ಮೈಸೂರು: ಸ್ವಚ್ಛ ನಗರ ಹೆಗ್ಗಳಿಕೆಯಲ್ಲಿ ಮೂರನೇ ಸ್ಥಾನ ಸಮಾಧಾನವಾದರೂ ತೃಪ್ತಿ ತಂದಿಲ್ಲ. ನಂ.1 ಸ್ಥಾನ ಪಡೆಯಲು ಈಗಿನಿಂದಲೇ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ''ಗ್ರೀನ್ ವೆಡ್ಡಿಂಗ್'' ಕೂಡ ಒಂದು ಎಂದು ನಗರಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಮೈಸೂರು ದೇಶದ ಮೂರನೇ ಸ್ವಚ್ಛ ನಗರ ಎಂಬ ಪ್ರಶಸ್ತಿ ಪಡೆದು ಬಂದ ನಂತರ ಸುದ್ದಿಗೋಷ್ಠಿಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಆಯುಕ್ತೆ ಶಿಲ್ಪಾನಾಗ್ ಅವರುಗಳು ಅಭಿಪ್ರಾಯ ಹಂಚಿಕೊಂಡರು.
ಈ ಬಾರಿ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸಿದ್ದೇವೆ. ಆದರೆ, ಮೂರನೇ ಸ್ಥಾನಕ್ಕೆ ಬಂದಿದ್ದೇವೆ ಎನ್ನುವ ಸಮಾಧಾನ ಇದೆ. ಎಲ್ಲಿ ತಪ್ಪುಗಳಾಗಿವೆ ಎಂಬುದನ್ನು ಪತ್ತೆ ಹಚ್ಚಿ ಅದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಶಿಲ್ಪಾ ನಾಗ್ ಹೇಳಿದರು.
ಗ್ರೀನ್ ವೆಡ್ಡಿಂಗ್: ನಗರದಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವುದು ಕಲ್ಯಾಣ ಮಂಟಪಗಳಿಂದ. ಆಹ್ವಾನ ಪತ್ರಿಕೆ ಮುದ್ರಣ, ವಿತರಣೆ, ಅಲಂಕಾರ, ಪ್ಲೇಟ್, ನೀರಿನ ಬಾಟಲಿ, ಉಡುಗೊರೆ ಕವರ್ ಸೇರಿದಂತೆ ಎಲ್ಲದರಲ್ಲಿಯೂ ಪ್ಲಾಸ್ಟಿಕ್ ಬಳಸುತ್ತಿದ್ದೇವೆ. ವಿವಾಹ ಮುಗಿದ ನಂತರ ರಾಶಿ ತ್ಯಾಜ್ಯ ಬಿದ್ದಿರುತ್ತದೆ. ಇದರ ನಿರ್ವಹಣೆಯೇ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ವಿವಾಹ ಮಂಟಪಗಳಲ್ಲಿ ತ್ಯಾಜ್ಯ ನಿವಾರಣೆಗೆ ''ಗ್ರೀನ್ ವೆಡ್ಡಿಂಗ್'' (ಹಸಿರು ವಿವಾಹ) ಎಂಬ ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದೇವೆ. ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ, ಮದ್ರಿತ ಆಹ್ವಾನ ಪತ್ರಿಕೆ ಬದಲಿಗೆ ಡಜಿಟಲ್ ಆಹ್ವಾನ ಪತ್ರಿಕೆ, ಪೇಪರ್ ಪ್ಲೇಟ್, ಕಪ್ ಸೇರಿದಂತೆ ತ್ಯಾಜ್ಯ ಉತ್ಪಾದನೆ ತಡೆಯುವಂತಹ ರೀತಿಯಲ್ಲಿ ವಿವಾಹವಾಗಲು ಪ್ರೋತ್ಸಾಹ ನೀಡುತ್ತಿದ್ದೇವೆ. ಈ ''ಇಕೋ ವೆಡಿಂಗ್ ಕಾನ್ಸೆಫ್ಟ್'' ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಈ ಕುರಿತು ಪಾಲಿಕೆ ವೆಬ್ಸೈಟ್ನಲ್ಲಿ ಲಿಂಕ್ ಕ್ರಿಯೇಟ್ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗುವುದು. ಪಾಲಿಕೆಯ ಕಂಟ್ರೋಲ್ ರೂಂ 0821-2418800 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲ ಮೂರು ಗ್ರೀನ್ ವೆಡ್ಡಿಂಗ್ ಮದುವೆಗೆ ಮೇಯರ್ ನೇತೃತ್ವದಲ್ಲಿ ಪಾಲಿಕೆ ತಂಡ ತೆರಳಿ ವಧು ವರರಿಗೆ ಶುಭ ಹಾರೈಸಿ ಪ್ರಶಂಸನಾ ಪತ್ರ ನೀಡಲಿದೆ. ಇದೊಂದು ಕ್ರಾಂತಿಕಾರ ಬದಲಾವಣೆಯಾಗಬೇಕು ಎನ್ನುವುದು ನಮ್ಮ ಅಭಿಲಾಷೆ ಎಂದು ಹೇಳಿದರು.
ತಿಂಗಳ ಗಡುವು: ನಗರದಲ್ಲಿ ಸುಮಾರು 140 ಅಪಾರ್ಟ್ಮೆಂಟ್ ಹಾಗೂ ಕಾಂಪ್ಲೆಕ್ಸ್ಗಳಿದ್ದು ಅವುಗಳಿಂದ ಪ್ರತಿನಿತ್ಯ ಸಾವಿರ ಟನ್ಗೂ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರ ನಿರ್ವಹಣೆ ಕೂಡ ಸಮಸ್ಯೆಯಾಗಿದೆ. 100 ಕೆ.ಜಿ.ಗಿಂತ ಹೆಚ್ಚಿನ ಕಸ ಉತ್ಪಾದನೆಯಾಗುವ ಕಡೆಯಲ್ಲಿಯೇ ಸಂಸ್ಕರಣಾ ಘಟಕ ಸ್ಥಾಪಸಿಬೇಕು ಎನ್ನುವ ನಿಯಮವಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ತಿಂಗಳ ಗುಡುವು ನೀಡುತ್ತೇವೆ. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಹಸಿರು ಅಂಗಡಿ: ನಗರದಲ್ಲಿ 9 ಕಡೆ ಹಸಿರು ಅಂಗಡಿ ತೆರೆಯಲಾಗುವುದು. ಇದು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ನೆರವು ನೀಡುತ್ತದೆ. ಅಲ್ಲದೆ, ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಖಾಲಿ ನೀರಿನ ಬಾಟಲಿಗಳು. ಈ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುವಂತಹ ವಸ್ತುಗಳನ್ನು ತಯಾರಿಸಲು ಎರಡು ಘಟಕಗಳನ್ನು ಆರಂಭಿಸಲಾಗುವುದು. ಇದರಲ್ಲಿ ಆಸಕ್ತರಿಗೆ ತರಬೇತಿ ಕೂಡ ನೀಡಲಾಗುವುದು ಎಂದರು.
ನಗರದ ಸಬಬರ್ನ್ ಬಸ್ ನಿಲ್ದಾಣ ಹಾಗೂ ಟೌನ್ ಹಾಲ್ ಪಕ್ಕದ ಗಾಂಧಿ ವೃತ್ತದ ಬಳಿಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗುವುದು. ಇದು ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಲಿದೆ. ಅದೇ ರೀತಿ ಪಿಂಕ್ ಟಾಯ್ಲೆಟ್ ಕೂಡ ನಿರ್ಮಾಣ ಮಾಡಲಾಗುವುದು. ಮಹಾರಾಣಿ ಕಾಲೇಜಿನಲ್ಲಿ ಮೊದಲ ಪಿಂಕ್ ಟಾಯ್ಲೆಟ್ ನಿರ್ಮಿಸಲಾಗುವುದು ಎಂದರು.
ಉಪ ಮೇಯರ್ ಶಫೀ ಅಹ್ಮದ್, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದೋರ್ಗೆ ತಂಡ: ಮೇಯರ್
ಮೈಸೂರು ಮೂರನೇ ಸ್ವಚ್ಛ ನಗರ ಪ್ರಶಸ್ತಿ ಪಡೆಯುವಲ್ಲಿ ಮೈಸೂರಿನ ಪ್ರತಿಯೊಬ್ಬರ ಶ್ರಮ ಅಡಗಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಹೇಳಿದರು.
ಇಂದೋರ್ ದೇಶದಲ್ಲಿಯೇ ಮೊದಲ ಸ್ಥಾನ ಗಳಿಸುತ್ತಿದೆ. ಇದಕ್ಕೆ ಕಾರಣಗಳೇನು, ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ, ಯಾವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎನ್ನುವುದನ್ನು ತಿಳಿಯಲು ಪಾಲಿಕೆ ಸದಸ್ಯರ ಹಾಗೂ ಅಧಿಕಾರಿಗಳ ಮೂರು ತಂಡ ಇಂದೋರ್ಗೆ ತೆರಳಿ ಅಧ್ಯಯನ ನಡೆಸಲಿದೆ. ಇಂದಿನಿಂದಲೇ ನಗರವನ್ನು ಇನ್ನಷ್ಟು ಸ್ವಚ್ಛವಾಗಿಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಮೈಸೂರು ದೇಶದ ಮೂರನೇ ಸ್ವಚ್ಛ ನಗರ ಎಂಬ ಪ್ರಶಸ್ತಿ ಪಡೆದು ಬಂದ ನಂತರ ಸುದ್ದಿಗೋಷ್ಠಿಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಆಯುಕ್ತೆ ಶಿಲ್ಪಾನಾಗ್ ಅವರುಗಳು ಅಭಿಪ್ರಾಯ ಹಂಚಿಕೊಂಡರು.
ಈ ಬಾರಿ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸಿದ್ದೇವೆ. ಆದರೆ, ಮೂರನೇ ಸ್ಥಾನಕ್ಕೆ ಬಂದಿದ್ದೇವೆ ಎನ್ನುವ ಸಮಾಧಾನ ಇದೆ. ಎಲ್ಲಿ ತಪ್ಪುಗಳಾಗಿವೆ ಎಂಬುದನ್ನು ಪತ್ತೆ ಹಚ್ಚಿ ಅದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಶಿಲ್ಪಾ ನಾಗ್ ಹೇಳಿದರು.
ಗ್ರೀನ್ ವೆಡ್ಡಿಂಗ್: ನಗರದಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವುದು ಕಲ್ಯಾಣ ಮಂಟಪಗಳಿಂದ. ಆಹ್ವಾನ ಪತ್ರಿಕೆ ಮುದ್ರಣ, ವಿತರಣೆ, ಅಲಂಕಾರ, ಪ್ಲೇಟ್, ನೀರಿನ ಬಾಟಲಿ, ಉಡುಗೊರೆ ಕವರ್ ಸೇರಿದಂತೆ ಎಲ್ಲದರಲ್ಲಿಯೂ ಪ್ಲಾಸ್ಟಿಕ್ ಬಳಸುತ್ತಿದ್ದೇವೆ. ವಿವಾಹ ಮುಗಿದ ನಂತರ ರಾಶಿ ತ್ಯಾಜ್ಯ ಬಿದ್ದಿರುತ್ತದೆ. ಇದರ ನಿರ್ವಹಣೆಯೇ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ವಿವಾಹ ಮಂಟಪಗಳಲ್ಲಿ ತ್ಯಾಜ್ಯ ನಿವಾರಣೆಗೆ ''ಗ್ರೀನ್ ವೆಡ್ಡಿಂಗ್'' (ಹಸಿರು ವಿವಾಹ) ಎಂಬ ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದೇವೆ. ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ, ಮದ್ರಿತ ಆಹ್ವಾನ ಪತ್ರಿಕೆ ಬದಲಿಗೆ ಡಜಿಟಲ್ ಆಹ್ವಾನ ಪತ್ರಿಕೆ, ಪೇಪರ್ ಪ್ಲೇಟ್, ಕಪ್ ಸೇರಿದಂತೆ ತ್ಯಾಜ್ಯ ಉತ್ಪಾದನೆ ತಡೆಯುವಂತಹ ರೀತಿಯಲ್ಲಿ ವಿವಾಹವಾಗಲು ಪ್ರೋತ್ಸಾಹ ನೀಡುತ್ತಿದ್ದೇವೆ. ಈ ''ಇಕೋ ವೆಡಿಂಗ್ ಕಾನ್ಸೆಫ್ಟ್'' ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಈ ಕುರಿತು ಪಾಲಿಕೆ ವೆಬ್ಸೈಟ್ನಲ್ಲಿ ಲಿಂಕ್ ಕ್ರಿಯೇಟ್ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗುವುದು. ಪಾಲಿಕೆಯ ಕಂಟ್ರೋಲ್ ರೂಂ 0821-2418800 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲ ಮೂರು ಗ್ರೀನ್ ವೆಡ್ಡಿಂಗ್ ಮದುವೆಗೆ ಮೇಯರ್ ನೇತೃತ್ವದಲ್ಲಿ ಪಾಲಿಕೆ ತಂಡ ತೆರಳಿ ವಧು ವರರಿಗೆ ಶುಭ ಹಾರೈಸಿ ಪ್ರಶಂಸನಾ ಪತ್ರ ನೀಡಲಿದೆ. ಇದೊಂದು ಕ್ರಾಂತಿಕಾರ ಬದಲಾವಣೆಯಾಗಬೇಕು ಎನ್ನುವುದು ನಮ್ಮ ಅಭಿಲಾಷೆ ಎಂದು ಹೇಳಿದರು.
ತಿಂಗಳ ಗಡುವು: ನಗರದಲ್ಲಿ ಸುಮಾರು 140 ಅಪಾರ್ಟ್ಮೆಂಟ್ ಹಾಗೂ ಕಾಂಪ್ಲೆಕ್ಸ್ಗಳಿದ್ದು ಅವುಗಳಿಂದ ಪ್ರತಿನಿತ್ಯ ಸಾವಿರ ಟನ್ಗೂ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರ ನಿರ್ವಹಣೆ ಕೂಡ ಸಮಸ್ಯೆಯಾಗಿದೆ. 100 ಕೆ.ಜಿ.ಗಿಂತ ಹೆಚ್ಚಿನ ಕಸ ಉತ್ಪಾದನೆಯಾಗುವ ಕಡೆಯಲ್ಲಿಯೇ ಸಂಸ್ಕರಣಾ ಘಟಕ ಸ್ಥಾಪಸಿಬೇಕು ಎನ್ನುವ ನಿಯಮವಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ತಿಂಗಳ ಗುಡುವು ನೀಡುತ್ತೇವೆ. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಹಸಿರು ಅಂಗಡಿ: ನಗರದಲ್ಲಿ 9 ಕಡೆ ಹಸಿರು ಅಂಗಡಿ ತೆರೆಯಲಾಗುವುದು. ಇದು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ನೆರವು ನೀಡುತ್ತದೆ. ಅಲ್ಲದೆ, ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಖಾಲಿ ನೀರಿನ ಬಾಟಲಿಗಳು. ಈ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುವಂತಹ ವಸ್ತುಗಳನ್ನು ತಯಾರಿಸಲು ಎರಡು ಘಟಕಗಳನ್ನು ಆರಂಭಿಸಲಾಗುವುದು. ಇದರಲ್ಲಿ ಆಸಕ್ತರಿಗೆ ತರಬೇತಿ ಕೂಡ ನೀಡಲಾಗುವುದು ಎಂದರು.
ನಗರದ ಸಬಬರ್ನ್ ಬಸ್ ನಿಲ್ದಾಣ ಹಾಗೂ ಟೌನ್ ಹಾಲ್ ಪಕ್ಕದ ಗಾಂಧಿ ವೃತ್ತದ ಬಳಿಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗುವುದು. ಇದು ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಲಿದೆ. ಅದೇ ರೀತಿ ಪಿಂಕ್ ಟಾಯ್ಲೆಟ್ ಕೂಡ ನಿರ್ಮಾಣ ಮಾಡಲಾಗುವುದು. ಮಹಾರಾಣಿ ಕಾಲೇಜಿನಲ್ಲಿ ಮೊದಲ ಪಿಂಕ್ ಟಾಯ್ಲೆಟ್ ನಿರ್ಮಿಸಲಾಗುವುದು ಎಂದರು.
ಉಪ ಮೇಯರ್ ಶಫೀ ಅಹ್ಮದ್, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದೋರ್ಗೆ ತಂಡ: ಮೇಯರ್
ಮೈಸೂರು ಮೂರನೇ ಸ್ವಚ್ಛ ನಗರ ಪ್ರಶಸ್ತಿ ಪಡೆಯುವಲ್ಲಿ ಮೈಸೂರಿನ ಪ್ರತಿಯೊಬ್ಬರ ಶ್ರಮ ಅಡಗಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಹೇಳಿದರು.
ಇಂದೋರ್ ದೇಶದಲ್ಲಿಯೇ ಮೊದಲ ಸ್ಥಾನ ಗಳಿಸುತ್ತಿದೆ. ಇದಕ್ಕೆ ಕಾರಣಗಳೇನು, ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ, ಯಾವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎನ್ನುವುದನ್ನು ತಿಳಿಯಲು ಪಾಲಿಕೆ ಸದಸ್ಯರ ಹಾಗೂ ಅಧಿಕಾರಿಗಳ ಮೂರು ತಂಡ ಇಂದೋರ್ಗೆ ತೆರಳಿ ಅಧ್ಯಯನ ನಡೆಸಲಿದೆ. ಇಂದಿನಿಂದಲೇ ನಗರವನ್ನು ಇನ್ನಷ್ಟು ಸ್ವಚ್ಛವಾಗಿಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.