ಅನರ್ಹ ಶಾಸಕರಿಂದಲೇ ಸವದಿ ಡಿಸಿಎಂ ಆಗಿರೋದು
ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ನಾವೆಲ್ಲ ಅಧಿಕಾರದಲ್ಲಿರೋದು, ಲಕ್ಷ್ಮಣ ಸವದಿ ಡಿಸಿಎಂ ಆಗಿರೋದು ಅನರ್ಹ ಶಾಸಕರಿಂದನೇ, ಆದರೂ ಅವರು ಯಾಕೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ತಿಳಿಯುತ್ತಿಲ್ಲ ಎಂದು ಸವದಿ ಅವರ ಹೇಳಿಕೆಗೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.
Vijaya Karnataka 27 Oct 2019, 5:00 am
ಹುಣಸೂರು: ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ನಾವೆಲ್ಲ ಅಧಿಕಾರದಲ್ಲಿರೋದು, ಲಕ್ಷ್ಮಣ ಸವದಿ ಡಿಸಿಎಂ ಆಗಿರೋದು ಅನರ್ಹ ಶಾಸಕರಿಂದನೇ, ಆದರೂ ಅವರು ಯಾಕೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ತಿಳಿಯುತ್ತಿಲ್ಲ ಎಂದು ಸವದಿ ಅವರ ಹೇಳಿಕೆಗೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.
ಹುಣಸೂರಿನಿಂದ ಮಾಜಿ ಸಚಿವ ಯೋಗೇಶ್ವರ್ ಸ್ಪರ್ಧಿಸಲು ಸಮೀಕ್ಷೆ ನಡೆಸುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ''ಇಲ್ಲಿ ಬಿಜೆಪಿಯಿಂದ ವಿಶ್ವನಾಥ್ ಅವರೇ ಫೈನಲ್, ಅವರದ್ದೇ ಅಂತಿಮ, ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಿದೆ. ಹಳ್ಳಿ ಹಕ್ಕಿ ಸಾಮಾನ್ಯವಲ್ಲ, ಚುನಾವಣೆಯಲ್ಲಿ ವಿಶ್ವನಾಥ್ ಹೇಳಿದ್ದೇ ಆಗೋದು,'' ಎಂದು ಮಾರ್ಮಿಕವಾಗಿ ನುಡಿದು, ''ಈ ವಿಜಯಶಂಕರ್ಗೆ, ಅವರ ಮನೆಯವರಿಗೂ ಪಕ್ಷ ಬಿಡುವಾಗಲೇ ಬೇಡಪ್ಪ ಅಂತ ಹೇಳಿದ್ದೆ, ಈಗೆಲ್ಲಅನುಭವಿಸಿ ಪಕ್ಷಕ್ಕೆ ಬರುತ್ತಿದ್ದಾರೆ,'' ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹುಣಸೂರಿನಿಂದ ಮಾಜಿ ಸಚಿವ ಯೋಗೇಶ್ವರ್ ಸ್ಪರ್ಧಿಸಲು ಸಮೀಕ್ಷೆ ನಡೆಸುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ''ಇಲ್ಲಿ ಬಿಜೆಪಿಯಿಂದ ವಿಶ್ವನಾಥ್ ಅವರೇ ಫೈನಲ್, ಅವರದ್ದೇ ಅಂತಿಮ, ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಿದೆ. ಹಳ್ಳಿ ಹಕ್ಕಿ ಸಾಮಾನ್ಯವಲ್ಲ, ಚುನಾವಣೆಯಲ್ಲಿ ವಿಶ್ವನಾಥ್ ಹೇಳಿದ್ದೇ ಆಗೋದು,'' ಎಂದು ಮಾರ್ಮಿಕವಾಗಿ ನುಡಿದು, ''ಈ ವಿಜಯಶಂಕರ್ಗೆ, ಅವರ ಮನೆಯವರಿಗೂ ಪಕ್ಷ ಬಿಡುವಾಗಲೇ ಬೇಡಪ್ಪ ಅಂತ ಹೇಳಿದ್ದೆ, ಈಗೆಲ್ಲಅನುಭವಿಸಿ ಪಕ್ಷಕ್ಕೆ ಬರುತ್ತಿದ್ದಾರೆ,'' ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.