ಆ್ಯಪ್ನಗರ

ವೃದ್ಧರ ವಂಚಿಸಿ ಚಿನ್ನಾಭರಣ ಕಳವು: ಬಂಧನ

ವಾಸ್ತು ಪ್ರಕಾರ ಗಾರ್ಡನ್‌ ಮಾಡಿಕೊಡುತ್ತೇನೆಂದು ವೃದ್ಧರನ್ನು ಪರಿಚಯಿಸಿಕೊಂಡು ಅವರ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡುತ್ತಿದ್ದ ಖದೀಮನನ್ನು ಲಕ್ಷ್ಮೇಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 14 Jun 2019, 5:00 am
ಮೈಸೂರು: ವಾಸ್ತು ಪ್ರಕಾರ ಗಾರ್ಡನ್‌ ಮಾಡಿಕೊಡುತ್ತೇನೆಂದು ವೃದ್ಧರನ್ನು ಪರಿಚಯಿಸಿಕೊಂಡು ಅವರ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡುತ್ತಿದ್ದ ಖದೀಮನನ್ನು ಲಕ್ಷ್ಮೇಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web gold jewelery stolen arrested
ವೃದ್ಧರ ವಂಚಿಸಿ ಚಿನ್ನಾಭರಣ ಕಳವು: ಬಂಧನ


ಬಂಧಿತನಿಂದ 2 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನಾಭರಣ, 320 ಗ್ರಾಂ ಬೆಳ್ಳಿ, ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಮತ್ತು ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಸರಸ್ವತಿಪುರಂನ ನಿವಾಸಿ ಅಕ್ಷಯ್‌ ಪಿ.ಪದಕಿ(26) ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈತ ಜೂನ್‌ 6 ರಂದು ಕೃಷ್ಣಮೂರ್ತಿಪುರಂನಲ್ಲಿ ಮನೆ ಮುಂದೆ ಗಾರ್ಡನ್‌ ಮಾಡಿಕೊಡುತ್ತೇನೆ ಹಾಗೂ ಗಿಡಗಳ ಪಾಟ್‌ಗಳನ್ನು ವಾಸ್ತು ಪ್ರಕಾರ ಮರು ಜೋಡಣೆ ಮಾಡಿಕೊಡುತ್ತೇನೆಂದು ಹೇಳಿ ನಂಬಿಸಿ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ಮನೆಯಲ್ಲಿದ್ದ ಆಮೆ ವಿಗ್ರಹವನ್ನು ಬೀರುವಿನ ಕುಬೇರನ ಮೂಲೆಯಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ ಎಂದು ಹೇಳಿ 6 ತಿಂಗಳ ಹಿಂದೆ ಸ್ವಿಚ್‌ ಆಫ್‌ ಆಗಿದ್ದ ಮೊಬೈಲ್‌ ನಂಬರನ್ನು ಅವರಿಗೆ ಕೊಟ್ಟು ನಂಬಿಸಿದ್ದ. ನಂತರ ಆರೋಪಿಯು ಆಮೆ ವಿಗ್ರಹವನ್ನು ಬೀರುವಿನೊಳಗೆ ಇಡುವ ನೆಪದಲ್ಲಿ ತೆಗೆಸಿ ಆಮೆ ವಿಗ್ರಹ ಇಡುತ್ತಿದ್ದಾಗ ಕುಡಿಯಲು ನೀರು ಕೊಡುವಂತೆ ಮನೆಯಲ್ಲಿದ್ದ ಮಹಿಳೆಗೆ ಕೇಳಿದ್ದಾನೆ. ಅವರು ನೀರು ತರಲು ಹೋದಾಗ ಚಿನ್ನಾಭರಣಗಳನ್ನು ದೋಚಿದ್ದ ಎಂದು ಪ್ರಕರಣ ದಾಖಲಿಸಿಕೊಂಡಿರುವ ಲಕ್ಷ್ಮಿಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಖಾಸಗಿ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅಕ್ಷಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತ ಅರ್ಜುನ್‌ ರಾವ್‌ ಎಂಬ ಹೆಸರಿನಿಂದ ವೃದ್ಧರನ್ನು ಪರಿಚಯಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಬೆಂಗಳೂರು, ಮೇಲುಕೋಟೆ ಮತ್ತು ಇತರೆಡೆಯೂ ಇದೇ ರೀತಿ ಕೃತ್ಯವೆಸಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಪತ್ತೆ ಕಾರ್ಯದಲ್ಲಿ ಕೃಷ್ಣರಾಜ ವಿಭಾಗದ ಎಸಿಪಿ ಗೋಪಾಲಕೃಷ್ಣ ಟಿ.ನಾಯಕ್‌, ಲಕ್ಷ್ಮಿಪುರಂ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಎಚ್‌.ಹರಿಯಪ್ಪ, ಪಿಎಸ್‌ಐ ಎಂ.ಎಸ್‌ ಭಂಡಿ, ಎಎಸ್‌ಐ ಗೌರಿಶಂಕರಸ್ವಾಮಿ ಹಾಗೂ ಸಿಬ್ಬಂದಿ ರಾಜು, ಪುಟ್ಟಸ್ವಾಮಿ.ಟಿ., ಸುದೀಪ್‌ಕುಮಾರ್‌, ಕುಮಾರ್‌ ಎಂ.ಆರ್‌, ಸ್ವಾಮಿ ಮತ್ತು ಸಿದ್ದಪ್ಪಾಜಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ