ಆ್ಯಪ್ನಗರ

ಚಾಮುಂಡಿಬೆಟ್ಟದಲ್ಲಿ ಎದುರಾದ ರಾಜಕೀಯ ಧುರೀಣರು: ಡಿಕೆಶಿ-ಜಿಟಿಡಿ ಮಾತು, ಹೆಚ್ಡಿಡಿ ಜತೆ ಮುಗಿಯದ ಮುನಿಸು!

ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೂವರು ರಾಜಕೀಯ ನಾಯಕರು ಮುಖಾಮುಖಿಯಾದರು. ಡಿಕೆಶಿವಕುಮಾರ್ ಈ ವೇಳೆ ದೇವೇಗೌಡರ ಆಶೀರ್ವಾದ ಪಡೆದರೂ ಜಿಟಿಡಿ ಮಾತ್ರ ಸ್ಥಳದಿಂದ ಕಾಲ್ಕಿತ್ತರು !

Vijaya Karnataka Web 8 Nov 2019, 2:10 pm
ಮೈಸೂರು: ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೂವರು ರಾಜಕೀಯ ಧುರೀಣರು ಒಂದೆಡೆ ಭೇಟಿಯಾಗುವ ಸಂದರ್ಭ ಘಟಿಸಿತು. ಇದೇ ವೇಳೆ ಸ್ವಪಕ್ಷದ ವಿರುದ್ಧ ಇದ್ದ ಅಸಮಾಧಾನ ಕೂಡ ಗೋಚರಿಸಿತು.
Vijaya Karnataka Web shivakumar


ವಿಡಿಯೋ: ಚಾಮುಂಡಿ ಬೆಟ್ಟದಲ್ಲಿ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆಶಿ

ಮಾಜಿ ಸಚಿವ ಡಿ.ಕೆ ಶಿವಕುಮಾರ್, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಂಸದ ಆರ್ ಧ್ರುವನಾರಯಣ್, ಶಾಸಕ ಜಿ.ಟಿ ದೇವೇಗೌಡ, ಚಾಮುಂಡಿ ಬೆಟ್ಟಕ್ಕೆ ಕೆಲವು ನಿಮಿಷಗಳ ಅಂತರದಲ್ಲಿ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡರು.

ಇನ್ನು ದರ್ಶನದ ವೇಳೆ ತಾಯಿಯ ದೇಗುಲದಲ್ಲಿ ಎಚ್.ಡಿ. ದೇವೇಗೌಡ ಹಾಗೂ‌ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮುಖಾಮುಖಿಯಾದ ಪ್ರಸಂಗ ಕೂಡ ನಡೆಯಿತು. ಇದೇ ವೇಳೆ ದೇವೇಗೌಡರನ್ನ ಕಂಡ ಡಿ.ಕೆ ಶಿವಕುಮಾರ್ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.

ಮೈಸೂರು ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್ ಜಿಟಿ ದೇವೇಗೌಡ ಸಾಥ್

ಅಲ್ಲದೇ ಈಗಾಗಲೇ ಜಿ.ಟಿ ದೇವೇಗೌಡರು ಜೆಡಿಎಸ್ ನಾಯಕರಿಂದ ಅಂತರ ಕಾಪಾಡಿಕೊಂಡಿರುವುದು ಮಾತ್ರವಲ್ಲ ಹಲವು ಕಾರ್ಯಕ್ರಮಗಳಿಂದ ದೂರ ಉಳಿದಿರುವ ಜೊತೆಗೆ ಗೌಡರ ಕುಟುಂಬದವರೊಂದಿಗೂ ಮುನಿಸು ಇದೆ ಎಂಬುದು ಸಾಬೀತಾಯಿತು.

ಡಿಕೆಶಿ ಜೊತೆ ದೇವಿಯ ದರ್ಶನ ಪಡೆದು ಒಂದು ನಿಮಿಷವೂ ನಿಲ್ಲದೆ ಹೆಚ್.ಡಿ.ದೇವೇಗೌಡರು ಬರುವ ವಿಚಾರ ತಿಳಿದು ಭೇಟಿ ಮಾಡದೆಯೇ ತೆರಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಟಿಡಿ, ನಾನು ಪ್ರತಿ ಶುಕ್ರವಾರ ಬರುತ್ತೇನೆ. ಡಿಕೆಶಿಯವರು ಚಾಮುಂಡಿ ಭಕ್ತರು. ಕಳೆದ ಬಾರಿ ಬೆಳ್ಳಿ ಆನೆ ಕೊಟ್ಟಿದ್ದರು. ಹೀಗಾಗಿ ಈ ಬಾರಿಯೂ ಬಂದು ದರ್ಶನ ಮಾಡಿದ್ದಾರೆ. ನಾನು ಇದೇ ಸಂದರ್ಭದಲ್ಲಿ ಬಂದಿದ್ದು ಕಾಕತಾಳಿಯ ಅಷ್ಟೇ ಎಂದು ಮಾತು ಮುಗಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ