ಆ್ಯಪ್ನಗರ

ಮೈಸೂರು: ಸುರಕ್ಷಿತವಾಗಿ ಕಾಡು ಸೇರಿದ ಒಂಟಿ ಸಲಗ..! ಅರಣ್ಯಾಧಿಕಾರಿಗಳ ಪ್ರಯತ್ನ ಸಫಲ

ನಂಜನಗೂಡು ತಾಲೂಕಿನ ಜಮೀನೊಂದರಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಕಾಡಿಗೆ ಸೇರಿಸಲು ಯಶಸ್ವಿಯಾಗಿದ್ದಾರೆ. ಬಳ್ಳೂರು ಹುಂಡಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಆನೆಯನ್ನು ಚದುರಿಸಲು ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದ್ದರು.

Vijaya Karnataka Web 24 Jan 2021, 10:23 pm
ನಂಜನಗೂಡು (ಮೈಸೂರು): ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ಜಮೀನೊಂದರಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಚದುರಿಸಲು ಸುತ್ತಲಿನ ಗ್ರಾಮಸ್ಥರು ಘಾಸಿಗೊಳಿಸಿದ ವೇಳೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web wild ele
ಸಾಂದರ್ಭಿಕ ಚಿತ್ರ


ನಂಜನಗೂಡು ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಸ್‌.ಮಹದೇವಪ್ಪನವರ ಜಮೀನಿನಲ್ಲಿ ಶನಿವಾರ ಕಾಣಿಸಿಕೊಂಡ ಒಂಟಿ ಸಲಗ ಹಗಲಿನಲ್ಲೂ ಜಮೀನಿನಲ್ಲೇ ಬೀಡುಬಿಟ್ಟಿತ್ತು. ಮಾಹಿತಿ ಪಡೆದು ಸುತ್ತಮುತ್ತಲಿನ ಕೆಲ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಆನೆಯನ್ನು ಚದುರಿಸುವ ಪ್ರಯತ್ನ ನಡೆಸಿ ಕಲ್ಲು ತೂರಾಟ ಮಾಡಿದರು.

ಜೋರು ಶಬ್ದದೊಡನೆ ಆನೆಯನ್ನು ಚದುರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಜಮೀನಿನ ಸುತ್ತ ಸೋಲಾರ್‌ ತಂತಿ ಅಳವಡಿಸಿದ್ದರಿಂದ ಆನೆ ಹೊರ ಹೋಗಲು ಹಿಂದೇಟು ಹಾಕಿ ಜಮೀನಿನಲ್ಲೇ ಸುತ್ತಾಟ ಮಾಡಿದೆ. ಈ ವೇಳೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ನೆರೆದಿದ್ದ ಜನರನ್ನು ಚದುರಿಸಿ ಸಂಜೆ ನಂತರ ಪಟಾಕಿ ಸಿಡಿಸಿ ಆನೆಯನ್ನು ವಾಪಸ್‌ ಕಾಡಿಗೆ ಅಟ್ಟುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ