿಖೆ ನಡೆಸುಂತೆ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ