ಆ್ಯಪ್ನಗರ

ಯುವ ಸಮುದಾಯಕ್ಕೆ ಗಾಂಧೀಜಿ ವಿಚಾರಧಾರೆ ಪ್ರಸ್ತುತ

ಗಾಂಧಿ ವಿಚಾರಧಾರೆ ನೆನೆಯುವ ಕಾರ‍್ಯಕ್ರಮಗಳನ್ನು ವರ್ಷಪೂರ್ತಿ ಆಚರಿಸಲು ನಿರ್ದೇಶಿಸಿರುವ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರಪಿತನ ಬಗ್ಗೆ ತಡವಾಗಿ ಜ್ಞಾನೋದಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ವ್ಯಂಗ್ಯವಾಡಿದರು.

Vijaya Karnataka 23 Oct 2018, 5:00 am
ಮೈಸೂರು : ಗಾಂಧಿ ವಿಚಾರಧಾರೆ ನೆನೆಯುವ ಕಾರ‍್ಯಕ್ರಮಗಳನ್ನು ವರ್ಷಪೂರ್ತಿ ಆಚರಿಸಲು ನಿರ್ದೇಶಿಸಿರುವ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರಪಿತನ ಬಗ್ಗೆ ತಡವಾಗಿ ಜ್ಞಾನೋದಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ವ್ಯಂಗ್ಯವಾಡಿದರು.
Vijaya Karnataka Web gandhijis ideas for youth community are currently
ಯುವ ಸಮುದಾಯಕ್ಕೆ ಗಾಂಧೀಜಿ ವಿಚಾರಧಾರೆ ಪ್ರಸ್ತುತ


ಮಾನಸ ಗಂಗೋತ್ರಿಯ ಗಾಂಧಿ ಭವನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಂಗಾಯಣ ಮತ್ತು ಮೈಸೂರು ವಿವಿ, ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗಾಂಧೀಜಿ ಕುರಿತ ಸಿಮೆಂಟ್‌ ಶಿಲ್ಪ ಕಲಾಕೃತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

''ಗಾಂಧೀಜಿ ಎಷ್ಟು ಪ್ರಸ್ತುತ ಎನ್ನುಧಿವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಅರ್ಥವಾಗಿದ್ದು, ಆದ್ದರಿಂದಲೆ ಬಾಪು ಕುರಿತು ವರ್ಷ ಪೂರ್ತಿ ಕಾರ‍್ಯಕ್ರಮ ಹಮ್ಮಿಕೊಂಡಿದ್ದಾರೆ'' ಎಂದು ಹೇಳಿದರು.

''ಗಾಂಧೀಜಿಯವರ ವಿಚಾರಧಾರೆ ಬಗ್ಗೆ ಯುವ ಸಮುದಾಯ ತಿಳಿದುಕೊಳ್ಳಬೇಕು. ಅಹಿಂಸಾತ್ಮಕ ಚಳವಳಿ, ಆಂದೋಲನ, ಶಾಂತಿ ಸಂದೇಶದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರ ಕುರಿತು ತಿಳಿಸುವ ಮತ್ತು ಅವರನ್ನು ಅನುಸರಿಸುವವರು ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಅವರ ಕುರಿತು ಮಾರ್ಗದರ್ಶನ ನೀಡುವವರ ಅಗತ್ಯವಿದೆ'' ಎಂದರು.

''ಹಳ್ಳಿಯಲ್ಲಿ ಜನತೆಗೆ ಮೂಲಸೌಕರ್ಯ ಒದಗಿಸಲು ಒಂದು ಗ್ರಾಮ ಪಂಚಾಯತ್‌, ಶಿಕ್ಷ ಣಕ್ಕಾಗಿ ಶಾಲೆ, ರೈತರ ಸಾಲ ಸೌಲಭ್ಯ ಹಾಗೂ ಅವರ ವ್ಯವಹಾರಕ್ಕಾಧಿಗಿ ಸಹಕಾರ ಸಂಘಗಳಿರಬೇಕೆಂದು ಕನಸು ಕಂಡರು. ಅದರಂತೆ ಇಂದು ಪ್ರತಿ ಹಳ್ಳಿಯಲ್ಲೂ ಅವೆಲ್ಲವೂ ಇವೆ. ಗಾಂಧೀಜಿಯವರ ಸಂಕಲ್ಪಗಳು, ಅವರ ಆದರ್ಶಗಳನ್ನು ಎಂದಿಗೂ ಮರೆಯಬಾರದು,''ಎಂದು ಹೇಳಿದರು.

'ಧಿ'ಗಾಂಧಿ ಅಧ್ಯಯನದಲ್ಲಿ ಈ ಕಾರ‍್ಯಕ್ರಮ ನಡೆಯುತ್ತಿದೆ. ನಾಡಿನ ನಾನಾ ಭಾಗಗಳಿಂದ ಗಣ್ಯರು, ಗಾಂಧಿವಾಧಿದಿಗಳು ಆಗಮಿಸಿದ್ದಾರೆ. ಈ ಕಾರ‍್ಯಕ್ರಮದಿಂದ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗ ದೂರವಾಗಿರುಧಿವುಧಿದರ ಅರ್ಥವೇನು? ಮುಂದಿನ ದಿನಗಳಲ್ಲಿ ನಡೆಯುವ ಕಾರ‍್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಧಿಕುಧಿ'' ಎಂದು ಸೂಚನೆ ನೀಡಿದರು.

ನನ್ನಗಿರುವುದು ಕಡಿಮೆ ಸಮಯ: ''ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ದಸರಾದಲ್ಲಿ ತೊಡಗಿಸಿಕೊಂಡಿದ್ದರಿಂದ ತನ್ನ ಖಾಧಿತೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಲಿಲ್ಲ. ವಿಶ್ವವಿದ್ಯಾಲಯದ ಕುಲಪತಿಗಳನ್ನು ಕರೆದು ಎರಡು ಸಭೆ ನಡೆಸಿದ್ದೇನೆ. ಇನ್ನೂ ಹಲವು ಯೋಜನೆಗಳಿವೆ. ನನಗಿರುವ ಕಡಿಮೆ ಸಮಯದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ನಾನು ಮಹತ್ತರ ಕೊಡುಗೆ ನೀಡಬೇಕೆಂದಿಧಿದೆ'' ಎಂದು ತಿಳಿಸಿದರು.

''ಪ್ರಾಥಮಿಕ ಶಿಕ್ಷಣ ನೀಡುವ ಶಿಕ್ಷಕರಿಗೆ ಕಧಿಡಿಮೆ ಸಂಬಳ, ಉನ್ನತ ಶಿಕ್ಷಣದಡಿ ಬೋಧನೆ ಮಾಡುವವರಿಗೆ ಲಕ್ಷಾಂತರ ರೂ. ಸಂಬಳವಿದೆ. ಶಿಕ್ಷಕರು ಮಾಡುವ ಎಳ್ಳಷ್ಟೂ ಕೆಲಸವನ್ನು ಪ್ರೊಫೆಸರ್‌ಗಳು ಮಾಡುವುದಿಲ್ಲ, ವಿದ್ಯಾರ್ಥಿಗಳಿಗೆ ಏನನ್ನು ಕಲಿಸುತ್ತಿದ್ದೇವೆ ಎಂಬುದನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆತ್ಮಾವಲೋಕನ ಮಾಡಿಕೊಳ್ಳಬೇಕು,'' ಎಂದರು.

ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಆಯಿಷಾ ಎಂ.ಶರೀಫ್‌, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಶಿಲ್ಪಿ ರು.ಕಾಳಾಚಾರ್‌, ಅಂತಾರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್‌, ಕುಲಸಚಿವ ಪ್ರೊ.ಆರ್‌.ರಾಜಣ್ಣ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಟಿ.ವೀರಪ್ಪ, ಪ್ರೊ.ಬಿ.ಕೆ.ಶಿವಣ್ಣ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ, ಚಿಂತಕ ಪ.ಮಲ್ಲೇಶ್‌, ಡಾ.ಎಸ್‌.ತುಕಾರಾಮ…, ಪಿ.ವಿಶ್ವನಾಥ್‌, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್‌ ಎಚ್‌.ವಿ.ಇಂದ್ರಮ್ಮ, ಗಾಂಧಿ ಭವನದ ಹಿಂದಿನ ನಿರ್ದೇಶಕ ಡಾ.ಎಸ್‌.ಶಿವರಾಜಪ್ಪ ಮುಂತಾದವರು ಇದ್ದರು.

30 ಕಲಾವಿದರಿಂದ ಶಿಲ್ಪ ಕಲಾಕೃತಿ ತಯಾರಿ

ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎನ್‌.ಶೇಖರ್‌, ''ಮುಂದಿನ 12 ದಿನಗಳ ಕಾಲ 30 ಕಲಾವಿದರು ಗಾಂಧೀಜಿ ಕುರಿತು ಸಿಮೆಂಟ್‌ ಶಿಲ್ಪ ಕಲಾಕೃತಿ ತಯಾರಿಸಲಿದ್ದಾರೆ. ಉಪ್ಪನ್ನು ಕೈಯಲ್ಲಿ ಹಿಡಿದು ಸತ್ಯಾಗ್ರಹ ಮಾಡಿದ್ದು, ದೆಹಲಿಯಲ್ಲಿರುವ ಧ್ಯಾನ ರೂಪದ ಗಾಂಧಿ, ಕಸ್ತೂರ್‌ಬಾ ಜತೆಗಿರುವ ಗಾಂಧಿ, ರವೀಂದ್ರನಾಥ್‌ ಠಾಗೂಧಿರ್‌ ಜತೆ ಇರುವ ಗಾಂಧಿಯ ಕಲಾಕೃತಿಗಳನ್ನು ತಯಾರಿಸಲಾಗುತ್ತದೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ