ಆ್ಯಪ್ನಗರ

ಕಣ್ಣಿಗೆ ಬಟ್ಟೆ ಕಟ್ಟಿ ಭಾವಿ ಪತಿಗೆ ಚಾಕು ಇರಿದು 'ಸರ್‌ಪ್ರೈಸ್‌ ಗಿಫ್ಟ್‌' ಕೊಟ್ಟ ಯುವತಿ!

ಮದುವೆಯಾಗಲು ಇಷ್ಟವಿಲ್ಲ ಎಂಬ ಕಾರಣಕ್ಕೆ ಭಾವೀ ಪತಿಯನ್ನು ಚಾಕು ಇರಿದು ಯುವತಿಯೊಬ್ಬಳು ಕೊಲ್ಲಲು ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮನೆಯವರ ಮನವೊಲಿಸಲು ವಿಫಲಳಾಗಿದ್ದ ಈಕೆ ಹುಡುಗನ ಕೊಲೆಗೆ ಯತ್ನಿಸಿದ್ದಾಳೆ.

Vijaya Karnataka Web 5 Mar 2020, 5:36 pm
ಮೈಸೂರು: ಹುಡುಗಿಯೊಬ್ಬಳು ತಾನು ಮುಂದಿನವಾರ ಮದುವೆಯಾಗಬೇಕಿದ್ದ ಹುಡುಗನನ್ನು ತನಗೆ ಮದುವೆಯಾಗಲು ಇಷ್ಟವಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.
Vijaya Karnataka Web mysuru


ಮೈಸೂರಿನ ಸುರಗಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿನಿ ಮದುವೆಯಾಗಲು ಒಪ್ಪದೇ ವಿದ್ಯಾಭ್ಯಾಸ ಮುಂದುವರೆಸಲು ಬಯಸಿದ್ದಳು. ಆದರೂ ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ನಿಶ್ಚಯ ಮಾಡಿದ್ದರು. ಆಕೆ ತನ್ನ ಮದುವೆಯನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದಳು. ಅಲ್ಲದೇ ಯುವತಿ ಮನೆಯವರ ಮನವೊಲಿಸಲು ವಿಫಲಳಾಗಿದ್ದಳು. ಇದರಿಂದ ಬೇಸತ್ತು ಯಾವುದೇ ದಾರಿ ಕಾಣದೇ ಮದುವೆಯಾಗಬೇಕಾಗಿದ್ದ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾಳೆ.

ಯುವಕನ ಕಣ್ಣಿಗೆ ಬಟ್ಟೆ ಕಟ್ಟಿ ಇರಿದ ಯುವತಿ:
ಸುರಗಳ್ಳಿ ಗ್ರಾಮದ ರವಿಕುಮಾರ್ ಮತ್ತು ವಿ.ಜಿ. ಕೊಪ್ಪಲಿನ ಅರುಣಿ ನಡುವೆ ಮದುವೆ ನಿಶ್ಚಯವಾಗಿತ್ತು. ಇದೇ ವೇಳೆ ಯುವತಿ ಆತನ ಮನೆಗೆ ತೆರಳಿದ್ದಾಗ ಸರ್ಪ್ರೈಸ್ ಇದೆ ಎಂದು ಕಣ್ಣಿಗೆ ಬಟ್ಟೆ ಕಟ್ಟಿ ಆತನನ್ನು ಕರೆ ತಂದಿದ್ದಳು. ಮದುವೆಯಾಗಬೇಕಾದ ಹುಡುಗನ ಕಣ್ಣಿಗೆ ಬಟ್ಟೆ ಕಟ್ಟಿ ಆತನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಳು. ಈ ಕುರಿತು ಖುದ್ದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಯುವತಿ ಅರುಣಿ, ಹೀಗೆ ಮಾಡಿದ್ದು ಏಕೆಂದು ಪೋಲೀಸರ ಬಳಿ ಒಪ್ಪಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ