ಆ್ಯಪ್ನಗರ

ಮೈಸೂರು- ಎಕ್ಸ್ ಪ್ರೆಸ್ ವೇನಲ್ಲಿ ಸರಣಿ ಅಪಘಾತ: ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ ಚನ್ನಪಟ್ಟಣದ ಬಳಿ ಅ. 1ರಂದು ಸರಣಿ ಅಪಘಾತವಾಗಿದೆ. ಬಸ್ಸೊಂದು ಆರು ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾಗಿ ನಜ್ಜುಗೊಜ್ಜಾಗಿ ರಸ್ತೆಪಕ್ಕದಲ್ಲಿ ನಿಂತಿರುವ ಕಾರುಗಳ ವಿಡಿಯೋವನ್ನು ಮಾಡಿದ್ದಾರೆ. ಆ ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿರುವ ಪ್ರತಾಪ್ ಸಿಂಹ, ‘ಅತಿವೇಗದಿಂದಾಗಿ ಚನ್ನಪಟ್ಟಣದ ಬಳಿ ಆರೇಂಜ್ ಬಸ್ ಚಾಲಕ ಆರು ವಾಹನಗಳಿಗೆ ಹಿಂದಿನಿಂದ ಗುದ್ದಿ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದೆ. ಒಳ್ಳೆಯ ರಸ್ತೆಯ ಜೊತೆಗೆ, ನಿಯಂತ್ರಿತ ಚಾಲನೆಯೂ ಅಷ್ಟೇ ಮುಖ್ಯ. ಹೈವೇ ಪ್ಯಾಟ್ರೋಲಿಂಗ್ (ಗಸ್ತು ಸೇವೆ) ಆರಂಭಿಸುತ್ತೇವೆ ಎಂದಿದ್ದಾರೆ.

Authored byಚೇತನ್ ಓ.ಆರ್. | Vijaya Karnataka Web 1 Oct 2022, 5:49 pm
ಚನ್ನಪಟ್ಟಣ: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಶನಿವಾರ ಅಪಘಾತವೊಂದು ಸಂಭವಿಸಿದೆ. ಚನ್ನಪಟ್ಟಣದ ಬಳಿ ನಡೆದಿರುವ ಈ ಅಪಘಾತದಲ್ಲಿ ಮಗುವೊಂದು ಮೃತಪಟ್ಟಿದೆ. ಎಕ್ಸ್ ಪ್ರೆಸ್ ಹೈವೇಯಲ್ಲಿ ವೇಗವಾಗಿ ಸಾಗಿಬಂದ ಖಾಸಗಿ ಬಸ್ಸೊಂದು ಮುಂದೆ ಸಾಗುತ್ತಿದ್ದ ಕಾರೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
Vijaya Karnataka Web Patrolling soon on bengaluru mysuru express way says Pratap simha
ಪ್ರತಾಪ್ ಸಿಂಹ (ಸಂಗ್ರಹ ಚಿತ್ರ)


ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ಖೇದ ವ್ಯಕ್ತಪಡಿಸಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಉತ್ತಮ ರಸ್ತೆಯಲ್ಲಿ ಸಾಗುವಾಗ ಸ್ವಯಂ ನಿಯಂತ್ರಣವೂ ಅಷ್ಟೇ ಮುಖ್ಯ. ಶೀಘ್ರವೇ ಹೈವೇ ಪ್ಯಾಟ್ರೋಲಿಂಗ್ (ಗಸ್ತು ಸಿಬ್ಬಂದಿ ನಿಯೋಜನೆ) ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.

Mysuru - Bengaluru Express way - ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ: ಮಂಡ್ಯ ಬಳಸಿಕೊಂಡು ಬರಲು ಸಿಕ್ತು ಬೈಪಾಸ್!
ಬಸ್ ಡಿಕ್ಕಿ ಹೊಡೆದ ಪರಿಣಾಮ, ಆ ಕಾರು ಮುಂದಿನ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗೆ, ಸುಮಾರು 6 ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಇದರಲ್ಲೊಂದು ಕಾರಿನಲ್ಲಿದ್ದ ಮಗುವೊಂದು ಸಾವಿಗೀಡಾಗಿದೆ.

ಡಿಕ್ಕಿಯಾಗಿ ನಜ್ಜುಗೊಜ್ಜಾಗಿ ರಸ್ತೆಪಕ್ಕದಲ್ಲಿ ನಿಂತಿರುವ ಕಾರುಗಳ ವಿಡಿಯೋವನ್ನು ಮಾಡಿದ್ದಾರೆ. ಆ ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿರುವ ಪ್ರತಾಪ್ ಸಿಂಹ, ಅತಿವೇಗದಿಂದಾಗಿ ಚನ್ನಪಟ್ಟಣದ ಬಳಿ ಆರೇಂಜ್ ಬಸ್ ಚಾಲಕ ಆರು ವಾಹನಗಳಿಗೆ ಹಿಂದಿನಿಂದ ಗುದ್ದಿ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದೆ. ಒಳ್ಳೆಯ ರಸ್ತೆಯ ಜೊತೆಗೆ, ನಿಯಂತ್ರಿತ ಚಾಲನೆಯೂ ಅಷ್ಟೇ ಮುಖ್ಯ. ಹೈವೇ ಪ್ಯಾಟ್ರೋಲಿಂಗ್ (ಗಸ್ತು ಸೇವೆ) ಆರಂಭಿಸುತ್ತೇವೆ. ಸ್ವನಿಯಂತ್ರಣ ಹೇರಿಕೊಳ್ಳಿ ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ.

Bengaluru- Mysuru Express Way - ಎಕ್ಸ್ ಪ್ರೆಸ್ ವೇ ಬೈಪಾಸ್ ರಸ್ತೆ ಸಿದ್ಧ: ವಿಡಿಯೋ ಮೂಲಕ ವಿಪಕ್ಷಗಳಿಗೆ ಬಿಜೆಪಿ ಟಾಂಗ್
ಬಿಜೆಪಿಯಲ್ಲಿ ನೋಡಿ ಕಲಿಯಲಿ: ಕಾಂಗ್ರೆಸ್ಸಿಗರಿಗೆ ಪ್ರತಾಪ್ ಸಿಂಹ ಟಾಂಗ್

ಭಾರತ ಜೋಡಿಸುವುದನ್ನ ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಲಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಈ ಬಗ್ಗೆ ಮಾತಾಡಿದ ಅವರು, ವಾಜಪೇಯಿ ಕಾಲದಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣವಾಯ್ತು. ಮೋದಿ ಕಾಲದಲ್ಲಿ ದೇಶದಲ್ಲಿ ರಸ್ತೆ, ವಿಮಾನ, ರೈಲು ಸಂಪರ್ಕ ಆಗ್ತಿದೆ. ಭಾರತವನ್ನು ಜೋಡಿಸುವುದಕ್ಕೆ ನಡಿಗೆ ಪ್ರಾರಂಭಿಸಿರುವವರು ‘ಭಾರತ ತೋಡೋ’ ತಂಡದ ಸಹವಾಸವನ್ನು ಬಿಡಲಿ ಎಂದರು.

‘ದಸರಾ ಹೊಸ್ತಿಲಲ್ಲಿ ರಾಹುಲ್ ಗಾಂಧಿ ಮೈಸೂರಿಗೆ ಬರುತ್ತಿದ್ದು, ನೀವು ಬರುವ ನಂಜನಗೂಡು ಹೆದ್ದಾರಿ ಮೋದಿ ಕಾಲದಲ್ಲಿ ನಿರ್ಮಾಣವಾಗಿದ್ದು. ಹಾಗೆಯೇ ಬರುವಾಗ ಮೈಸೂರು ಏರ್ಪೋರ್ಟ್ ನೋಡಿಕೊಂಡು ಬನ್ನಿ. ಮೈಸೂರು - ಬೆಂಗಳೂರು ಹೆದ್ದಾರಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಮೋದಿ ಸರ್ಕಾರ ಹೇಗೆ ಭಾರತವನ್ನು ಜೋಡಿಸಿದೆ ಎಂಬುದನ್ನು ನೋಡಿಕೊಂಡು ಹೋಗಿ ಎಂದರು.

ಬೆಂಗಳೂರಿಂದ ಮೈಸೂರಿಗೆ ಹೋಗಲು 75 ನಿಮಿಷ ಸಾಕು! ಮುಕ್ತಾಯದ ಹಂತಕ್ಕೆ ಎಕ್ಸ್‌ಪ್ರೆಸ್‌ ವೇ; ನಿತಿನ್‌ ಗಡ್ಕರಿ ಮಾಹಿತಿ
ಮುಂದಿನ ಐದು ವರ್ಷಗಳ ಬಳಿಕ ಮತ್ತೊಂದು ಯಾತ್ರೆ ಕೈಗೊಳ್ಳಿ. ಆಗ ದೆಹಲಿ ಅಥವಾ ಇಟಲಿಯಿಂದ ನೇರ ಮೈಸೂರಿಗೆ ಬಂದು ಲ್ಯಾಂಡ್ ಆಗಬಹುದು. ಅಂಥ ವ್ಯವಸ್ಥೆಯು ಸಾಧ್ಯವಾಗಲಿದೆ. ಇನ್ನು ಕಾಂಗ್ರೆಸ್ ಗೆ 25 ವರ್ಷ ಭವಿಷ್ಯವಿಲ್ಲ, ಅಲ್ಲಿವರೆಗೆ ಬಿಜೆಪಿ ಸರ್ಕಾರ ಇರುತ್ತೆ. ಮತ ಪ್ರಚಾರಕ ಪಾದ್ರಿಯನ್ನು ಭೇಟಿ ಮಾಡಿ ಆರಂಭವಾದ ಪಾದಯಾತ್ರೆ ಇದು. ಜೀಸಸ್ ಒಬ್ಬನೇ ದೇವರು ಎನ್ನುವವನನ್ನ ನೀವು ಕೇರಳದಲ್ಲಿ ಭೇಟಿ ಮಾಡಿದ್ದು, ಇದರಿಂದ ನಿಮ್ಮ ಉದ್ದೇಶ ಏನು ಎಂಬುದು ಗೊತ್ತಾಗಿದೆ. ಪಾದ್ರಿಯನ್ನು ಬದಿಗಿಟ್ಟು ಚಾಮುಂಡಿಗೆ ನಮಸ್ಕರಿಸಿ‌, ನಾಡಹಬ್ಬ ದಸರಾದಲ್ಲಿ ಭಾಗಿಯಾಗಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ