ಆ್ಯಪ್ನಗರ

ಗಜಪಯಣ: ಗಮನ ಸೆಳೆದ ಸಾಂಸ್ಕೃತಿಕ ನೃತ್ಯ

ಆದಿವಾಸಿ ಮಕ್ಕಳು ನಡೆಸಿಕೊಟ್ಟ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಗಜಪಯಣಕ್ಕೆ ಮತ್ತಷ್ಟು ಮೆರಗು ನೀಡಿತು.

Vijaya Karnataka 3 Sep 2018, 5:00 am
ಮೈಸೂರು : ಆದಿವಾಸಿ ಮಕ್ಕಳು ನಡೆಸಿಕೊಟ್ಟ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಗಜಪಯಣಕ್ಕೆ ಮತ್ತಷ್ಟು ಮೆರಗು ನೀಡಿತು.
Vijaya Karnataka Web focused cultural dance
ಗಜಪಯಣ: ಗಮನ ಸೆಳೆದ ಸಾಂಸ್ಕೃತಿಕ ನೃತ್ಯ


ವೀರನಹೊಸಳ್ಳಿ ಗೇಟ್‌ ಬಳಿ ಗಜಪಯಣದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ವೀರನ ಹೊಸಹಳ್ಳಿ ಹಾಡಿಯ ಆದಿವಾಸಿ ದಂಪತಿ ಪುಟ್ಟಯ್ಯ ಮತ್ತು ತಾಯಮ್ಮ ದಂಪತಿ ಚಾಲನೆ ನೀಡಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಡಿನ ಮಕ್ಕಳು ಆದಿವಾಸಿಗಳ ಗೌಜಲ ಹಕ್ಕಿ ಹಾಡಿಗೆ ಕುಣಿದು ಕುಪ್ಪಳಿಸಿದರು. ನಾಗಪುರ ಗಿರಿಜನ ವಿದ್ಯಾರ್ಥಿಗಳು ''ಹಚ್ಚೇವು ಕನ್ನಡ ದೀಪ'' ಹಾಡಿಗೆ ದೀಪ ಹಿಡಿದು ಹೆಜ್ಜೆಹಾಕಿದರು. ನಿರಾಶ್ರಿತ ಟಿಬೇಟಿಯನ್‌ ಶಾಲೆಯ ಚಿಣ್ಣರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು.

''ಹೂವು ಹೂವು'' ಹಾಡಿಗೆ ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದ್ದ ಮಕ್ಕಳ ನೃತ್ಯ ನೋಡುಗರ ಮೆಚ್ಚುಗೆ ಗಳಿಸಿತು. ಗಿರಿಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೂಗ..ದೂಗ ಹಾಡಿಗೂ ಹೆಜ್ಜೆ ಹಾಕಿದರು. ಗುರುಪುರ ಟಿಬೇಟಿಯನ್‌ ನಿರಾಶ್ರಿತರ ಕ್ಯಾಂಪಿನ ಟಿಬೇಟಿಯನ್‌ ಶಾಲೆಯ ಪುಟಾಣಿಗಳು ಟಿಬೇಟಿಯನ್‌ ಸಂಪ್ರದಾಯವನ್ನು ಸಾರುವ ಹಾಡಿಗೆ ನರ್ತಿಸಿದರು. ಹರಳಹಳ್ಳಿಯ ಕಾಡುಕುರುಬ ಮಕ್ಕಳು ''ಅಡವಿದೇವಿಯ'' ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದರು. ಜನಪದ ಹಾಡುಗಾರ ಅಮ್ಮ ರಾಮಚಂದ್ರ ಮತ್ತವರ ತಂಡ ಜಾನಪದ ಮತ್ತು ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಗ್ರಾಮಗಳಲ್ಲಿ ದಸರಾ ಮಹೋತ್ಸವ: ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಈ ಶುಭ ಕಾರ್ಯದ ದಿನ ಮಳೆಯೂ ಇಲ್ಲ. ಬಿಸಿಲು ಇಲ್ಲದ ಉತ್ತಮ ವಾತಾವರಣವಿದೆ. ಕಾರ್ಯಕ್ರಮಕ್ಕೆ ತಾಯಿ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಲಭಿಸಿದೆ. ಹಾಗಾಗಿ ಈ ಬಾರಿ ದಸರಾ ಮಹೋತ್ಸವವನ್ನು ಪ್ರತಿ ತಾಲೂಕಿನ ಹಳ್ಳಿಗಳಲ್ಲಿಯೂ ಯುವ ದಸರಾ, ರೈತ ದಸರಾ, ಮಹಿಳಾ ದಸರಾ ಆಯೋಜಿಸಲಾಗುವುದು. ಗ್ರಾಮಿಣ ಜನರಿಗೆ ಮೈಸೂರಿನ ತಾಣಗಳನ್ನು ಪರಿಚಿಸಲು ವಿಶೇಷ ಪ್ರವಾಸ ಆಯೋಜಿಸಲಾಗುವುದು. ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಜಾತಿ, ಪಕ್ಷ ದ ದಸರಾವಲ್ಲ. ಹಾಗಾಗಿ ಪ್ರತಿಯೊಬ್ಬರೂ ದಸರಾ ಮಹೋತ್ಸವದಲ್ಲಿ ಭಾಗಿಯಾಗಬೇಕು,'' ಎಂದರು.

ಸಚಿವ ಸಾ.ರಾ ಮಹೇಶ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಅಡಗೂರು ಎಚ್‌. ವಿಶ್ವನಾಥ್‌, ಶಾಸಕ ಅಶ್ವಿನ್‌ ಕುಮಾರ್‌, ಶಾಸಕರಾದ ಹರ್ಷವರ್ದನ್‌, ಧರ್ಮಸೇನಾ, ಜಯಮಾಲ, ಸಂಸದ ಪ್ರತಾಪ್‌ ಸಿಂಹ ಪತ್ನಿ ಅರ್ಪಿತಾ ಪ್ರತಾಪ್‌ ಸಿಂಹ ಹಾಗೂ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ