ಆ್ಯಪ್ನಗರ

ಸಕಾಲದಲ್ಲಿ ಜನನ-ಮರಣ ಪತ್ರ ನೀಡಿ

ಇ-ಜನ್ಮ ತಂತ್ರಾಂಶದಲ್ಲಿ ನಡೆಯುತ್ತಿರುವ ಜನನ-ಮರಣ ನೋಂದಣಿ ಸರಿಯಾಗಿ ನಡೆಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅಧಿಕಾರಿಗಳನ್ನು ತರಾಟೆ ತೆಗದುಕೊಂಡರು .

Vijaya Karnataka 14 Dec 2018, 5:00 am
ಮೈಸೂರು: ಇ-ಜನ್ಮ ತಂತ್ರಾಂಶದಲ್ಲಿ ನಡೆಯುತ್ತಿರುವ ಜನನ-ಮರಣ ನೋಂದಣಿ ಸರಿಯಾಗಿ ನಡೆಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅಧಿಕಾರಿಗಳನ್ನು ತರಾಟೆ ತೆಗದುಕೊಂಡರು .
Vijaya Karnataka Web give birth and death letter in time
ಸಕಾಲದಲ್ಲಿ ಜನನ-ಮರಣ ಪತ್ರ ನೀಡಿ


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜನನ-ಮರಣ ನೋಂದಣಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಜನನ-ಮರಣ ನೋಂದಾಯಿಸಿದ ಮೊದಲ ಪ್ರತಿಯನ್ನು ಕಡ್ಡಾಯವಾಗಿ ಮುದ್ರಿಸಿ ಉಚಿತ ಪ್ರತಿ ನೀಡುವಂತೆ ಸೂಚನೆ ನೀಡಿದ ಅವರು, ''ಜಿಲ್ಲೆಯಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ನಡೆಯುತ್ತಿರುವ ಜನನ-ಮರಣ ನೋಂದಣಿ ಪ್ರಕ್ರಿಯೆ ಪ್ರಗತಿ ಸಾಧಿಸಿಲ್ಲ. ಅಧಿಕಾರಿಗಳು ಸರಿಯಾಗಿ ಕಾರ‍್ಯ ನಿರ್ವಹಿಸಬೇಕಿದೆ. ನೋಂದಣಿ ಪ್ರಕರಣಗಳು ತಪ್ಪದಂತೆ ಹೆಚ್ಚು ಹೆಚ್ಚು ಪ್ರಚಾರ ಪಡಿಸಿ ಅರಿವು ಮೂಡಿಸಬೇಕೆಂದು,'' ತಿಳಿಸಿದರು.

'' ದತ್ತು ಸ್ವೀಕರಿಸುವ ಮಕ್ಕಳ ನೋಂದಣಿ, ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಹಾಗೂ ದ್ವಿಪತ್ನಿ ಹೆಸರು ಸೇರ್ಪಡೆ ಇನ್ನಿತರ ಸೂಕ್ಷ್ಮವಿಚಾರಗಳನ್ನು ನೋಂದಣಿ ನಿಯಮ ಹಾಗೂ ಸರಕಾರದ ಸುತ್ತೋಲೆಗಳ ಅನುಸಾರ ಕ್ರಮವಹಿಸುವಂತೆ ಸೂಚಿಸಿದರು. ಮರಣ ಘಟನೆಗಳ ನೋಂದಣಿ ಮಾಡುವಾಗ ಆಧಾರ್‌ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು.

ಅಸ್ವಾಭಾವಿಕ ಮರಣ ಸಂದರ್ಭದಲ್ಲಿ ಪ್ರಥಮ ವರ್ತಮಾನ ಪತ್ರಕ್ಕೆ ಹಾಗೂ ಪೋಸ್ಟ್‌ ಮಾರ್ಟಂ ವರದಿಯಲ್ಲಿ ಮರಣ ಸ್ಥಳ ಹಾಗೂ ದಿನಾಂಕವನ್ನು ಸ್ವಷ್ಟವಾಗಿ ನೋಂದಾಣಾಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ರಿಜಿಸ್ಟಾರ್ನಲ್ಲಿ ನಮೂದಿಸಬೇಕು,'' ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೆ. ರಾಧಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ, ಸಹಾಯಕ ಸಾಂಖ್ಯಿಕ ಅಧಿಕಾರಿ ರಂಗಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ