ಆ್ಯಪ್ನಗರ

ಗಾವಡಗೆರೆ: ಕರ್ನಾಟಕ ಪಬ್ಲಿಕ್‌ ಶಾಲೆಗೆ ಹೆಚ್ಚು ಸೌಲಭ್ಯ

ಹುಣಸೂರು ತಾಲೂಕಿನ ಹೋಬಳಿ ಕೇಂದ್ರವಾದ ಗಾವಡಗೆರೆಯಲ್ಲಿ ಕಳೆದ ಸಾಲಿನಲ್ಲಿ ಆರಂಭವಾದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಸರಕಾರದ ಆದೇಶದಂತೆ ಈ ಸಾಲಿನಿಂದ ಇಂಗ್ಲಿಷ್‌ ಮೀಡಿಯಂನ ಎಲ್‌ಕೆಜಿ, ಒಂದನೇ ತರಗತಿ, ಆರು ಹಾಗೂ ಎಂಟನೇ ತರಗತಿಗಳು ಆರಂಭಗೊಳ್ಳಲಿದೆ ಎಂದು ಪ್ರಾಂಶುಪಾಲ ರಾಮೇಗೌಡ ತಿಳಿಸಿದ್ದಾರೆ.

Vijaya Karnataka 22 May 2019, 5:00 am
ಹನಗೋಡು ನಟರಾಜ್‌ ಹುಣಸೂರು
Vijaya Karnataka Web MYR-MYS21HUN1


ಹುಣಸೂರು ತಾಲೂಕಿನ ಹೋಬಳಿ ಕೇಂದ್ರವಾದ ಗಾವಡಗೆರೆಯಲ್ಲಿ ಕಳೆದ ಸಾಲಿನಲ್ಲಿ ಆರಂಭವಾದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಸರಕಾರದ ಆದೇಶದಂತೆ ಈ ಸಾಲಿನಿಂದ ಇಂಗ್ಲಿಷ್‌ ಮೀಡಿಯಂನ ಎಲ್‌ಕೆಜಿ, ಒಂದನೇ ತರಗತಿ, ಆರು ಹಾಗೂ ಎಂಟನೇ ತರಗತಿಗಳು ಆರಂಭಗೊಳ್ಳಲಿದೆ ಎಂದು ಪ್ರಾಂಶುಪಾಲ ರಾಮೇಗೌಡ ತಿಳಿಸಿದ್ದಾರೆ.

ಜವಾಹರ್‌ ನವೋದಯ ಮಾದರಿಯಲ್ಲಿ ತಾಲೂಕಿಗೊಂದರಂತೆ ಆರಂಭಗೊಂಡಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಇದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷ ಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್‌ ಮೀಡಿಯಂ ಶಿಕ್ಷ ಣ ನೀಡುವ ಸಲುವಾಗಿ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಪೂ ಕಾಲೇಜುಗಳನ್ನು ಒಂದೇ ಆಡಳಿತಕ್ಕೆ ಒಳಪಡಿಸಲಾಗಿದೆ. ಎಲ್‌ಕೆಜಿಯಿಂದ ಎಂಟನೇ ತರಗತಿವರೆಗೆ ಶೈಕ್ಷ ಣಿಕ ಮುಖ್ಯಸ್ಥರಾಗಿ ಉಪ ಪ್ರಾಚಾರ್ಯರು ಹಾಗೂ ಎಲ್‌ಕೆಜಿಯಿಂದ 12ನೇ ತರಗತಿವರೆಗೂ ಪ್ರಾಚಾರ್ಯರು ಸಂಪೂರ್ಣ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಸಕಲ ಸೌಲಭ್ಯಕ್ಕೆ ಅನುದಾನ: ನವೋದಯ ಶಾಲೆಯಲ್ಲಿ ಸಿಗುವ ಸಕಲ ಸೌಲಭ್ಯಗಳು ಹಾಗೂ ಇಂಗ್ಲಿಷ್‌ ಶಿಕ್ಷ ಣ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಸುಸಜ್ಜಿತವಾದ ಕಟ್ಟಡ, ಮೂಲ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ 11 ಲಕ್ಷ ರೂ. ಅನುದಾನ ಬಂದಿದ್ದು, 6 ಲಕ್ಷ ರೂ. ಕಟ್ಟಡ ನಿರ್ವಹಣೆಗೆ ಉಳಿದಂತೆ ಕಂಪ್ಯೂಟರ್‌ ಲ್ಯಾಬ್‌, ಸಿ.ಸಿ.ಟಿವಿ ಕ್ಯಾಮೆರಾ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗುತ್ತಿದೆ. ಎರಡು ಲ್ಯಾಬ್‌ ಸೇರಿದಂತೆ 10 ಕೊಠಡಿಗಳ ನಿರ್ಮಾಣಕ್ಕೆ ಪಪೂ ಶಿಕ್ಷ ಣ ಮಂಡಳಿಯಿಂದ 1.98 ಕೋಟಿ ರೂ. ಬಿಡುಗಡೆಯಾಗಿದೆ. ಕೇಂದ್ರ ಸರಕಾರದ ನೀತಿ ಆಯೋಗ ನೀಡುವ ಅಟಲ್‌ ಟಿಂಕ್ರಿಂಗ್‌ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಕ್ಕೆ 50 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಅಲ್ಲದೆ ಶಿಕ್ಷ ಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶನಾಲಯದಿಂದ ಸಿವಿಲೇತರ ಕಾಮಗಾರಿಗೆ 45 ಲಕ್ಷ ರೂ. ಮಂಜೂರಾಗಿದ್ದು, ಈ ಅನುದಾನದಲ್ಲಿ ಸುಸಜ್ಜಿತ ಪ್ರಯೋಗಾಲಯಕ್ಕೆ ಅವಶ್ಯವಾದ ಉಪಕರಣ ಹಾಗೂ ಪೀಠೋಪಕರಣಗÜಳು, ಡಿಜಿಟಲ್‌ ಲೈಬ್ರರಿ ಸೇರಿದಂತೆ, ಕೆರಿಯರ್‌ ಗೈಡೆನ್ಸ್‌, ವ್ಯಕ್ತಿತ್ವ ವಿಕಸನ ಶೈಕ್ಷ ಣಿಕ ಅಭಿವೃದ್ಧಿ ಚಟುವಟಿಕೆಗಳಿಗೆ, ವಿಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವೃತ್ತಿಪರ ಕೋರ್ಸಗಳಿಗೆ ತರಬೇತಿ ನೀಡಲು ಬಳಸಿಕೊಳ್ಳಲಾಗುವುದು. ಎರಡು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

1500 ಮಕ್ಕಳ ಗುರಿ: 6.27 ಎಕರೆ ವಿಸ್ತೀರ್ಣದ ಶಾಲಾ ಆವರಣದಲ್ಲಿ 300ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳಿದ್ದು, ಉತ್ತಮ ಪರಿಸರ ಇಲ್ಲಿದೆ. ಇದೀಗ 1018 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 1500 ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಲು ಉದ್ದೇಶಿಸಲಾಗಿದೆ.


ಫಲಿತಾಂಶ, ಕ್ರೀಡೆಯಲ್ಲೂ ಮುಂದು

ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಇಂಗ್ಲಿಷ್‌ ಮೀಡಿಯಂ ಪ್ರೌಢಶಾಲೆ ಹಾಗೂ ಪಿ.ಯು.ನಲ್ಲೂ ಫಲಿತಾಂಶದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಉಳಿಸಿಕೊಂಡು ಬಂದಿದೆ. ಅಲ್ಲದೆ ನೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುವುದು ಹಾಗೂ ಡೊಳ್ಳುಕುಣಿತ, ಪಟಕುಣಿತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಸಹ ನಮ್ಮ ಶಾಲೆಯ ಮಕ್ಕಳದ್ದು ದೊಡ್ಡ ಸಾಧನೆ ಎನ್ನುತ್ತಾರೆ ಉಪ ಪ್ರಾಂಶುಪಾಲ ಚಿನ್ನೇಗೌಡರು.



ಈಗಾಗಲೇ ಪ್ರಥಮ ಪಿ.ಯು.ಗೆ 175, ಎಲ್‌ಕೆಜಿಗೆ 15, ಒಂದನೇ ತರಗತಿಗೆ 10 ಮಕ್ಕಳು ದಾಖಲಾಗಿದ್ದು, ಶಾಲೆಯ ಸಾಧನೆಯನ್ನು ಗಮನಿಸಿ, ಹುಣಸೂರು ಹಾಗೂ ಕೆ.ಆರ್‌.ನಗರ ತಾಲೂಕಿನ ವಿವಿಧೆಡೆಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಲ್ಲದೆ ಶಾಸಕ ವಿಶ್ವನಾಥ್‌ ಅವರು ಸಾಧನೆಯನ್ನು ಗಮನಿಸಿ ಶಾಸಕರ ನಿಧಿಯಿಂದ ಒಂದು ಲಕ್ಷ ರೂ. ವಿಶೇಷ ಅನುದಾನ ನೀಡಿದ್ದಾರೆ.

-ರಾಮೇಗೌಡ, ಪ್ರಾಂಶುಪಾಲರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ