ಮದ್ದೂರು/ಮೈಸೂರು: ಅಪಘಾತವಾದಾಗ ನೆರವು ನೀಡುವ ಬದಲು ವಿಡಿಯೊ ಚಿತ್ರೀಕರಣ ಮಾಡುವ, ಫೋಟೊ ತೆಗೆಯುವ ಪ್ರಕರಣಗಳು ಮತ್ತೆ ಮರುಕಳಿಸಿದೆ.
ಮದ್ದೂರಿನಲ್ಲಿ ಏ. 11ರಂದು ರೈಲಿನ ಗಾಲಿಗೆ ಸಿಲುಕಿದ ಪ್ರಯಾಣಿಕ ಆಂಧ್ರ ಪ್ರದೇಶದ ಗುಂಟೂರಿನ ಕೂಲಿ ಕಾರ್ಮಿಕ ಕಿಶೋರ್ ಅವರ ಎಡಗಾಲು ತುಂಡಾಗಿ, ರಕ್ತದ ಮಡುವಿನಲ್ಲಿ ಸುಮಾರು 20 ನಿಮಿಷ ಪರದಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಹಾಯಕ್ಕೆ ಅಂಗಲಾಚಿದರೂ ಯಾರೂ ಬಾರದ ಕಾರಣ ಸ್ವತಃ ತೆವಳಿಕೊಂಡು ಆಟೊ ಹತ್ತಿ ಆಸ್ಪತ್ರೆಗೆ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಿಶೋರ್ ಹೇಳುವುದಿಷ್ಟು
ಏ. 11ರ ಸಂಜೆ 4.15ರ ಸಮಯದಲ್ಲಿ ಮದ್ದೂರು(ಶಿವಪುರ) ರೈಲ್ವೆ ನಿಲ್ದಾಣದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಎಕ್ಸ್ಪ್ರೆಸ್ ರೈಲು ಚಲಿಸುತ್ತಿದ್ದಾಗ ನಾನು ಹತ್ತಲು ಹೋಗಿ ಆಯ ತಪ್ಪಿ ಬಿದ್ದೆ. ರೈಲಿನ ಚಕ್ರಕ್ಕೆ ಕಾಲು ಸಿಲುಕಿತು. ಕ್ಷಣದಲ್ಲಿ ಎಡಗಾಲು ತುಂಡಾಗಿ ರಕ್ತದ ಮಡುವಿನಲ್ಲಿದ್ದೆ. ಮತ್ತೊಂದು ಕಾಲಿಗೆ ಗಾಯವಾಗಿತ್ತು. ಸಹಾಯಕ್ಕಾಗಿ 20 ನಿಮಿಷಕ್ಕೂ ಹೆಚ್ಚು ಕಾಲ ಕೂಗಾಡಿದೆ. ಸಾರ್ವಜನಿಕರಾಗಲಿ, ರೈಲ್ವೆ ಪೊಲೀಸ್ ಸಿಬ್ಬಂದಿಯಾಗಲಿ ನೆರವಿಗೆ ಬಾರಲಿಲ್ಲ. ಕೊನೆಗೆ ನಾನೇ ತೆವಳಿಕೊಂಡು ಹೋಗಿ ಆಟೋ ರಿಕ್ಷಾದಲ್ಲಿ ಕುಳಿತೆ. ಚಾಲಕ ಮದ್ದೂರು ಆಸ್ಪತ್ರೆಗೆ ಸೇರಿಸಿದ. ಬಳಿಕ ಮಂಡ್ಯ ಆಸ್ಪತ್ರೆಗೆ ವರ್ಗಾಯಿಸಿದರು. ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದೇನೆ. ಅಪಘಾತವಾಗಿ ಗಾಯಗೊಂಡ ನನ್ನನ್ನು ಆಸ್ಪತ್ರೆಗೆ ಸಾಗಿಸದೆ ಕೆಲವರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಬೇಗ ನನ್ನನ್ನು ಆಸ್ಪತ್ರೆಗೆ ತಲುಪಿಸಿದ್ದರೆ ನೋವಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಕಾಲು ತುಂಡರಿಸಿದಾಗ ನೋವಿನಿಂದ ಚೀರುತ್ತಿದ್ದ ನನ್ನ ಸ್ಥಿತಿ ಯಾವ ಶತ್ರುವಿಗೂ ಬೇಡ ಎನ್ನುತ್ತಾರೆ. ಆದರೆ, ಕಿಶೋರ್ ಮಾತನ್ನು ಒಪ್ಪದ ರೈಲ್ವೆ ಪೊಲೀಸರು, ‘ನಮ್ಮ ಪೇದೆಯೇ ಅವನನ್ನು ಕರೆದುಕೊಂಡು ಹೋಗಿ ಆಸ್ಪತ್ರೆ ಸೇರಿಸಿದ್ದಾರೆ’’ ಎನ್ನುತ್ತಾರೆ.
ನಮ್ಮ ಪೇದೆ ಬೀರೇಶ್ ಎಂಬುವವರು ಸಕಾಲಕ್ಕೆ ಕಿಶೋರ್ ಸಹಾಯಕ್ಕೆ ಧಾವಿಸಿ, ಸ್ವಂತ ಹಣದಿಂದಲೇ ಆಟೊದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಡರಾತ್ರಿವರೆಗೂ ಅವರೊಂದಿಗೆ ಉಳಿದು ಉಪಚರಿಸಿದ್ದಾರೆ.
- ಡಿ.ಆರ್. ಸುರೇಶ್, ರೈಲ್ವೆ ಎಎಸ್
ಮದ್ದೂರಿನಲ್ಲಿ ಏ. 11ರಂದು ರೈಲಿನ ಗಾಲಿಗೆ ಸಿಲುಕಿದ ಪ್ರಯಾಣಿಕ ಆಂಧ್ರ ಪ್ರದೇಶದ ಗುಂಟೂರಿನ ಕೂಲಿ ಕಾರ್ಮಿಕ ಕಿಶೋರ್ ಅವರ ಎಡಗಾಲು ತುಂಡಾಗಿ, ರಕ್ತದ ಮಡುವಿನಲ್ಲಿ ಸುಮಾರು 20 ನಿಮಿಷ ಪರದಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಹಾಯಕ್ಕೆ ಅಂಗಲಾಚಿದರೂ ಯಾರೂ ಬಾರದ ಕಾರಣ ಸ್ವತಃ ತೆವಳಿಕೊಂಡು ಆಟೊ ಹತ್ತಿ ಆಸ್ಪತ್ರೆಗೆ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಿಶೋರ್ ಹೇಳುವುದಿಷ್ಟು
ಏ. 11ರ ಸಂಜೆ 4.15ರ ಸಮಯದಲ್ಲಿ ಮದ್ದೂರು(ಶಿವಪುರ) ರೈಲ್ವೆ ನಿಲ್ದಾಣದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಎಕ್ಸ್ಪ್ರೆಸ್ ರೈಲು ಚಲಿಸುತ್ತಿದ್ದಾಗ ನಾನು ಹತ್ತಲು ಹೋಗಿ ಆಯ ತಪ್ಪಿ ಬಿದ್ದೆ. ರೈಲಿನ ಚಕ್ರಕ್ಕೆ ಕಾಲು ಸಿಲುಕಿತು. ಕ್ಷಣದಲ್ಲಿ ಎಡಗಾಲು ತುಂಡಾಗಿ ರಕ್ತದ ಮಡುವಿನಲ್ಲಿದ್ದೆ. ಮತ್ತೊಂದು ಕಾಲಿಗೆ ಗಾಯವಾಗಿತ್ತು. ಸಹಾಯಕ್ಕಾಗಿ 20 ನಿಮಿಷಕ್ಕೂ ಹೆಚ್ಚು ಕಾಲ ಕೂಗಾಡಿದೆ. ಸಾರ್ವಜನಿಕರಾಗಲಿ, ರೈಲ್ವೆ ಪೊಲೀಸ್ ಸಿಬ್ಬಂದಿಯಾಗಲಿ ನೆರವಿಗೆ ಬಾರಲಿಲ್ಲ. ಕೊನೆಗೆ ನಾನೇ ತೆವಳಿಕೊಂಡು ಹೋಗಿ ಆಟೋ ರಿಕ್ಷಾದಲ್ಲಿ ಕುಳಿತೆ. ಚಾಲಕ ಮದ್ದೂರು ಆಸ್ಪತ್ರೆಗೆ ಸೇರಿಸಿದ. ಬಳಿಕ ಮಂಡ್ಯ ಆಸ್ಪತ್ರೆಗೆ ವರ್ಗಾಯಿಸಿದರು. ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದೇನೆ. ಅಪಘಾತವಾಗಿ ಗಾಯಗೊಂಡ ನನ್ನನ್ನು ಆಸ್ಪತ್ರೆಗೆ ಸಾಗಿಸದೆ ಕೆಲವರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಬೇಗ ನನ್ನನ್ನು ಆಸ್ಪತ್ರೆಗೆ ತಲುಪಿಸಿದ್ದರೆ ನೋವಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಕಾಲು ತುಂಡರಿಸಿದಾಗ ನೋವಿನಿಂದ ಚೀರುತ್ತಿದ್ದ ನನ್ನ ಸ್ಥಿತಿ ಯಾವ ಶತ್ರುವಿಗೂ ಬೇಡ ಎನ್ನುತ್ತಾರೆ. ಆದರೆ, ಕಿಶೋರ್ ಮಾತನ್ನು ಒಪ್ಪದ ರೈಲ್ವೆ ಪೊಲೀಸರು, ‘ನಮ್ಮ ಪೇದೆಯೇ ಅವನನ್ನು ಕರೆದುಕೊಂಡು ಹೋಗಿ ಆಸ್ಪತ್ರೆ ಸೇರಿಸಿದ್ದಾರೆ’’ ಎನ್ನುತ್ತಾರೆ.
ನಮ್ಮ ಪೇದೆ ಬೀರೇಶ್ ಎಂಬುವವರು ಸಕಾಲಕ್ಕೆ ಕಿಶೋರ್ ಸಹಾಯಕ್ಕೆ ಧಾವಿಸಿ, ಸ್ವಂತ ಹಣದಿಂದಲೇ ಆಟೊದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಡರಾತ್ರಿವರೆಗೂ ಅವರೊಂದಿಗೆ ಉಳಿದು ಉಪಚರಿಸಿದ್ದಾರೆ.
- ಡಿ.ಆರ್. ಸುರೇಶ್, ರೈಲ್ವೆ ಎಎಸ್