ಆ್ಯಪ್ನಗರ

ಮೈಸೂರು ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಮೇಯರ್ ಆಗಿ ಆಯ್ಕೆ

ಬಹು ನಿರೀಕ್ಷಿತೆ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆ ಮುಗಿದಿದ್ದು, ಕಾಂಗ್ರೆಸ್‍-ಜೆಡಿಎಸ್‍ ಮೈತ್ರಿ ಮುಂದುವರಿದಿದೆ. ಒಪ್ಪಂದದಂತೆ ಜೆಡಿಎಸ್‍ನ ತಸ್ಲಿಂ ಮೇಯರ್ ಹಾಗೂ ಕಾಂಗ್ರೆಸ್‍ನ ಸಿ.ಶ್ರೀಧರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Vijaya Karnataka Web 18 Jan 2020, 4:38 pm
ಮೈಸೂರು : ಬಹು ನಿರೀಕ್ಷಿತೆ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆ ಮುಗಿದಿದ್ದು, ಕಾಂಗ್ರೆಸ್‍-ಜೆಡಿಎಸ್‍ ಮೈತ್ರಿ ಮುಂದುವರಿದಿದೆ. ಒಪ್ಪಂದದಂತೆ ಜೆಡಿಎಸ್‍ನ ತಸ್ಲಿಂ ಮೇಯರ್ ಹಾಗೂ ಕಾಂಗ್ರೆಸ್‍ನ ಸಿ.ಶ್ರೀಧರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಆಯುಕ್ತ ಯಶವಂತ್‍ ನೇತೃತ್ವದಲ್ಲಿ ಚುನಾವಣೆ ನಡೆದಿದೆ.
Vijaya Karnataka Web mysuru muslim mayor


33ನೇ ಮೇಯರ್ ಆಗಿ ಆಯ್ಕೆಯಾದ ತಸ್ಲಿಂ ಮುಸ್ಲಿಂ ಸಮುದಾಯದ ಮೊದಲ ಮಹಿಳಾ ಮೇಯರ್ ಪಟ್ಟಕ್ಕೇರಿದ್ದಾರೆ. ಇಂದು ಬೆಳಿಗ್ಗೆ 11.30ಕ್ಕೆ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಗರದ 26ನೇ ವಾರ್ಡ್‍ನ ತಸ್ಲಿಂ 47 ಸದಸ್ಯರ ಬೆಂಬಲ ಪಡೆದರು. ಇವರ ಎದುರಾಳಿಯಾಗಿ 65ನೇ ವಾರ್ಡ್‍ನ ಸದಸ್ಯೆ ಗೀತಾಶ್ರೀ ಯೋಗಾನಂದ್‍ ಅವರು ಬಿಜೆಪಿ ಅಭ್ಯರ್ಥಿಯಾಗಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಗೀತಾರವರು 22 ಸದಸ್ಯರು ಬೆಂಬಲ ಪಡೆದರು

ಬಿಎ ಓದಿರುವ ತಸ್ಲಿಂ ರವರು ಇದೇ ಎರಡನೇ ಬಾರಿಗೆ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದು ಇವರ ಪತಿ ಸಯ್ಯದ್ ಸಮೀ ಉಲ್ಲಾಅವರೊಂದಿಗೆ ರಾಜಕಾರಣದಲ್ಲಿ ತೊಡಗಿದ್ದಾರೆ. ಇನ್ನು ತಸ್ಲಿಂ ಮಾವ ನಸೀರ್ ಉದ್ದಿನ್ 4 ಬಾರಿ ಮೀನಾ ಬಜಾರ್ ವಾರ್ಡ್ ನಲ್ಲಿ ಪಾಲಿಕೆ ಸದಸ್ಯರಾಗಿದ್ದರು. ನಂತರ 26 ವಾರ್ಡ್ ಮಹಿಳಾ ಮೀಸಲಾತಿ ಹಿನ್ನಲೆ ಸೊಸೆಗೆ ಸ್ಥಾನ ಬಿಟ್ಟುಕೊಟ್ಟರು. 34 ವರ್ಷ ತಸ್ಲೀಂರವರು ಅತಿ ಕಿರಿಯ ವಯಸ್ಸಿನಲ್ಲಿ ಇದೇ ಮೊದಲ ಬಾರಿಗೆ ಮೇಯರ್‌ ಸ್ಥಾನಕ್ಕೇರಿದ್ದಾರೆ.

ಹುಬ್ಬಳ್ಳಿಗೆ ಅಮಿತ್ ಶಾ ಆಗಮನ: ಕಪ್ಪು ಬಲೂನು ಹಾರಾಟ, ಪ್ರತಿಭಟನಾಕಾರರ ಬಂಧನ!

ಉಪಮೇಯರ್‌ ಚುನಾವಣೆ ಹಿನ್ನೆಲೆ 38ನೇ ವಾರ್ಡ್‍ನ ಸದಸ್ಯ ಸಿ.ಶ್ರೀಧರ್ 47 ಸದಸ್ಯರ ಬೆಂಬಲ ಪಡೆದು ಉಪಮೇಯರ್ ಆಗಿ ಆಯ್ಕೆಯಾದರು. ಚುನಾವಣೆಗೆ ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್‍.ಎ.ರಾಮದಾಸ್‍, ತನ್ವೀರ್ ಸೇಠ್ ಮೇಯರ್‍ ಚುನಾವಣೆಯಲ್ಲಿ ಗೈರಾಗಿದ್ದರು.

ಕಳೆದ ವರ್ಷ ನಡೆದ ಒಪ್ಪಂದದ ಪ್ರಕಾರ ಪಾಲಿಕೆಯಲ್ಲಿ ಮೊದಲ ಹಾಗೂ ಮೂರನೇ ಅವಧಿಗೆ ಕಾಂಗ್ರೆಸ್, ಎರಡನೇ, ನಾಲ್ಕನೇ ಹಾಗೂ ಐದನೇ ಅವಧಿಗೆ ಜೆಡಿಎಸ್ ಪಕ್ಷದವರು ಮೇಯರ್ ಆಗಲಿದ್ದಾರೆ ಎಂದು ನಡೆದಿತ್ತು.ಇನ್ನು ಮೇಯರ್-‌ ಉಪಮೇಯರ್‌ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸಿ ಖುಷಿಪಟ್ಟರು.

ಮೇಯರ್-‌ ಉಪಮೇಯರ್‌ ಆಯ್ಕೆಯ ಬಳಿ ನಾಲ್ಕು ಸ್ಥಾಯಿ‌ ಸಮಿತಿ ಸದಸ್ಯರು ಆಯ್ಕೆಯಾಗಿದ್ದಾರೆ. ತೆರಿಗೆ ಸುಧಾರಣೆ, ಹಣಕಾಸು ಮತ್ತು ಅಪೀಲು ಸಮಿತಿಗೆ, ನಿರ್ಮಲಾ, ಸವಿತಾ, ಸೌಮ್ಯ, ಲಕ್ಷ್ಮೀ, ಅಕ್ಮಲ್ ಪಾಷಾ, ಶಮೀ ಉಲ್ಲಾ, ಜಿ‌.ಎಸ್.ಸತ್ಯರಾಜು ಆಯ್ಕೆಯಾದರೇ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿಗೆ ಶೋಭಾ, ಗೋಪಿ, ಭಾಗ್ಯ, ಅಯಾಜ್ ಪಾಷಾ, ಉಷಾ, ಶಾರದಮ್ಮ, ಭುವನೇಶ್ವರಿ ಆಯ್ಕೆಯಾದರು.

ಪಟ್ಟಣ ಯೋಜನೆ ಮತ್ತು ಸುಧಾರಣಾ ಸಮಿತಿಗೆ ಸಯ್ಯದ್ ಅಶ್ರತ್ ಉಲ್ಲಾ, ಶ್ರೀನಿವಾಸ್, ರುಕ್ಮಿಣಿ, ರಮೇಶ್, ಅಜೀರಾ ಶೀಮಾ, ಸುನಂದ ಪಾಲನೇತ್ರ, ಪ್ರಮಿಳಾ ಭರತ್. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಶ್ವಿನಿ ಅನಂತು, ಬೇಗಂ ಪಲ್ಲವಿ, ಛಾಯಾದೇವಿ, ವೇದಾವತಿ, ಅಯೂಬ್ ಖಾನ್, ಆರಿಫ್ ಹುಸೇನ್, ಪ್ರದೀಪ್ ಚಂದ್ರ ಸೇರಿದಂತೆ ಎಲ್ಲಾ ಸಮಿತಿಗಳಿಗೂ ತಲಾ 7 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ