ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ ತವರು ಕ್ಷೇತ್ರ ತಿ.ನರಸೀಪುರದಿಂದಲೇ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಡಾ.ಮಹದೇವಪ್ಪ ಈ ಬಾರಿ ಪುತ್ರ ಸುನೀಲ್ ಬೋಸ್ ಅವರಿಗೆ ತಿ.ನರಸೀಪುರ (ಮೀಸಲು) ಕ್ಷೇತ್ರ ಬಿಟ್ಟುಕೊಟ್ಟು ಬೆಂಗಳೂರಿನ ಸರ್ ಸಿ.ವಿ.ರಾಮನ್ನಗರದಿಂದ ಸ್ಫರ್ಧಿಸಲು ಉದ್ದೇಶಿಸಿದ್ದರು ಎಂದು ಹೇಳಲಾಗಿತ್ತು.
ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಮಹದೇವಪ್ಪ ತಾವು ಮತ್ತೆ ತಿ.ನರಸೀಪುರದಿಂದಲೇ ಸ್ಪರ್ಧಿಸುವ ಸುಳಿವು ನೀಡಿದರು. ‘ನಾನು ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಎಲ್ಲಿಗೆ ಹೋದರೂ ವಾಪಸ್ ಮೂಲಕ್ಕೆ ಬರಬೇಕಲ್ಲವೇ?’ಎಂದು ಡಾ.ಮಹದೇವಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಮಹದೇವಪ್ಪ ತಾವು ಮತ್ತೆ ತಿ.ನರಸೀಪುರದಿಂದಲೇ ಸ್ಪರ್ಧಿಸುವ ಸುಳಿವು ನೀಡಿದರು. ‘ನಾನು ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಎಲ್ಲಿಗೆ ಹೋದರೂ ವಾಪಸ್ ಮೂಲಕ್ಕೆ ಬರಬೇಕಲ್ಲವೇ?’ಎಂದು ಡಾ.ಮಹದೇವಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.