ಆ್ಯಪ್ನಗರ

ಟಿಕೆಟ್‌ ಕೊಟ್ಟರೆ ಬೀಡಿ ಚಟ ಬಿಡುವೆ: ಹುಣಸೂರು ಜೆಡಿಎಸ್‌ ಆಕಾಂಕ್ಷಿಗಳ ಸಭೆಯಲ್ಲಿ ವಿಚಿತ್ರ ಬೇಡಿಕೆ !

ಟಿಕೆಟ್‌ಗಾಗಿ ಲಾಬಿ ನಡೆಸುವುದನ್ನು ಕೇಳಿರುವತ್ತೇವೆ. ಆದರೆ ಮೈಸೂರಿನಲ್ಲೊಬ್ಬ ಟಿಕೆಟ್ ಆಕಾಂಕ್ಷಿ ವಿಚಿತ್ರ ಬೇಡಿಕೆ ಮುಂದಿಟ್ಟಿದಿದು, ಅದನ್ನು ಕೇಳಿ ಅಲ್ಲಿ ನೆರೆದಿದ್ದವರು ದಂಗಾಗಿ ಹೋಗಿದ್ದಾರೆ.

Vijaya Karnataka 26 Sep 2019, 11:11 am
ಹುಣಸೂರು: ಚುನಾವಣೆಯಲ್ಲಿ ನನಗೆ ಪಕ್ಷದ ಟಿಕೆಟ್‌ ನೀಡಿ, ಬೀಡಿ ಸೇದುವುದನ್ನು ನಿಲ್ಲಿಸುವೆ, ಆರೋಗ್ಯ ಸುಧಾರಿಸಿಕೊಳ್ಳುವೆ ಎಂದು ಜಿ.ಪಂ. ಮಾಜಿ ಸದಸ್ಯ, ತಾಲೂಕು ಜೆಡಿಎಸ್‌ ಮಾಜಿ ಅಧ್ಯಕ್ಷ ತೊಂಡಾಳು ರಾಮಕೃಷ್ಣೇಗೌಡ ಜೆಡಿಎಸ್‌ ಆಕಾಂಕ್ಷಿಗಳ ಸಭೆಯಲ್ಲಿವಿಚಿತ್ರ ಬೇಡಿಕೆ ಸಲ್ಲಿಸಿದರು.
Vijaya Karnataka Web ELection 11


ತಮ್ಮ ಮಾತಿನ ನಡುವೆ ತೊಂಡಾಳು ರಾಮಕೃಷ್ಣೇಗೌಡರು, ''ಪಕ್ಷಕ್ಕೆ ನಾನು ಸಾಕಷ್ಟು ದುಡಿದಿರುವೆ. ನನಗೆ ಆರೋಗ್ಯ ಉತ್ತಮವಾಗಿಲ್ಲ. ಮಾನಸಿಕವಾಗಿ ನೊಂದಿದ್ದೇನೆ. ಬೀಡಿ ಸೇದುವ ಚಟ ಹಚ್ಚಿಕೊಂಡಿದ್ದೇನೆ. ಈ ಉಪ ಚುನಾವಣೆಯಲ್ಲಿನಮಗೆ ಟಿಕೇಟ್‌ ನೀಡಿದಲ್ಲಿ ಬೀಡಿ ಸೇದುವುದನ್ನು ಬಿಡುತ್ತೇನೆ. ಇದರಿಂದ ನನ್ನ ಆರೋಗ್ಯ ಸುಧಾರಿಸಲಿದೆ,'' ಎಂದು ವರಿಷ್ಠರ ಮುಂದೆ ಅವಲತ್ತುಕೊಂಡರು.

ವಲಸಿಗರಿಗೆ ಟಿಕೆಟ್‌ ಕೊಡಲ್ಲ ಅಂದ್ರು ಗುಂಡೂರಾವ್‌

ಇವರ ಮಾತಿನಿಂದ ಸಭೆಯಲ್ಲಿ ಆಶ್ಚರ್ಯ, ಜೊತೆಗೆ ವರಿಷ್ಠರು ಸೇರಿದಂತೆ ಕಾರ್ಯಕರ್ತರು ನಗೆಗಡಲಲ್ಲಿ ಮಿಂದೆದ್ದರು.

ಹುಣಸೂರಿಗೆ ನಾಲ್ಕನೇ ಉಪ ಚುನಾವಣೆ

ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿ(ಡಿ.ದೇವರಾಜ ಅರಸು) ನೀಡಿದ ಹುಣಸೂರು ಕ್ಷೇತ್ರಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಇಂಥ ಕ್ಷೇತ್ರದಲ್ಲಿನಾಲ್ಕನೇ ಬಾರಿಗೆ ಉಪ ಚುನಾವಣೆ ನಡೆಯುತ್ತಿರುವುದು ಮತ್ತೊಂದು ವಿಶೇಷ.

ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ಮೂರು ಬಾರಿ ಉಪ ಚುನಾವಣೆ ನಡೆದಿದೆ. ಇದೀಗ ಅಡಗೂರು ಎಚ್‌.ವಿಶ್ವನಾಥ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡಿರುವುದರಿಂದ ಒಂದೂವರೆ ವರ್ಷದ ಅವಧಿಯಲ್ಲೇ ಉಪ ಚುನಾವಣೆ ಎದುರಾಗಿದೆ.

ಹುಣಸೂರಿನ ಅಧಿಪತಿ ಯಾರು?: ಇದೀಗ ನಾಲ್ಕನೇ ಉಪ ಚುನಾವಣೆಗೆ ಹುಣಸೂರು ಕ್ಷೇತ್ರ ಸಿದ್ಧವಾಗಿದ್ದು, ಮೂರು ಪಕ್ಷಗಳೂ ಉಪ ಚುನಾವಣೆಯಲ್ಲಿಗೆಲ್ಲುವ ಹುಮ್ಮಸ್ಸಿನಿಂದ ಬೀಗುತ್ತಿವೆ. ಅದಕ್ಕಾಗಿ ತಂತ್ರವನ್ನೂ ಹೆಣೆಯುತ್ತಿವೆ. ಅ.24ರಂದು ನಡೆಯುವ ಮತ ಎಣಿಕೆಯಂದು ಹುಣಸೂರಿನ ಅಧಿಪತಿ ಯಾರೆಂಬುದು ನಿರ್ಣಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ