ಎಂ. ನಂಜುಂಡಸ್ವಾಮಿ
ಮೈಸೂರು: ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಚ್ಐವಿ ಪತ್ತೆ ಪರೀಕ್ಷೆ ಇಳಿಮುಖವಾಗಿದ್ದು, ಎಚ್ಐವಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೊರೊನಾ ಸೋಂಕು ಹಲವು ಕ್ಷೇತ್ರದ ಕೆಲಸಕ್ಕೆ ತಡೆ ಹಾಕಿದೆ. ಅಂತೆಯೇ ಕೋವಿಡೇತರ ಆರೋಗ್ಯ ಸೇವೆಗೂ ತೊಡಕು ಉಂಟಾಯಿತು. ಹೆಚ್ಚಿನ ಸಿಬ್ಬಂದಿಯನ್ನು ಕೊರೊನಾ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು ಹಾಗೂ ಜನರು ಆಸ್ಪತ್ರೆಗೆ ಬರಲು ಹೆದರಿದ ಕಾರಣದಿಂದ, ಈ ಬಾರಿ ಎಚ್ಐವಿ ಪರೀಕ್ಷೆ ಕಡಿಮೆಯಾಗಿದೆ.
ಕಳೆದ ಸಾಲಿಗೆ ಹೋಲಿಸಿದರೆ ಸಾಮಾನ್ಯ ವರ್ಗದ ಪರೀಕ್ಷೆ ಶೇ. 32ಕ್ಕೆ, ಗರ್ಭಿಣಿಯರ ಪರೀಕ್ಷೆ ಶೇ. 50ಕ್ಕೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ 2019-2020ನೇ ಸಾಲಿನಲ್ಲಿ ಸಾಮಾನ್ಯ ವರ್ಗದ 1,33,169 ಮಂದಿಯನ್ನು ಎಚ್ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 916 ಮಂದಿ ಎಚ್ಐವಿ ಸೋಂಕಿತರು ಪತ್ತೆಯಾಗಿದ್ದರು.
ಕಲಬುರಗಿಯಲ್ಲಿ ಎಚ್ಐವಿ ಸೋಂಕು ಸಾಮಾನ್ಯರಲ್ಲಿ ಇಳಿಕೆ, ಗರ್ಭಿಣಿಯರಲ್ಲಿ ಏರಿಕೆ..!
2020-21ನೇ ಸಾಲಿನಲ್ಲಿ ಅಕ್ಟೋಬರ್ ತನಕ 43,181 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿ, 274 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಕಳೆದ ಸಾಲಿನಲ್ಲಿ 51651 ಗರ್ಭಿಣಿಯರಿಗೆ ಎಚ್ಐವಿ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ 24 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ತನಕ 26120 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 12 ಎಚ್ಐವಿ ಪಾಸಿಟಿವ್ ವರದಿಯಾಗಿವೆ.
'ಕೊರೊನಾದಿಂದ ಬಹುತೇಕ ಆಸ್ಪತ್ರೆಗಳು ಮತ್ತು ಪರೀಕ್ಷೆ ಕೇಂದ್ರಗಳು ಬಂದ್ ಆಗಿದ್ದವು. ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿದ ನಂತರವೂ ಜನರು ಪರೀಕ್ಷೆಗೆ ಬರಲು ಹೆದರಿದ್ದರಿಂದ ಹೆಚ್ಚು ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ' ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಿರಾಜ್ ಅಹಮ್ಮದ್ ತಿಳಿಸಿದರು.
ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಏಡ್ಸ್ ತಡೆಗಟ್ಟಿ, ಡಾ.ಕೆ.ಸುಧಾಕರ್ ಮನವಿ
'ಯಾವುದೇ ಸೋಂಕು ಹರುಡುವಿಕೆ ತಡೆಗಟ್ಟಲು ಹೆಚ್ಚು ಪರೀಕ್ಷೆ ಮಾಡಬೇಕು. ಆದರೆ, ಈ ಬಾರಿ ಕಡಿಮೆ ಎಚ್ಐವಿ ಪತ್ತೆ ಪರೀಕ್ಷೆ ನಡೆದಿರುವುದರಿಂದ ಎಚ್ಐವಿ ಸೋಂಕು ಹರಡುವಿಕೆ ಹೆಚ್ಚಾಗಲಿದೆ. ವಲಸೆ ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಪರೀಕ್ಷೆ ನಡೆಸದಿದ್ದರೆ ಎಚ್ಐವಿ ಸೋಂಕು ಇರುವ ವ್ಯಕ್ತಿ ಹಲವು ಜನಕ್ಕೆ ಸೋಂಕು ಹರಡಿಸಬಲ್ಲ' ಎನ್ನುತ್ತಾರೆ ವಲಸೆ ಕಾರ್ಮಿಕರಿಗೆ ಏಡ್ಸ್ ಜಾಗೃತಿ ಮತ್ತು ಪರೀಕ್ಷೆ ನಡೆಸುವ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸ್ವಯಂ ಸೇವಕಿ ಫಾತಿಮಾ ಮೇರಿ. 'ಈಗ ಎಲ್ಲರೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಇದರ ಮೇಲೆ ಎಲ್ಲರ ಗಮನ ಕೇಂದ್ರಿಕೃತವಾಗಿದೆ. ಆದರೆ ಎಚ್ಐವಿ ಪರೀಕ್ಷೆ ಬಗ್ಗೆ ಮಾತನಾಡುತ್ತಿಲ್ಲ. ಇದರ ಪರೀಕ್ಷೆ ಹೆಚ್ಚಿಸಲು ವ್ಯಾಪಕ ಪ್ರಚಾರ ಅಗತ್ಯ' ಎಂದು ಅವರು ತಿಳಿಸಿದ್ದಾರೆ.
'ಕೊರೊನಾ ತಂದ ಲಾಕ್ಡೌನ್ನಿಂದ ಎಚ್ಐವಿ ಪತ್ತೆ ಪರೀಕ್ಷೆ ಕಡಿಮೆಯಾಗಿರಬಹುದು. ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲೂ ಓಡಾಡುತ್ತಿರಲಿಲ್ಲ. ನಂತರದ ದಿನಗಳಲ್ಲಿಯೂ ಅಸುರಕ್ಷಿತ ತಾಣದಿಂದ ದೂರ ಇದ್ದಾರೆ. ಹೀಗಾಗಿ ಸೋಂಕು ಹರಡುವ ಸಾಧ್ಯತೆ ಕಡಿಮೆ' ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಸಮರ್ಥನೆ.
ಏಡ್ಸ್ ತಡೆಗೆ ಜಾಗತಿಕ ಒಗ್ಗಟ್ಟಿನ ಮಂತ್ರ: ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆ
ಮೈಸೂರು: ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಚ್ಐವಿ ಪತ್ತೆ ಪರೀಕ್ಷೆ ಇಳಿಮುಖವಾಗಿದ್ದು, ಎಚ್ಐವಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಳೆದ ಸಾಲಿಗೆ ಹೋಲಿಸಿದರೆ ಸಾಮಾನ್ಯ ವರ್ಗದ ಪರೀಕ್ಷೆ ಶೇ. 32ಕ್ಕೆ, ಗರ್ಭಿಣಿಯರ ಪರೀಕ್ಷೆ ಶೇ. 50ಕ್ಕೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ 2019-2020ನೇ ಸಾಲಿನಲ್ಲಿ ಸಾಮಾನ್ಯ ವರ್ಗದ 1,33,169 ಮಂದಿಯನ್ನು ಎಚ್ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 916 ಮಂದಿ ಎಚ್ಐವಿ ಸೋಂಕಿತರು ಪತ್ತೆಯಾಗಿದ್ದರು.
ಕಲಬುರಗಿಯಲ್ಲಿ ಎಚ್ಐವಿ ಸೋಂಕು ಸಾಮಾನ್ಯರಲ್ಲಿ ಇಳಿಕೆ, ಗರ್ಭಿಣಿಯರಲ್ಲಿ ಏರಿಕೆ..!
2020-21ನೇ ಸಾಲಿನಲ್ಲಿ ಅಕ್ಟೋಬರ್ ತನಕ 43,181 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿ, 274 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಕಳೆದ ಸಾಲಿನಲ್ಲಿ 51651 ಗರ್ಭಿಣಿಯರಿಗೆ ಎಚ್ಐವಿ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ 24 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ್ ತನಕ 26120 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 12 ಎಚ್ಐವಿ ಪಾಸಿಟಿವ್ ವರದಿಯಾಗಿವೆ.
'ಕೊರೊನಾದಿಂದ ಬಹುತೇಕ ಆಸ್ಪತ್ರೆಗಳು ಮತ್ತು ಪರೀಕ್ಷೆ ಕೇಂದ್ರಗಳು ಬಂದ್ ಆಗಿದ್ದವು. ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿದ ನಂತರವೂ ಜನರು ಪರೀಕ್ಷೆಗೆ ಬರಲು ಹೆದರಿದ್ದರಿಂದ ಹೆಚ್ಚು ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ' ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಿರಾಜ್ ಅಹಮ್ಮದ್ ತಿಳಿಸಿದರು.
ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಏಡ್ಸ್ ತಡೆಗಟ್ಟಿ, ಡಾ.ಕೆ.ಸುಧಾಕರ್ ಮನವಿ
'ಯಾವುದೇ ಸೋಂಕು ಹರುಡುವಿಕೆ ತಡೆಗಟ್ಟಲು ಹೆಚ್ಚು ಪರೀಕ್ಷೆ ಮಾಡಬೇಕು. ಆದರೆ, ಈ ಬಾರಿ ಕಡಿಮೆ ಎಚ್ಐವಿ ಪತ್ತೆ ಪರೀಕ್ಷೆ ನಡೆದಿರುವುದರಿಂದ ಎಚ್ಐವಿ ಸೋಂಕು ಹರಡುವಿಕೆ ಹೆಚ್ಚಾಗಲಿದೆ. ವಲಸೆ ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಪರೀಕ್ಷೆ ನಡೆಸದಿದ್ದರೆ ಎಚ್ಐವಿ ಸೋಂಕು ಇರುವ ವ್ಯಕ್ತಿ ಹಲವು ಜನಕ್ಕೆ ಸೋಂಕು ಹರಡಿಸಬಲ್ಲ' ಎನ್ನುತ್ತಾರೆ ವಲಸೆ ಕಾರ್ಮಿಕರಿಗೆ ಏಡ್ಸ್ ಜಾಗೃತಿ ಮತ್ತು ಪರೀಕ್ಷೆ ನಡೆಸುವ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸ್ವಯಂ ಸೇವಕಿ ಫಾತಿಮಾ ಮೇರಿ. 'ಈಗ ಎಲ್ಲರೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಇದರ ಮೇಲೆ ಎಲ್ಲರ ಗಮನ ಕೇಂದ್ರಿಕೃತವಾಗಿದೆ. ಆದರೆ ಎಚ್ಐವಿ ಪರೀಕ್ಷೆ ಬಗ್ಗೆ ಮಾತನಾಡುತ್ತಿಲ್ಲ. ಇದರ ಪರೀಕ್ಷೆ ಹೆಚ್ಚಿಸಲು ವ್ಯಾಪಕ ಪ್ರಚಾರ ಅಗತ್ಯ' ಎಂದು ಅವರು ತಿಳಿಸಿದ್ದಾರೆ.
'ಕೊರೊನಾ ತಂದ ಲಾಕ್ಡೌನ್ನಿಂದ ಎಚ್ಐವಿ ಪತ್ತೆ ಪರೀಕ್ಷೆ ಕಡಿಮೆಯಾಗಿರಬಹುದು. ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲೂ ಓಡಾಡುತ್ತಿರಲಿಲ್ಲ. ನಂತರದ ದಿನಗಳಲ್ಲಿಯೂ ಅಸುರಕ್ಷಿತ ತಾಣದಿಂದ ದೂರ ಇದ್ದಾರೆ. ಹೀಗಾಗಿ ಸೋಂಕು ಹರಡುವ ಸಾಧ್ಯತೆ ಕಡಿಮೆ' ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಸಮರ್ಥನೆ.
ಏಡ್ಸ್ ತಡೆಗೆ ಜಾಗತಿಕ ಒಗ್ಗಟ್ಟಿನ ಮಂತ್ರ: ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆ