ಆ್ಯಪ್ನಗರ

ಗೌರಿ ಗಣೇಶ ಹಬ್ಬ: ಮೈಸೂರು-ವಿಜಯಪುರ ವಿಶೇಷ ರೈಲು

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ನೈರುತ್ಯ ರೈಲ್ವೆ ಮೈಸೂರು-ವಿಜಯಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆ ಕಲ್ಪಿಸಲಾಗಿದೆ.

Vijaya Karnataka 29 Aug 2019, 5:00 am
ಮೈಸೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ನೈರುತ್ಯ ರೈಲ್ವೆ ಮೈಸೂರು-ವಿಜಯಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆ ಕಲ್ಪಿಸಲಾಗಿದೆ.
Vijaya Karnataka Web gauri ganesh festival mysore vijayapur special train
ಗೌರಿ ಗಣೇಶ ಹಬ್ಬ: ಮೈಸೂರು-ವಿಜಯಪುರ ವಿಶೇಷ ರೈಲು


ಆ.30 ರಂದು(ಶುಕ್ರವಾರ)ಮಧ್ಯಾಹ್ನ 12.30 ಮೈಸೂರಿನಿಂದ ಹೊರಟು ಶನಿವಾರ ಬೆ.10.20 ಕ್ಕೆ ವಿಜಯಪುರ ತಲುಪಲಿದೆ. ಸೆ. 2ರಂದು(ಸೋಮವಾರ) ಸಂಜೆ 6 ಗಂಟೆಗೆ ವಿಜಾಪುರದಿಂದ ಹೊರಟು ಮಂಗಳವಾರ 1.05ಕ್ಕೆ ಮೈಸೂರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ನೈರುತ್ಯ ರೈಲ್ವೆ ಹುಬ್ಬಳಿ ವಿಭಾಗದಲ್ಲಿ ಕೆಲವು ಕಠಿಣ ಎಂಜಿನಿಯರಿಂಗ್‌ ಕೆಲಸಗಳಿರುವ ಕಾರಣ ಆ. 29 ರಿಂದ ಸೆ. 5ರ ವರೆಗೆ ಸೇವೆ ನೀಡಬೇಕಿದ್ದ ಮೈಸೂರು-ಧಾರವಾಡ ಎಕ್ಸ್‌ಪ್ರೆಸ್‌, ಬೆಂಗಳೂರು ಧಾರವಾಡ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಭಾಗಶಃ ರದ್ದಾಗಲಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ