ನಾಗರಾಜ್ ನವೀಮನೆ ಮೈಸೂರು
ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿಯ ಹೆಮ್ಮೆಯ ಪ್ರತೀಕವಾದ ಮೈಸೂರಿನ ಅಂಬಾವಿಲಾಸ ಅರಮನೆಯ ಕೆಟ್ಟಿರುವ ಬಲ್ಬ್ಗಳನ್ನು ಬದಲಾಯಿಸಲಾಗುತ್ತಿದೆ.
ದಸರಾದ ಪ್ರಮುಖ ಆಕರ್ಷಣೆ ಎಂದರೆ ಅದು ಚಿನ್ನದ ಬೆಳಕಿನಲ್ಲಿಹೊಳೆಯುವ ಅರಮನೆ. ಇದರ ಸೊಬಗನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿಅರಮನೆಯ ಕೆಟ್ಟಿದ್ದ 18 ಸಾವಿರ ಬಲ್ಬ್ಗಳನ್ನು ಬದಲಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ಒಂದು ವಾರದಿಂದ ಅರಮನೆ ಸಿಬ್ಬಂದಿ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಎಲೆಕ್ಟ್ರಿಷಿಯನ್ಗಳು ದುರಸ್ತಿ ಕಾರ್ಯನಡೆಸುತ್ತಿದ್ದಾರೆ. ಇನ್ನು ಮೂರು ದಿನದಲ್ಲಿಹೊಸ ಬಲ್ಬ್ ಅಳವಡಿಸುವ ಕಾರ್ಯ ಮುಗಿಸಲಿದ್ದಾರೆ.
ಏನಿದು ಬಲ್ಬ್ ಅಳವಡಿಕೆ?: ಸಾಮಾನ್ಯವಾಗಿ ಮೈಸೂರು ಅರಮನೆಯು 1 ಲಕ್ಷ ಬಲ್ಬ್ಗಳಿಂದ ರಾತ್ರಿ ಹೊತ್ತು ಚಿನ್ನದ ಹೊಂಬಣ್ಣದಲ್ಲಿಕಂಗೊಳಿಸುತ್ತದೆ. ಇಂತಹ ಅರಮನೆಯ ಕೆಲವು ಬಲ್ಬ್ಗಳು ಮಳೆ ಬಂದಾಗ, ಪಾರಿವಾಳಗಳು ಹಾರಾಡುವಾಗ ಅಥವಾ ಜೋರಾಗಿ ಗಾಳಿ ಬೀಸಿದರೆ ದುಸ್ಥಿತಿಗೆ ಒಳಗಾಗುತ್ತವೆ. ಇದರಿಂದ ಪ್ರತಿವರ್ಷ ದಸರಾ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು ಹೊಸ ಬಲ್ಬ್ಗಳನ್ನು ಅಳವಡಿಸಲಾಗುತ್ತದೆ. ಅಂತೆಯೇ ಈ ವರ್ಷ 15ರಿಂದ 18 ಸಾವಿರ ಬಲ್ಬ…ಗಳು ಹಾನಿಗೀಡಾಗಿದ್ದು, ಅದನ್ನು ಬದಲಿಸುವ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಅರಮನೆ ಮುಖ್ಯ ಕಟ್ಟಡ, ಪ್ರವೇಶ ದ್ವಾರ, ವಿವಿಧ ಗೋಡೆ ಮೇಲೆ ಕೆಟ್ಟಿರುವ ಬಲ್ಬ್ಗಳನ್ನು ಬದಲಾಯಿಸಲಾಗುತ್ತಿದೆ.
ತಮಿಳುನಾಡಿನಿಂದ ರವಾನೆ: ಸದ್ಯ ಅರಮನೆ ಹಾಗೂ ವಸ್ತು ಪ್ರದರ್ಶನಕ್ಕೆ ಬಳಸುತ್ತಿರುವ ಸಾಮಾನ್ಯ ಬಲ್ಬ್ಗಳನ್ನು (ಇನ್ಕಾ್ಯಂಡಿಲೇಟ್) ಇದೀಗ ಯಾರು ತಯಾರು ಮಾಡುತ್ತಿಲ್ಲ. ಎಲ್ಇಡಿ ಬಲ್ಬ್ಗಳ ಬಳಕೆ ಇದಕ್ಕೆ ಕಾರಣ. ಈ ಮೊದಲು ಮೈಸೂರಿನಲ್ಲಿಈ ಬಲ್ಬ್ಗಳನ್ನು ತಯಾರಿಸಲಾಗುತ್ತಿತ್ತು. ಇದೀಗ ಉತ್ಪಾದನೆ ನಿಲ್ಲಿಸಿದೆ. ದೇಶದಲ್ಲಿತಮಿಳುನಾಡಿನಲ್ಲಿಮಾತ್ರ ಈ ಬಲ್ಬ್ಗಳನ್ನು ತಯಾರಿಸಲಾಗುತ್ತಿದೆ. ಅಲ್ಲಿಂದ 15 ವೋಲ್ಟ… ಸಾಮರ್ಥ್ಯದ ತ್ರೆಡ್ (ಹೋಲ್ಡರ್ನಲ್ಲಿತಿರುಗಿಸುವ) ಇರುವ ಬಲ್ಬ್ಗಳನ್ನು ಆರ್ಡರ್ ಕೊಟ್ಟು ತರಿಸಲಾಗಿದೆ.
ಸಿಸಿ ಕ್ಯಾಮೆರಾ ಅಳವಡಿಕೆ: ನಾಡಹಬ್ಬ ದಸರಾ ವೇಳೆ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಭದ್ರತೆಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಜಂಬೂಸವಾರಿ ಸಾಗುವ ರಾಜ ಮಾರ್ಗದ ಉದ್ದಕ್ಕೂ 199 ಸಿಸಿ ಕ್ಯಾಮೆರಾ ಅಳವಡಿಕೆಗೆ ಸಿದ್ಧತೆ ಕೈಗೊಂಡಿದ್ದಾರೆ.
ಗೋಡೆಗಳಿಗೆ ಸುಣ್ಣಬಣ್ಣ: ಒಂದೆಡೆ ಅರಮನೆಯ ದೀಪಾಂಕಾರದ ಸೊಬಗನ್ನು ಹೆಚ್ಚಿಸಲು ಹೊಸ ಬಲ್ಬ್ ಅಳವಡಿಸುವಂತೆ, ಅಂಬಾವಿಲಾಸದ ಪ್ರಮುಖ ದ್ವಾರ, ಗೇಟ್ ಹಾಗೂ ಸುತ್ತಮುತ್ತಲಿನ ಗೋಡೆಗಳಿಗೆ ಕಾರ್ಮಿಕರು ಸುಣ್ಣಬಣ್ಣ ಬಳಿಯುತ್ತಿದ್ದಾರೆ. ಅರಮನೆ ಅಂಗಳದಲ್ಲಿರುವ ದೇಗುಲಗಳಲ್ಲಿಧಾರ್ಮಿಕ ಕಾರ್ಯ ನಡೆಯುವುದರಿಂದ ಅವುಗಳಿಗೂ ಬಣ್ಣ ಹೊಡೆಯಲಾಗುತ್ತಿದೆ. ಸದ್ಯ ಕರಿಕಲ್ಲುತೊಟ್ಟಿ ಗೇಟ್ನಿಂದ ನಗರ ಬಸ್ ನಿಲ್ದಾಣದ ಹಿಂಭಾಗದವರೆಗೂ ಸುಣ್ಣ, ಬಣ್ಣ ಹೊಡೆಯಲಾಗಿದೆ. ದಸರಾ ಆರಂಭಕ್ಕೆ 7 ದಿನ ಬಾಕಿಯಿದ್ದು, ಅಷ್ಟರೊಳಗೆ ಎಲ್ಲಾ ಸಿದ್ಧತಾ ಕಾರ್ಯ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಚಿನ್ನದ ಹೊಂಬಣ್ಣವೇ ಚೆಂದ!
ಇತ್ತೀಚಿನ ದಿನಗಳಲ್ಲಿವಿದ್ಯುತ್ ಉಳಿತಾಯದ ದೃಷ್ಟಿಯಿಂದ ಎಲ್ಲೆಡೆ ಎಲ…ಇಡಿ ಬಲ್ಬ್ಗಳನ್ನು ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಅರಮನೆಗೆ ಎಲ್ಇಡಿ ಬಲ್ಬ್ ಅಳವಡಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಪಾರಂಪರಿಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಮೈಸೂರು ಅರಮನೆಗೆ ಇಂದಿಗೂ ಸಾಮಾನ್ಯ ಬಲ್ಬ…ಗಳನ್ನೇ ಬಳಸಲಾಗುತ್ತಿದೆ. ಎಲ್ಇಡಿ ಬಲ್ಬ್ ಬಳಕೆ ಮಾಡಿದರೆ ನೆರಳು ಕಾಣುತ್ತದೆ. ಜತೆಗೆ ಅರಮನೆ ಚಿನ್ನದ ಬಣ್ಣದಿಂದ ಕಂಗೊಳಿಸಿದರೆ ಚೆಂದ ಎಂಬ ಉದ್ದೇಶದಿಂದ ಸಾಮಾನ್ಯ ಬಲ್ಬ್ಗಳನ್ನೇ ಅಳವಡಿಸಲಾಗುತ್ತಿದೆ. ವಸ್ತು ಪ್ರದರ್ಶನ ಪ್ರಾಧಿಕಾರಕ್ಕೂ ಇದೇ ಮಾದರಿ ಅನುಸರಿಸಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿಅರಮನೆಯ 18 ಸಾವಿರ ಕೆಟ್ಟು ಹೋದ ಬಲ್ಬ್ಗಳನ್ನು ಬದಲಾಯಿಸಲಾಗಿದೆ. ಇದಕ್ಕಾಗಿ ತಮಿಳುನಾಡಿನಿಂದ 15 ವೋಲ್ಟ್ ಸಾಮರ್ಥ್ಯದ ವಿಶೇಷ ಬಲ್ಬ್ ತರಿಸಿಕೊಂಡು ಅಳವಡಿಕೆ ಮಾಡಲಾಗುತ್ತಿದೆ. ಇನ್ನು ಮೂರು ದಿನದಲ್ಲಿಈ ಪ್ರಕ್ರಿಯೆ ಮುಕ್ತಾಯ ಕಾಣಲಿದೆ. ಇದರಿಂದ ಅರಮನೆ ಅಂದ ಮತ್ತಷ್ಟು ಹೆಚ್ಚಾಗಲಿದೆ.
-ಟಿ.ಎಸ್.ಸುಬ್ರಮಣ್ಯ, ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ
ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿಯ ಹೆಮ್ಮೆಯ ಪ್ರತೀಕವಾದ ಮೈಸೂರಿನ ಅಂಬಾವಿಲಾಸ ಅರಮನೆಯ ಕೆಟ್ಟಿರುವ ಬಲ್ಬ್ಗಳನ್ನು ಬದಲಾಯಿಸಲಾಗುತ್ತಿದೆ.
ದಸರಾದ ಪ್ರಮುಖ ಆಕರ್ಷಣೆ ಎಂದರೆ ಅದು ಚಿನ್ನದ ಬೆಳಕಿನಲ್ಲಿಹೊಳೆಯುವ ಅರಮನೆ. ಇದರ ಸೊಬಗನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿಅರಮನೆಯ ಕೆಟ್ಟಿದ್ದ 18 ಸಾವಿರ ಬಲ್ಬ್ಗಳನ್ನು ಬದಲಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ಒಂದು ವಾರದಿಂದ ಅರಮನೆ ಸಿಬ್ಬಂದಿ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಎಲೆಕ್ಟ್ರಿಷಿಯನ್ಗಳು ದುರಸ್ತಿ ಕಾರ್ಯನಡೆಸುತ್ತಿದ್ದಾರೆ. ಇನ್ನು ಮೂರು ದಿನದಲ್ಲಿಹೊಸ ಬಲ್ಬ್ ಅಳವಡಿಸುವ ಕಾರ್ಯ ಮುಗಿಸಲಿದ್ದಾರೆ.
ಏನಿದು ಬಲ್ಬ್ ಅಳವಡಿಕೆ?: ಸಾಮಾನ್ಯವಾಗಿ ಮೈಸೂರು ಅರಮನೆಯು 1 ಲಕ್ಷ ಬಲ್ಬ್ಗಳಿಂದ ರಾತ್ರಿ ಹೊತ್ತು ಚಿನ್ನದ ಹೊಂಬಣ್ಣದಲ್ಲಿಕಂಗೊಳಿಸುತ್ತದೆ. ಇಂತಹ ಅರಮನೆಯ ಕೆಲವು ಬಲ್ಬ್ಗಳು ಮಳೆ ಬಂದಾಗ, ಪಾರಿವಾಳಗಳು ಹಾರಾಡುವಾಗ ಅಥವಾ ಜೋರಾಗಿ ಗಾಳಿ ಬೀಸಿದರೆ ದುಸ್ಥಿತಿಗೆ ಒಳಗಾಗುತ್ತವೆ. ಇದರಿಂದ ಪ್ರತಿವರ್ಷ ದಸರಾ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು ಹೊಸ ಬಲ್ಬ್ಗಳನ್ನು ಅಳವಡಿಸಲಾಗುತ್ತದೆ. ಅಂತೆಯೇ ಈ ವರ್ಷ 15ರಿಂದ 18 ಸಾವಿರ ಬಲ್ಬ…ಗಳು ಹಾನಿಗೀಡಾಗಿದ್ದು, ಅದನ್ನು ಬದಲಿಸುವ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಅರಮನೆ ಮುಖ್ಯ ಕಟ್ಟಡ, ಪ್ರವೇಶ ದ್ವಾರ, ವಿವಿಧ ಗೋಡೆ ಮೇಲೆ ಕೆಟ್ಟಿರುವ ಬಲ್ಬ್ಗಳನ್ನು ಬದಲಾಯಿಸಲಾಗುತ್ತಿದೆ.
ತಮಿಳುನಾಡಿನಿಂದ ರವಾನೆ: ಸದ್ಯ ಅರಮನೆ ಹಾಗೂ ವಸ್ತು ಪ್ರದರ್ಶನಕ್ಕೆ ಬಳಸುತ್ತಿರುವ ಸಾಮಾನ್ಯ ಬಲ್ಬ್ಗಳನ್ನು (ಇನ್ಕಾ್ಯಂಡಿಲೇಟ್) ಇದೀಗ ಯಾರು ತಯಾರು ಮಾಡುತ್ತಿಲ್ಲ. ಎಲ್ಇಡಿ ಬಲ್ಬ್ಗಳ ಬಳಕೆ ಇದಕ್ಕೆ ಕಾರಣ. ಈ ಮೊದಲು ಮೈಸೂರಿನಲ್ಲಿಈ ಬಲ್ಬ್ಗಳನ್ನು ತಯಾರಿಸಲಾಗುತ್ತಿತ್ತು. ಇದೀಗ ಉತ್ಪಾದನೆ ನಿಲ್ಲಿಸಿದೆ. ದೇಶದಲ್ಲಿತಮಿಳುನಾಡಿನಲ್ಲಿಮಾತ್ರ ಈ ಬಲ್ಬ್ಗಳನ್ನು ತಯಾರಿಸಲಾಗುತ್ತಿದೆ. ಅಲ್ಲಿಂದ 15 ವೋಲ್ಟ… ಸಾಮರ್ಥ್ಯದ ತ್ರೆಡ್ (ಹೋಲ್ಡರ್ನಲ್ಲಿತಿರುಗಿಸುವ) ಇರುವ ಬಲ್ಬ್ಗಳನ್ನು ಆರ್ಡರ್ ಕೊಟ್ಟು ತರಿಸಲಾಗಿದೆ.
ಸಿಸಿ ಕ್ಯಾಮೆರಾ ಅಳವಡಿಕೆ: ನಾಡಹಬ್ಬ ದಸರಾ ವೇಳೆ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಭದ್ರತೆಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಜಂಬೂಸವಾರಿ ಸಾಗುವ ರಾಜ ಮಾರ್ಗದ ಉದ್ದಕ್ಕೂ 199 ಸಿಸಿ ಕ್ಯಾಮೆರಾ ಅಳವಡಿಕೆಗೆ ಸಿದ್ಧತೆ ಕೈಗೊಂಡಿದ್ದಾರೆ.
ಗೋಡೆಗಳಿಗೆ ಸುಣ್ಣಬಣ್ಣ: ಒಂದೆಡೆ ಅರಮನೆಯ ದೀಪಾಂಕಾರದ ಸೊಬಗನ್ನು ಹೆಚ್ಚಿಸಲು ಹೊಸ ಬಲ್ಬ್ ಅಳವಡಿಸುವಂತೆ, ಅಂಬಾವಿಲಾಸದ ಪ್ರಮುಖ ದ್ವಾರ, ಗೇಟ್ ಹಾಗೂ ಸುತ್ತಮುತ್ತಲಿನ ಗೋಡೆಗಳಿಗೆ ಕಾರ್ಮಿಕರು ಸುಣ್ಣಬಣ್ಣ ಬಳಿಯುತ್ತಿದ್ದಾರೆ. ಅರಮನೆ ಅಂಗಳದಲ್ಲಿರುವ ದೇಗುಲಗಳಲ್ಲಿಧಾರ್ಮಿಕ ಕಾರ್ಯ ನಡೆಯುವುದರಿಂದ ಅವುಗಳಿಗೂ ಬಣ್ಣ ಹೊಡೆಯಲಾಗುತ್ತಿದೆ. ಸದ್ಯ ಕರಿಕಲ್ಲುತೊಟ್ಟಿ ಗೇಟ್ನಿಂದ ನಗರ ಬಸ್ ನಿಲ್ದಾಣದ ಹಿಂಭಾಗದವರೆಗೂ ಸುಣ್ಣ, ಬಣ್ಣ ಹೊಡೆಯಲಾಗಿದೆ. ದಸರಾ ಆರಂಭಕ್ಕೆ 7 ದಿನ ಬಾಕಿಯಿದ್ದು, ಅಷ್ಟರೊಳಗೆ ಎಲ್ಲಾ ಸಿದ್ಧತಾ ಕಾರ್ಯ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಚಿನ್ನದ ಹೊಂಬಣ್ಣವೇ ಚೆಂದ!
ಇತ್ತೀಚಿನ ದಿನಗಳಲ್ಲಿವಿದ್ಯುತ್ ಉಳಿತಾಯದ ದೃಷ್ಟಿಯಿಂದ ಎಲ್ಲೆಡೆ ಎಲ…ಇಡಿ ಬಲ್ಬ್ಗಳನ್ನು ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಅರಮನೆಗೆ ಎಲ್ಇಡಿ ಬಲ್ಬ್ ಅಳವಡಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಪಾರಂಪರಿಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಮೈಸೂರು ಅರಮನೆಗೆ ಇಂದಿಗೂ ಸಾಮಾನ್ಯ ಬಲ್ಬ…ಗಳನ್ನೇ ಬಳಸಲಾಗುತ್ತಿದೆ. ಎಲ್ಇಡಿ ಬಲ್ಬ್ ಬಳಕೆ ಮಾಡಿದರೆ ನೆರಳು ಕಾಣುತ್ತದೆ. ಜತೆಗೆ ಅರಮನೆ ಚಿನ್ನದ ಬಣ್ಣದಿಂದ ಕಂಗೊಳಿಸಿದರೆ ಚೆಂದ ಎಂಬ ಉದ್ದೇಶದಿಂದ ಸಾಮಾನ್ಯ ಬಲ್ಬ್ಗಳನ್ನೇ ಅಳವಡಿಸಲಾಗುತ್ತಿದೆ. ವಸ್ತು ಪ್ರದರ್ಶನ ಪ್ರಾಧಿಕಾರಕ್ಕೂ ಇದೇ ಮಾದರಿ ಅನುಸರಿಸಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿಅರಮನೆಯ 18 ಸಾವಿರ ಕೆಟ್ಟು ಹೋದ ಬಲ್ಬ್ಗಳನ್ನು ಬದಲಾಯಿಸಲಾಗಿದೆ. ಇದಕ್ಕಾಗಿ ತಮಿಳುನಾಡಿನಿಂದ 15 ವೋಲ್ಟ್ ಸಾಮರ್ಥ್ಯದ ವಿಶೇಷ ಬಲ್ಬ್ ತರಿಸಿಕೊಂಡು ಅಳವಡಿಕೆ ಮಾಡಲಾಗುತ್ತಿದೆ. ಇನ್ನು ಮೂರು ದಿನದಲ್ಲಿಈ ಪ್ರಕ್ರಿಯೆ ಮುಕ್ತಾಯ ಕಾಣಲಿದೆ. ಇದರಿಂದ ಅರಮನೆ ಅಂದ ಮತ್ತಷ್ಟು ಹೆಚ್ಚಾಗಲಿದೆ.
-ಟಿ.ಎಸ್.ಸುಬ್ರಮಣ್ಯ, ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ