ಆ್ಯಪ್ನಗರ

ಗೂಡ್ಸ್‌ ವಾಹನ ಡಿಕ್ಕಿ: ಮಗು ಸಾವು

ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಮಿನಿ ಗೂಡ್ಸ್‌ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದೆ.

Vijaya Karnataka 25 Jun 2019, 5:00 am
ಹುಣಸೂರು: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಮಿನಿ ಗೂಡ್ಸ್‌ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದೆ.
Vijaya Karnataka Web goods collide child death
ಗೂಡ್ಸ್‌ ವಾಹನ ಡಿಕ್ಕಿ: ಮಗು ಸಾವು


ನಗರದ ಲಾಲ್‌ಬಂದ್‌ ಬೀದಿಯಲ್ಲಿ ಘಟನೆ ನಡೆದಿದ್ದು, ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ನಿವಾಸಿ ಮಹಮದ್‌ ಸಾದಿಕ್‌-ಫರೀನ್‌ ತಾಜ್‌ ದಂಪತಿ ಮೂರನೇ ಪುತ್ರಿ ಮಾಯಿಯಾ(2) ಮೃತ ಮಗು.

ಮಹಮದ್‌ ಸಾದಿಕ್‌ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಲಾಲ್‌ಬಂದ್‌ ಬೀದಿಯ ಅತ್ತೆ ಮನೆಗೆ ಬಂದಿದ್ದರು. ಸಾದಿಕ್‌ ಹೊರ ಹೋಗಿದ್ದ ವೇಳೆ ರಸ್ತೆ ಪಕ್ಕದಲ್ಲಿ ಆಟವಾಡುತ್ತಿದ್ದ ಮಗು ಚೆಂಡೆತ್ತಿಕೊಳ್ಳಲು ಹೋಗುತ್ತಿದ್ದಂತೆ ಗೂಡ್ಸ್‌ ವಾಹನ ಮಗುವಿನ ಮೇಲೆ ಹರಿದಿದೆ. ರಸ್ತೆಯಲ್ಲಿದ್ದವರು ಕೂಗಿಕೊಂಡ ವೇಳೆ ಚಾಲಕ ಸಡನ್‌ ಆಗಿ ಬ್ರೇಕ್‌ ಹಾಕಿದ್ದರಿಂದ ರಸ್ತೆಯಲ್ಲಿದ್ದ ಹಂಬ್ಸ್‌ ಹತ್ತಿದ ಗೂಡ್ಸ್‌ ವಾಹನ ಹಿಮ್ಮುಖವಾಗಿ ಬಂದು ಮತ್ತೆ ಮಗುವಿನ ಮೇಲೆ ಹರಿದಿದೆ. ಗೂಡ್ಸ್‌ ವಾಹನ ಚಾಲಕ ಲಾಲ್‌ಬಂದ್‌ ಬೀದಿಯ ನಿವಾಸಿ ಫೈರೋಜ್‌ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎಸ್‌ಐ ಮಹೇಶ್‌ ನೇತ್ವತ್ವದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸಿದರು.

ಶವಾಗಾರದ ಮುಂದೆ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ವೃತ್ತ ನಿರೀಕ್ಷ ಕ ಕೆ.ಸಿ.ಪೂವಯ್ಯ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ