ಆ್ಯಪ್ನಗರ

ಮಳೆ ಹಾನಿ ಪರಿಹಾರ ನೀಡಿ, ಸಾಲ ಮನ್ನಾ ಮಾಡಿ: ಕುರುಬೂರು ಶಾಂತಕುಮಾರ್‌

ಹಿಂದಿನ ಸಾಲಿನ ಕಬ್ಬಿನ ಉಪ ಉತ್ಪನ್ನಗಳ ಲಾಭ ಕೊಡಿಸಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಿ, ಎಲ್ಲತಳಿ ಭತ್ತಗಳನ್ನು ಖರೀದಿ ಕೇಂದ್ರದಲ್ಲಿ ಖರೀದಿಸವಂತಾಗಬೇಕು.

Vijaya Karnataka 25 Nov 2021, 8:31 pm
ಮೈಸೂರು: ಸತತ ಮಳೆಯಿಂದ ಹಾನಿಯಾಗಿರುವ ಫಸಲನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ, ಕೂಡಲೇ ಪರಿಹಾರ ನೀಡಬೇಕು. ಮಳೆ ಸಂತ್ರಸ್ತ ರೈತರ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.
Vijaya Karnataka Web ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್


ರಾಜ್ಯದಲ್ಲಿ 7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಮೆಕ್ಕೆ ಜೋಳ, ರಾಗಿ, ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ. ಮಳೆ ಹಾನಿ, ಪ್ರವಾಹ ಹಾನಿ, ಅತಿವೃಷ್ಟಿ ಬೆಳೆ ನಷ್ಟ ಪರಿಹಾರಗಳನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಸಂಪೂರ್ಣ ನಷ್ಟವನ್ನು ಭರಿಸುವಂತಾಗಬೇಕು. ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ಮುನ್ನಾ ಮಾಡಬೇಕು ಎಂದು ಗುರುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಕಾಲಿಕ ಮಳೆ ನಿಂತರೂ ಮೈಸೂರು ಜನ್ರಿಗಿಲ್ಲ ನೆಮ್ಮದಿ: ತರಕಾರಿ, ಹೂವು-ಹಣ್ಣು ಬೆಲೆ ಗಗನಕ್ಕೆ..!
ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಂಚಾರಿ ಖರೀದಿ ಕೇಂದ್ರ ಆರಂಭ, ಪಡಿತರ ವಿತರಣೆಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿದ ಭತ್ತ ರಾಗಿ-ಜೋಳ ವಿತರಣೆಗೆ ಕ್ರಮ. ಸಿರಿಧಾನ್ಯಗಳಿಗೆ ಉತ್ಪಾದನಾ ವೆಚ್ಚಕ್ಕೆ ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಎಲ್ಲರೀತಿಯ ಕೃಷಿ ಬೆಳೆಗಳಿಗೆ ಫಸಲ್‌ ಬಿಮಾ ಯೋಜನೆ ಅಳವಡಿಕೆ ಸಂಬಂಧ ನೀಡಿರುವ ವರದಿಯನ್ನು ಸರಕಾರ ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಕಬ್ಬಿನ ಎಫ್‌ಆರ್‌ಪಿ ದರ ಪುನರ್‌ ಪರಿಶೀಲಿಸಬೇಕು. ಕಬ್ಬು ಕಟಾವು ಸಾಗಣಿಕೆ ವೆಚ್ಚ ಕಾರ್ಖಾನೆಯವರೇ ಭರಿಸಬೇಕು. ಹಿಂದಿನ ಸಾಲಿನ ಕಬ್ಬಿನ ಉಪ ಉತ್ಪನ್ನಗಳ ಲಾಭ ಕೊಡಿಸಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಿ, ಎಲ್ಲತಳಿ ಭತ್ತಗಳನ್ನು ಖರೀದಿ ಕೇಂದ್ರದಲ್ಲಿ ಖರೀದಿಸವಂತಾಗಬೇಕು. ರೈತರಿಗೆ ಬೇಕಾದ ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ತರಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರ್‌ ಶಂಕರ್‌, ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಬರಡನಪುರ ನಾಗರಾಜ್‌, ಮೈಸೂರು ತಾಲೂಕು ಅಧ್ಯಕ್ಷ ಗಳಿಗರಹುಂಡಿ ವೆಂಕಟೇಶ್‌, ನಗರ ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ, ಎಂ.ಬಿ.ಚೇತನ್‌, ರಂಗ ಸಮುದ್ರ ಸುರೇಶ್‌ ಇದ್ದರು.

ಸೋರುತಿಹುದು ಮನೆಯ ಮಾಳಿಗೆ; ಸತತ ಮಳೆಯಿಂದ ಸಂಕಷ್ಟದಲ್ಲಿ ಮೈಸೂರಿನ ಜನ!

ಎಪಿಎಂಸಿ ಬಳಿ ಪ್ರತಿಭಟನೆ

ಕೃಷಿ ಉತ್ಪನ್ನಗಳಿಗೆ ಶಾಸನ ಬದ್ಧ ಖಾತರಿ, ಕನಿಷ್ಠ ಬೆಂಬಲ ಬೆಲೆ ನಿಗದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಬಂದ್‌ ಬೆಂಬಲಿಸಿ ನ.26ರಂದು ಬೆಳಗ್ಗೆ 10ಕ್ಕೆ ನಗರದ ಎಪಿಎಂಸಿ ವೃತ್ತದ ರಿಂಗ್‌ ರಸ್ತೆ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ