ಮೈಸೂರು: ತಾವು ಶಾಸಕರಾಗಿದ್ದ ಅವಧಿಯಲ್ಲಿ ಶ್ರಮಿಸಿ, ಒತ್ತಡ ಹಾಕಿ ತಂದ ಆಶ್ರಯ ಮನೆ ಯೋಜನೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯ ಯೋಜನೆಗಳಿಗೆ ಶಾಸಕ ರಾಮ್ ದಾಸ್ ತಡೆಯೊಡ್ಡಿರುವುದಾಗಿ ಮಾಜಿ ಶಾಸಕ ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಸೋಮಶೇಖರ್ , ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ಮೂಡಾ ಪ್ರಾಧಿಕಾರದಿಂದ ಎಲ್ಲ ಸದಸ್ಯರ ಮನವೊಲಿಸಿ ವಿಶ್ವೇಶ್ವರ ನಗರದಲ್ಲಿ 868, ಮಳಲವಾಡಿಯಲ್ಲಿ 1,344 ಸೇರಿ ಒಟ್ಟು 2,212 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ನನ್ನ ಅವಧಿಯಲ್ಲಿ ಶ್ರಮವಹಿಸಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಈ ಮನೆಗಳಿಗೆ ಬೇಕಾದ ಜಮೀನನನ್ನು ಪ್ರಕಟಿಸಲಾಗಿತ್ತು. ಆಯ್ಕೆಯಾಗಿರುವ ಕುರಿತು ಫಲಾನುಭವಿಗಳಿಗೆ ಕರೆ ಮಾಡಿ ತಿಳಿಸಲಾಗಿತ್ತು.
ಅದೇ ರೀತಿ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಲಲಿತಾದ್ರಿಪುರದಲ್ಲಿ 1,440 ಹಾಗೂ ಗೂರೂರಿನಲ್ಲಿ 1,644 ಮನೆಗಳು ಸೇರಿದಂತೆ ಒಟ್ಟು 3,088 ಮನೆಗಳಿಗೆ ಆಶ್ರಯ ಸಮಿತಿ ಅನುಮೋದನೆ ನೀಡಿದೆ. ಅದಕ್ಕೆ ಬೇಕಾದ 18 ಕೋಟಿ ಅನುದಾನವನ್ನು ಪ್ರಕಟಿಸಿದೆ. ಗುತ್ತಿಗೆದಾರರು ಮನೆ ಕಟ್ಟಲು ಬಂದಿರುವಾಗ ಅವರಿಗೆ ಬೆದರಿಕೆ ಹಾಕಿ ಕೆಲಸ ಪ್ರಾರಂಭವಾಗದಂತೆ ಶಾಸಕ ರಾಮದಾಸ್ ತಡೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಮಾಡಿದ ಹಲವಾರು ಯೋಜನೆಯ ಎಲ್ಲಾ ಕೆಲಸಗಳು ಇಂದಿಗೂ ಮುಂದುವರಿಯುತ್ತಿದೆ. ಆದರೆ ಇಲ್ಲಿನ ಬಡವರ ಒಂದು ಸೂರು ಕಟ್ಟಿಕೊಳ್ಳುವ ವಿಚಾರದಲ್ಲಿ ರಾಜಕೀಯ ಮಾಡಿ ಅವರನ್ನು ಬೀದಿಗೆ ಬೀಳುವಂತೆ ಮಾಡುವ ಕ್ರೂರತ್ವವೇಕೆ ? ಇನ್ನು 151 ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿಲ್ಲವೆಂದರೆ ಮುಂದಿನ ದಿನದಲ್ಲಿ ಈ ಹೋರಾಟ ಉಗ್ರರೂಪ ತಾಳುತ್ತದೆ ಎಂದು ಎಚ್ಚರಿಸಿಕೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಸೋಮಶೇಖರ್ , ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ಮೂಡಾ ಪ್ರಾಧಿಕಾರದಿಂದ ಎಲ್ಲ ಸದಸ್ಯರ ಮನವೊಲಿಸಿ ವಿಶ್ವೇಶ್ವರ ನಗರದಲ್ಲಿ 868, ಮಳಲವಾಡಿಯಲ್ಲಿ 1,344 ಸೇರಿ ಒಟ್ಟು 2,212 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ನನ್ನ ಅವಧಿಯಲ್ಲಿ ಶ್ರಮವಹಿಸಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಈ ಮನೆಗಳಿಗೆ ಬೇಕಾದ ಜಮೀನನನ್ನು ಪ್ರಕಟಿಸಲಾಗಿತ್ತು. ಆಯ್ಕೆಯಾಗಿರುವ ಕುರಿತು ಫಲಾನುಭವಿಗಳಿಗೆ ಕರೆ ಮಾಡಿ ತಿಳಿಸಲಾಗಿತ್ತು.
ಅದೇ ರೀತಿ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಲಲಿತಾದ್ರಿಪುರದಲ್ಲಿ 1,440 ಹಾಗೂ ಗೂರೂರಿನಲ್ಲಿ 1,644 ಮನೆಗಳು ಸೇರಿದಂತೆ ಒಟ್ಟು 3,088 ಮನೆಗಳಿಗೆ ಆಶ್ರಯ ಸಮಿತಿ ಅನುಮೋದನೆ ನೀಡಿದೆ. ಅದಕ್ಕೆ ಬೇಕಾದ 18 ಕೋಟಿ ಅನುದಾನವನ್ನು ಪ್ರಕಟಿಸಿದೆ. ಗುತ್ತಿಗೆದಾರರು ಮನೆ ಕಟ್ಟಲು ಬಂದಿರುವಾಗ ಅವರಿಗೆ ಬೆದರಿಕೆ ಹಾಕಿ ಕೆಲಸ ಪ್ರಾರಂಭವಾಗದಂತೆ ಶಾಸಕ ರಾಮದಾಸ್ ತಡೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಮಾಡಿದ ಹಲವಾರು ಯೋಜನೆಯ ಎಲ್ಲಾ ಕೆಲಸಗಳು ಇಂದಿಗೂ ಮುಂದುವರಿಯುತ್ತಿದೆ. ಆದರೆ ಇಲ್ಲಿನ ಬಡವರ ಒಂದು ಸೂರು ಕಟ್ಟಿಕೊಳ್ಳುವ ವಿಚಾರದಲ್ಲಿ ರಾಜಕೀಯ ಮಾಡಿ ಅವರನ್ನು ಬೀದಿಗೆ ಬೀಳುವಂತೆ ಮಾಡುವ ಕ್ರೂರತ್ವವೇಕೆ ? ಇನ್ನು 151 ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿಲ್ಲವೆಂದರೆ ಮುಂದಿನ ದಿನದಲ್ಲಿ ಈ ಹೋರಾಟ ಉಗ್ರರೂಪ ತಾಳುತ್ತದೆ ಎಂದು ಎಚ್ಚರಿಸಿಕೆ ನೀಡಿದ್ದಾರೆ.