ಆ್ಯಪ್ನಗರ

ಸರಕಾರಿ ನೌಕರರ ಸಂಘದ ಚುನಾವಣೆ

ಗುರುವಾರ ನಗರದಲ್ಲಿ ನಡೆದ ಹುಣಸೂರು ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯು ವಿಧಾನ ಸಭೆ ಚುನಾವಣೆಯನ್ನೇ ಮೀರಿಸುವಂತೆ ನಡೆಯಿತು.

Vijaya Karnataka 14 Jun 2019, 5:00 am
ಹುಣಸೂರು : ಗುರುವಾರ ನಗರದಲ್ಲಿ ನಡೆದ ಹುಣಸೂರು ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯು ವಿಧಾನ ಸಭೆ ಚುನಾವಣೆಯನ್ನೇ ಮೀರಿಸುವಂತೆ ನಡೆಯಿತು.
Vijaya Karnataka Web government employees association elections
ಸರಕಾರಿ ನೌಕರರ ಸಂಘದ ಚುನಾವಣೆ


ನಗರದ ಬ್ರಾಹ್ಮಣರ ಬಡಾವಣೆಯ ಬಾಲಕಿಯರ ಸರಕಾರಿ ಹಿರಿಯರ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ವಿವಿಧ ಇಲಾಖಾ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ರಸ್ತೆಯುದ್ದಕ್ಕೂ ಇಲಾಖಾವಾರು ಹತ್ತಾರು ಶಾಮಿಯಾನಗಳನ್ನು ಹಾಕಿಕೊಂಡು ರಾಜಕೀಯ ಪಕ್ಷ ಗಳನ್ನು ಮೀರಿಸುವಂತೆ ಕೈಯಲ್ಲಿ ಕರಪತ್ರ ಹಿಡಿದು ಮತ ಯಾಚಿಸುತ್ತಿದ್ದುದ್ದು ಕಂಡು ಬಂತು.

ಚುನಾವಣೆಯಲ್ಲಿ ತಾಲೂಕಿನ 19 ಇಲಾಖೆಗಳಿಂದ ಒಟ್ಟು 35 ನಿರ್ದೇಶಕರು ಆಯ್ಕೆಯಾಗಬೇಕಿದ್ದು, ಈಗಾಗಲೇ 19 ಇಲಾಖೆಗಳ 19 ಮಂದಿ ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 16 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಒಟ್ಟು 9 ಇಲಾಖೆಗಳ ಅದರಲ್ಲೂ 967 ಹೆಚ್ಚು ಮತದಾರರಿರುವ ಪ್ರಾಥಮಿಕ ಶಿಕ್ಷ ಣ ಇಲಾಖೆಯ-4 ಸ್ಥಾನ, 318 ಮಂದಿ ಮತದಾರರ ಪ್ರೌಢ ಶಿಕ್ಷ ಣದ-2, 264 ಮತದಾರರನ್ನು ಹೊಂದಿರುವ ಆರೋಗ್ಯ ಇಲಾಖೆಯ-4, 106 ಮತದಾರರಿರುವ ಕಂದಾಯ ಇಲಾಖೆಯ-2 ಹಾಗೂ 95 ಮಂದಿ ಮತದಾರರ ತಾಲೂಕು ಪಂಚಾಯಿಯ-1 ಸ್ಥಾನಕ್ಕೆ ಪ್ರಚಾರದಲ್ಲಿ ತೀವ್ರ ಪೈಪೋಟಿ ಇತ್ತು.

ಶಿಕ್ಷ ಣ ಇಲಾಖೆಯ ವಿಭಾಗದಲ್ಲಂತೂ ಮತದಾನ ಮಾಡಲು ವಿಧಾನಸಭಾ ಚುನಾವಣೆಯಂತೆ ಭಾರೀ ಸಾಲು ಕಂಡುಬಂತು. ಇನ್ನುಳಿದಂತೆ ಮತದಾರರು ಬರುತ್ತಿದ್ದಂತೆ ಅಭ್ಯರ್ಥಿಗಳು ಮುಗಿಬಿದ್ದು ಮತಯಾಚಿಸುತ್ತಿದ್ದರು. ಸಂಜೆ ಐದರಿಂದ ಮತ ಎಣಿಕೆ ಆರಂಭವಾಗಿದ್ದು, ತಡರಾತ್ರಿ ಫಲಿತಾಂಶ ಹೊರ ಬೀಳಲಿದೆ. ಚುನಾವಣಾಧಿಕಾರಿಯಾಗಿ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್‌ಕುಮಾರ್‌ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಿ.ಆರ್‌.ಪಿ. ಸಂತೋಷ್‌ ಕಾರ್ಯನಿರ್ವಹಿಸಿದರು.

ಪಾರ್ಟಿಯೂ ನಡೆದಿದೆ:
ಚುನಾವಣೆಯ ಗೆಲುವಿಗಾಗಿ ಶಿಕ್ಷ ಣ ಇಲಾಖೆ ಸೇರಿದಂತೆ ಇತರೆ ಅಭ್ಯರ್ಥಿಗಳು ಮತದಾರರಿಗೆ ಕಳೆದ ಎರಡು-ಮೂರು ದಿನಗಳಿಂದ ಭರ್ಜರಿ ಪಾರ್ಟಿಯನ್ನೂ ಆಯೋಜಿಸಿದ್ದರೆಂದು ಪ್ರಚಾರದ ವೇಳೆ ಕೇಳಿ ಬಂತು. ಚುನಾವಣೆಯಲ್ಲಿ ಜಾತಿಯೂ ಸಹ ಮೇಳೈಸಿದೆ ಎಂಬುದು ಚರ್ಚಿತ ವಿಷಯವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ