ಆ್ಯಪ್ನಗರ

ಪಕ್ಷದ ಅಧ್ಯಕ್ಷರಾಗಿ ವಿಶ್ವನಾಥ್ ಮುಂದುವರಿಕೆಗೆ ಸಾರಾ ಮಹೇಶ್‌, ಜಿಟಿಡಿ ಆಗ್ರಹ

ಶಾಸಕರು ತಪ್ಪು ಮಾಡಿದಾಗ ತಿದ್ದಿಕೊಳ್ಳುವಂತೆ ಹೇಳುವ ಹಕ್ಕು ಹಿರಿಯರಾದ ವಿಶ್ವನಾಥ್ ಅವರಿಗಿದೆ. ಈ ಹಿಂದೆ ಎರಡು ಬಾರಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದಾಗ ಅವರ ಮನವೊಲಿಸಿದ್ದೇವು

Vijaya Karnataka Web 4 Jun 2019, 6:48 pm
ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರೇ ಮುಂದುವರಿಯಬೇಕೆಂದು ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ.
Vijaya Karnataka Web ಎಚ್‌ ವಿಶ್ವನಾಥ್‌
ಎಚ್‌ ವಿಶ್ವನಾಥ್‌


ಮಂಗಳವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದೇವೇಗೌಡ ಹಾಗೂ ಮಹೇಶ್ ಅವರು, ವಿಶ್ವನಾಥ್ ಹಿರಿಯ ನಾಯಕರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರಿಯಬೇಕು. ಪಕ್ಷದ ವರಿಷ್ಠರಿಗೆ ನಮ್ಮ ಈ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದರು.

ನಾನು ಕಿರಿಯ. ನಮ್ಮಂಥ ಶಾಸಕರು ತಪ್ಪು ಮಾಡಿದಾಗ ತಿದ್ದಿಕೊಳ್ಳುವಂತೆ ಹೇಳುವ ಹಕ್ಕು ಹಿರಿಯರಾದ ವಿಶ್ವನಾಥ್ ಅವರಿಗಿದೆ. ಈ ಹಿಂದೆ ಎರಡು ಬಾರಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದಾಗ ಅವರ ಮನವೊಲಿಸಿದ್ದೇವು ಎಂದರು.

ಪದವಿಗಿಂತ ಪಕ್ಷ ಮುಖ್ಯ ಎಂಬ ಮಾತನ್ನು ಅವರು ಹೇಳಿದ್ದಾರೆ. ಅಧ್ಯಕ್ಷರಾಗಿ ವಿಶ್ವನಾಥ್ ಮುಂದುವರಿಯಬೇಕು ಎಂದು ಸಚಿವ ಸಾರಾ ಮಹೇಶ್ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ