ಆ್ಯಪ್ನಗರ

ನನಗೇನ್ ಜೆಡಿಎಸ್ ಬಾಗಿಲು ಬಂದ್ ಮಾಡೋದು..?, ದೇವೇಗೌಡರ ಮನೆ ಬಾಗಿಲು ನಾನೇ ಕ್ಲೋಸ್‌ ಮಾಡಿ ಬಂದಿದ್ದೇನೆ: ಜಿಟಿಡಿ ಟಾಂಗ್

​​ವಿಧಾನ ಪರಿಷತ್‌ ಗೆ ತಜ್ಞರು , ಬುದ್ದಿಜೀವಿಗಳು ಆರಿಸಿ ಹೋಗಬೇಕು. ಆದರೆ ಹಿನ್ನೆಲೆ ಹೇಗೆ ಇದ್ದರೂ ದುಡ್ಡೊಂದಿದ್ರೆ ಸಾಕು ಎನ್ನುವಂತಾಗಿದೆ. ಇದನ್ನ ನೋಡಿದ್ರೆ ಪರಿಷತ್‌ ನ ಪಾವಿತ್ರ್ಯತೆಗೆ ಕಳಂಕ ಅಲ್ಲವೇ..?

Lipi 10 Dec 2021, 7:57 pm
ಮೈಸೂರು: ಜೆಡಿಎಸ್‌ ವರಿಷ್ಠ ನಾಯಕರ ವಿರುದ್ಧ ಶಾಸಕ ಜಿಟಿ ದೇವೇಗೌಡ ವಾಗ್ದಾಳಿ ಮುಂದುವರೆಸಿದ್ದಾರೆ.
Vijaya Karnataka Web gt devegowda slams hd kumaraswamy in mysuru
ನನಗೇನ್ ಜೆಡಿಎಸ್ ಬಾಗಿಲು ಬಂದ್ ಮಾಡೋದು..?, ದೇವೇಗೌಡರ ಮನೆ ಬಾಗಿಲು ನಾನೇ ಕ್ಲೋಸ್‌ ಮಾಡಿ ಬಂದಿದ್ದೇನೆ: ಜಿಟಿಡಿ ಟಾಂಗ್


ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ನನಗೇನ್ ಜೆಡಿಎಸ್ ಬಾಗಿಲು ಬಂದ್ ಮಾಡೋದು..? ನಾನೇ ದೇವೆಗೌಡರ ಮನೆ ಬಾಗಿಲನ್ನ ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ನೀಡಿದರು.

ಚಾಮುಂಡೇಶ್ವರಿಗೆ ಹೊಸ ದಳಪತಿ; ಜಿಟಿ ದೇವೇಗೌಡರಿಗೆ ಜೆಡಿಎಸ್‌ ಬಾಗಿಲು ಶಾಶ್ವತ ಬಂದ್ ಎಂದ ಎಚ್‌ಡಿಕೆ

ಜಿಲ್ಲಾಧ್ಯಕ್ಷರನ್ನಾಗಿ ಮಾಡಲು ದೇವೇಗೌಡರು, ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ರೇವಣ್ಣ ಕರೆದರು. ಆದರೆ ಜಿಲ್ಲಾ ನಾಯಕರು ಒಪ್ಪಲಿಲ್ಲ. ಅಂದೇ ನಾನೇ ದೇವೆಗೌಡರ ಮನೆ ಬಾಗಿಲನ್ನ ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ. ಅಂದಿನಿಂದ ಬಾಗಿಲು ಹಾಕಿದ್ದಾರೋ, ತೆಗೆದಿದ್ದಾರೋ ನಾನ್ಯಾಕೆ ನೋಡಲಿ ಎಂದರು.

ವಿಧಾನ ಪರಿಷತ್‌ ಗೆ ತಜ್ಞರು , ಬುದ್ದಿಜೀವಿಗಳು ಆರಿಸಿ ಹೋಗಬೇಕು. ಆದರೆ ಹಿನ್ನೆಲೆ ಹೇಗೆ ಇದ್ದರೂ ದುಡ್ಡೊಂದಿದ್ರೆ ಸಾಕು ಎನ್ನುವಂತಾಗಿದೆ. ಮೈಸೂರಿನಲ್ಲಿ ಮಂಜುನಾಥಸ್ವಾಮಿಯ ಬೆಳ್ಳಿಯ ಕಾಯಿನ್, ಜೊತೆಗೆ ಉಪ್ಪು,ಮಾರಿ ಕೂದಲು ಇಟ್ಟು ಆಣೆ ಪ್ರಮಾಣ ಮಾಡಿಸಲಾಗ್ತಿದೆ. ಇದನ್ನ ನೋಡಿದ್ರೆ ಪರಿಷತ್‌ ನ ಪಾವಿತ್ರ್ಯತೆಗೆ ಕಳಂಕ ಅಲ್ಲವೇ..? ಎಂದು ಜಿ.ಟಿ ದೇವೇಗೌಡರು ಪ್ರಶ್ನಿಸಿದರು.

ಪರಿಷತ್ ಫಲಿತಾಂಶ ಮೈಸೂರಿಗಷ್ಟೇ ಅಲ್ಲ. ಇಡೀ ರಾಜ್ಯಕ್ಕೆ ಒಂದು ಹೊಸ ಶಕ್ತಿ ತುಂಬಲಿದೆ. ಬಹುಮತ ಪಡೆದ ಪಕ್ಷಕ್ಕೆ ಒಂದು ಹೊಸ ಚೈತನ್ಯ ತುಂಬಲಿದೆ. ಮೈಸೂರಿನಲ್ಲಿ ಎರಡು ಮತಗಳಿಗೆ ಅವಕಾಶ ಇದೆ. ನಾನು ಮೊದಲ, ಎರಡನೇ‌ ಪ್ರಾಶಸ್ತ್ಯ ಮತ ಹಾಕಿದ್ದೇನೆ. ಯಾರಿಗೆ ಎಂಬುದನ್ನ ಬಹಿರಂಗಪಡಿಸಿದ್ರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಜಿ.ಟಿ ದೇವೇಗೌಡರು ತಿಳಿಸಿದರು.

ಜೆಡಿಎಸ್ ತೊರೆಯೋದು ಪಕ್ಕಾ : ದಳಪತಿಗಳ ವಿರುದ್ಧ ಎಂಎಲ್‌ಸಿ ಸಂದೇಶ್ ನಾಗರಾಜ್ ಆಕ್ರೋಶ

ಚುನಾವಣೆ ವ್ಯವಸ್ಥೆ ಕಲುಷಿತಗೊಂಡಿದೆ. ಮೇಲ್ಮನೆಯನ್ನ ಚಿಂತಕರ ಚಾವಡಿ ಅಂತ ಕರೆಯಲಾಗುತ್ತದೆ. ಇದೀಗ ದಿನ ಕಳೆದಂತೆ ಅದರ ಮಹತ್ವ ಕಡಿಮೆಯಾಗುತ್ತಿದೆ. ಹಣದ ರಾಜಕೀಯ ಹೆಚ್ಚಾಗಿದೆ. ಮೈಸೂರು ಭಾಗದಲ್ಲಿ ಕೆಲ ಸದಸ್ಯರು ಬೆಳ್ಳಿ ನಾಣ್ಯ ನೀಡುತ್ತಿದ್ದು , ಆಣೆ ಪ್ರಮಾಣದ ರಾಜಕೀಯ ಹೆಚ್ಚಾಗಿದೆ. ಇದು ಖಂಡಿತವಾಗಿಯೂ ಒಳ್ಳೆ ಬೆಳವಣಿಗೆಯಲ್ಲ ಅಂತ ತಿಳಿಸಿದ್ರು
ಮತದಾರ ಬುದ್ಧಿವಂತರಾಗಿದ್ದಾರೆ. ಮತ ಹಾಕೋ ಬಗ್ಗೆ ಬೆಂಬಲಿಗರಿಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಸೂಕ್ತ ಅಭ್ಯರ್ಥಿಗಳು ಆಯ್ಕೆ ಆಗ್ತಾರೆ. ಇಡೀ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ ಅಂತ ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ