ಆ್ಯಪ್ನಗರ

ನಿವೇಶನದ ಹೆಸರಿನಲ್ಲಿ 5 ಲಕ್ಷ ರೂ. ವಂಚನೆ: ದೂರು

ಒಎಲ್‌ಎಕ್ಸ್‌ ಮೂಲಕ ನಿವೇಶನ ಖರೀದಿಸಲು ಹೋದ ವ್ಯಕ್ತಿಯೊಬ್ಬರು, ನಕಲಿ ಮಾಲೀಕನಿಗೆ ಐದು ಲಕ್ಷ ರೂ. ನೀಡಿ ಮೋಸ ಹೋಗಿದ್ದಾರೆ.

Vijaya Karnataka 13 Dec 2018, 5:00 am
ಮೈಸೂರು: ಒಎಲ್‌ಎಕ್ಸ್‌ ಮೂಲಕ ನಿವೇಶನ ಖರೀದಿಸಲು ಹೋದ ವ್ಯಕ್ತಿಯೊಬ್ಬರು, ನಕಲಿ ಮಾಲೀಕನಿಗೆ ಐದು ಲಕ್ಷ ರೂ. ನೀಡಿ ಮೋಸ ಹೋಗಿದ್ದಾರೆ.
Vijaya Karnataka Web news/mysuru/fraud
ನಿವೇಶನದ ಹೆಸರಿನಲ್ಲಿ 5 ಲಕ್ಷ ರೂ. ವಂಚನೆ: ದೂರು


ಮೈಸೂರು ನಗರದ ನಿವಾಸಿ ಹೇಮರಾಜು ಹಣ ಕಳೆದುಕೊಂಡವರು.

ಆಗಿದಿಷ್ಟು: 2017ರ ಸೆ.3ರಂದು ಯೋಗೇಶ್‌ ಎಂಬುವವರು ಒಎಲ್‌ಎಕ್ಸ್‌ನಲ್ಲಿ ನಿವೇಶನ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದು, ಇದನ್ನು ಗಮನಿಸಿದ ಹೇಮರಾಜು ಯೋಗೇಶ್‌ರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಯೋಗೇಶ್‌ ವಿಜಯನಗರದ ಒಂದೇ ಹಂತದಲ್ಲಿನ ನಿವೇಶವನನ್ನು ತೋರಿಸಿದ್ದು, ಸತೀಶ್‌ ಎಂಬುವವರನ್ನು ಮಾಲೀಕ ಎಂದು ಪರಿಚಯಿಸಿದ್ದಾರೆ. ನಿವೇಶನಕ್ಕೆ 1.7 ಕೋಟಿ ರೂ. ಆಗಲಿದ್ದು, ಅದಕ್ಕೆ ಐದು ಲಕ್ಷ ರೂ. ಮುಂಗಡ ನೀಡಬೇಕು ಎಂದು ಹೇಳಿ 2017 ಸೆ.16ರಂದು ಶಿವರಾಂಪೇಟೆಯ ವಿಘ್ನೇಶ್‌ ಗ್ರಾಫಿಕ್ಸ್‌ನಲ್ಲಿ ಹಣವನ್ನು ಪಡೆದಿದ್ದಾರೆ. ಬಳಿಕ ನಿವೇಶನ ಮಾಲೀಕರು ನಂದಾ ಎಂಬುವವರು ಎಂದು ತಿಳಿದು ಸತೀಶ್‌ ಅವರನ್ನು ಪ್ರಶ್ನಿಸಿದ್ದಕ್ಕೆ ನಿವೇಶನ ಖರೀದಿ ಸಂಬಂಧ ಸೇಲ್‌ ಅಗ್ರಿಮೆಂಟ್‌ ಮಾಡಿಕೊಂಡಿದ್ದು, ಅವರಿಂದ ರಿಜಿಸ್ಟರ್‌ ಆದ ಬಳಿಕ ನಿಮಗೆ ನೀಡುವುದಾಗಿ ಹೇಳಿದ್ದಾನೆ. ನಂತರ ಹಲವು ಬಾರಿ ಕೇಳಿದರೂ ನಿವೇಶನ ರಿಜಿಸ್ಟರ್‌ ಮಾಡಿಸಿಕೊಡದೇ ನೀಡಿದ್ದ ಹಣವನ್ನು ವಾಪಸ್‌ ನೀಡದೇ ಯೋಗೇಶ್‌ ಮತ್ತು ಸತೀಶ್‌ ವಂಚಿಸಿದ್ದಾರೆ ಎಂದು ಹೇಮರಾಜು ದೂರು ನೀಡಿದ್ದಾರೆ.

ಈ ಸಂಬಂಧ ದೇವರಾಜ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾಹಕ್ಕೆ ಪೀಡನೆ: ಯುವತಿ ನೇಣಿಗೆ ಶರಣು

ಮೈಸೂರು: ವಿವಾಹವಾಗುವಂತೆ ಪೀಡಿಸುತ್ತಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಜರ್‌ಬಾದ್‌ನ ನಿವಾಸಿ ಮಧು(22) ಮೃತರು. ಮಂಗಳವಾರ ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

''ವಿವಾಹಿತ ಜಗದೀಶ್‌ ಎಂಬಾತ ಮಧುಗೆ ನನ್ನನ್ನು ಮದುವೆಯಾಗುವಂತೆ ದೂರವಾಣಿ ಕರೆ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,'' ಎಂದು ಮೃತಳ ಸೋದರ ವಿನೋದ್‌ ದೂರು ನೀಡಿದ್ದಾರೆ. ಈ ಸಂಬಂಧ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ