ಆ್ಯಪ್ನಗರ

ಮೈಸೂರು: ಗ್ರಾಮ ಸಮರಕ್ಕೆ ವಾಮಾಚಾರದ ಭೀತಿ..! ಮತಗಟ್ಟೆಯ ಮುಂದೆ ಮಾಟ-ಮಂತ್ರ

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮೈಸೂರು ಸಜ್ಜಾಗಿದೆ. ಭಾನುವಾರ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಆದರೆ, ಈ ವೇಳೆ ಮತಗಟ್ಟೆಗಳ ಬಳಿ ವಾಮಾಚಾರ ನಡೆಸುವ ಪ್ರಕರಣಗಳು ಹೆಚ್ಚಾಗಿದ್ದು, ನಂಜನಗೂಡು ತಾಲೂಕಿನ ಹಾರೋಹಳ್ಳಿಯ ಮತಗಟ್ಟೆ ಬಳಿ ಮಾಟ-ಮಂತ್ರ ಮಾಡಲಾಗಿದೆ.

Vijaya Karnataka Web 26 Dec 2020, 4:07 pm
ಮೈಸೂರು: ಭಾನುವಾರ ಮೈಸೂರಿನಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆಗೆ ಮತದಾನ ನಡೆಯಲಿದ್ದು, ವೋಟಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗ್ರಾಮ ಸಮರದಲ್ಲಿ ವಾಮಾಚಾರದ ಪ್ರಕರಣಗಳು ಕೂಡ ಹೆಚ್ಚಾಗಿದೆ. ಮತಗಟ್ಟೆಗೆ ಮಾಟ ಮಂತ್ರ ಮಾಡಿಸಿ ಮತದಾರರನ್ನು ಹೆದರಿಸುವ ಕಾರ್ಯ ಚಾಲ್ತಿಯಾಗಿದೆ.
Vijaya Karnataka Web Black magic
ನಂಜನಗೂಡಿನ ಹಾರೋಹಳ್ಳಿ ಮತಗಟ್ಟೆ ಮುಂದೆ ವಾಮಾಚಾರ ಮಾಡಿಸಿರುವುದು


ಹೌದು, ನಂಜನಗೂಡು ತಾಲೂಕಿನ ಹಾರೋಹಳ್ಳಿಯಲ್ಲಿ ಮತ ಕೇಂದ್ರದ ಮುಂದೆ ಮಡಿಕೆ ಕುಡಿಕೆ ಬಳಸಿ ಮಾಟ ಮಂತ್ರ ಹಾಗೂ ವಿವಿಧ ರೀತಿಯ ಪೂಜೆ ಮಾಡಲಾಗಿದೆ. ಸ್ಥಳದಲ್ಲಿ ತೆಂಗಿನ ಕಾಯಿಗೆ ಅರಿಸಿಣ ಕುಂಕುಮ ಬಳಿಯಲಾಗಿದ್ದು, ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ತಾಯೂರು ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮ ಹಾರೋಹಳ್ಳಿಯಾಗಿದ್ದು, ಇಲ್ಲಿ ಎರಡು ಸ್ಥಾನಗಳಿಗೆ 5 ಜನರಿಂದ ಸ್ಪರ್ಧೆ ಏರ್ಪಟ್ಟಿದೆ. ಮತಗಟ್ಟೆ ನಡೆಯುವ ಶಾಲೆ ಕಾಂಪೌಂಡ್ ಮುಂಭಾಗದಲ್ಲೇ ವಾಮಾಚಾರ ನಡೆದಿದ್ದು, ಘಟನೆ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಮೈಸೂರು: ರಾಂಪುರದ ಮತಗಟ್ಟೆ ಬಳಿ ವಾಮಾಚಾರ..! ಅಭ್ಯರ್ಥಿಗಳಿಂದ ಆಣೆ ಪ್ರಮಾಣ ಮಾಡಿಸಿದ ಗ್ರಾಮಸ್ಥರು

ಭಾನುವಾರ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ನಂಜನಗೂಡು, ಮೈಸೂರು ಸೇರಿ ಅನೇಕ ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಡಿಸೆಂಬರ್‌ 30ಕ್ಕೆ ಫಲಿತಾಂಶ ಬರಲಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಹೆಸರಿನಲ್ಲಿ ವಾಮಾಚಾರ, ಗ್ರಾ.ಪಂ. ಚುನಾವಣೆ ಗೆಲ್ಲಲು ತಂತ್ರ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ