ಆ್ಯಪ್ನಗರ

ಪ್ರಾಮಾಣಿಕತೆಯೇ ದೊಡ್ಡ ಪೂಜೆ

ಪ್ರಾಮಾಣಿಕತೆಯಿಂದ ಇದ್ದರೆ ಅದೇ ನಾವು ಭಗವಂತನಿಗೆ ಮಾಡುವ ದೊಡ್ಡ ಪೂಜೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

Vijaya Karnataka 11 Sep 2019, 5:00 am
ಮೈಸೂರು: ಪ್ರಾಮಾಣಿಕತೆಯಿಂದ ಇದ್ದರೆ ಅದೇ ನಾವು ಭಗವಂತನಿಗೆ ಮಾಡುವ ದೊಡ್ಡ ಪೂಜೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
Vijaya Karnataka Web SWAMIJI090231


ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿವಿಪ್ರ ಪ್ರೊಫೆಷನಲ್‌ ಫೋರಂ ವತಿಯಿಂದ ಆಯೋಜಿಸಿದ್ದ ವೃತ್ತಿ ನಿರತ ವಿಪ್ರ ಸೌಹಾರ್ದ ಸಹಕಾರಿ ನಿಯಮಿತ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

''ಬ್ರಾಹ್ಮಣ ಸಮಾಜ ಎಲ್ಲಾರಂಗದಲ್ಲೂಬಲಗೊಳ್ಳಬೇಕು. ರಾಜಕೀಯ, ಔದ್ಯೋಗಿಕ, ಸಾಮಾಜಿಕ, ಆಧ್ಮಾತ್ಮಿಕ ರಂಗದಲ್ಲೂಬೆಳೆಯಬೇಕು. ಯಾವ ಕ್ಷೇತ್ರದಲ್ಲೂಹಿಂದೆ ಬೀಳಬಾರದು. ಬ್ರಾಹ್ಮಣ ಸಮಾಜ ಕೇವಲ ಬ್ರಾಹ್ಮಣರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಬದಲಿಗೆ ರಾಷ್ಟ್ರದ ಹಿತಾಸಕ್ತಿಗಾಗಿ ಕಾರ‍್ಯ ನಿರ್ವಹಿಸುತ್ತದೆ. ಬ್ರಾಹ್ಮಣನ ಮುಖ್ಯ ಧರ್ಮ ಪ್ರಾಮಾಣಿಕತೆಯಾಗಬೇಕು. ನಾವು ಪ್ರಾಮಾಣಿಕರಾಗಿ ಇದ್ದರೆ ಮೀಸಲು ತನ್ನಷ್ಟಕ್ಕೆ ಹೋಗುತ್ತದೆ,'' ಎಂದು ಆಶಿಸಿದರು.

ಗಾಯತ್ರಿಮಂತ್ರ ವಿಶ್ವಗೀತೆ: ''ನಾವು ಎಷ್ಟೇ ದೊಡ್ಡವರಾದರೂ ಗಾಯತ್ರಿಮಂತ್ರವನ್ನು ಮರೆಯಬಾರದು. ಪ್ರತಿದಿನ 10 ಸಲವಾದರೂ ಗಾಯತ್ರಿ ಮಂತ್ರ ಪಠಿಸಬೇಕು. ಎಲ್ಲರಿಗೂ ಒಳ್ಳೆಯ ವಿದ್ಯೆ, ಬುದ್ಧಿ ಕೊಡು ಎಂಬುದೇ ಗಾಯತ್ರಿಮಂತ್ರದ ಸಾರ. ಗಾಯತ್ರಿಮಂತ್ರ ರಾಷ್ಟ್ರಗೀತೆಯಂತೆ ವಿಶ್ವಗೀತೆ ಇದ್ದಂತೆ. ಈ ನಿಟ್ಟಿನಲ್ಲಿಆಧ್ಯಾತ್ಮಿಕ ಸಂಸ್ಕೃತಿಯನ್ನು ಉಳಿಸಿಬೆಳೆಸಬೇಕು. ಸಾಮಾಜಿಕ ಸೇವೆ ನಮ್ಮ ಜೀವನವನ್ನು ಮುಡಿಪಿಡಬೇಕು. ಸ್ವಾರ್ಥ ಜೀವನ ಸಾಗಿಸಿದರೆ ನಾವು ತಿನ್ನುವ ಅನ್ನ ಪಾಪವಾಗಿ ಮಾರ್ಪಡುತ್ತದೆ,'' ಎಂದು ತಿಳಿಸಿದರು.

ಅನಂತಕುಮಾರ್‌ಗೆ ಹೊಗಳಿಕೆ: ಕೇಂದ್ರ ಸಚಿವ ಅನಂತಕುಮಾರ್‌ ಅವರು ಬ್ರಾಹ್ಮಣ ಮತ್ತು ಹಿಂದೂ ಸಮಾಜದ ಬಗ್ಗೆಯೂ ಅತ್ಯಂತ ನಿಷ್ಠೆಯಿಂಸ ಕೆಲಸ ಮಾಡುತ್ತಾರೆ. ನಿರ್ಭಯವಾಗಿ ವಿಚಾರಗಳನ್ನು ಹೇಳುವ ಧೀರತನ ಉಳ್ಳವರಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಸಂಸದ ಅನಂತ್‌ಕುಮಾತ್‌ ಹೆಗ್ಡೆ ಮಾತನಾಡಿ, ''ಬ್ರಾಹ್ಮಣ ಸಮುದಾಯ ಜಗತ್ತಿನ ಒಳಿತಾಗಿ ಕೆಲಸ ಮಾಡುತ್ತದೆ. ಬೇಡದ ಹಕ್ಕುಗಳಿಗಾಗಿ ಎಂದೂ ಹೋರಾಡುವುದಿಲ್ಲ. ನಾವು ನಂಬಿಕೊಂಡಿರುವ ವಿಚಾರಗಳಿಗೆ ಬದ್ಧರಾಗಿ ಬದುಕು ನಡೆಸುತ್ತಾ ಬಂದಿದ್ದೇವೆ. ಎಲ್ಲಾಕ್ಷೇತ್ರದಲ್ಲಿಬದ್ಧತೆ ಮತ್ತು ಧ್ಯೇಯವನ್ನಿಟ್ಟುಕೊಂಡಿದ್ದೇವೆ. ಹಣ ಬಂದ ನಂತರ ನಾವು ಹಾಳಾಗುತ್ತೇವೆ. ಇಲ್ಲಹೋಳಾಗುತ್ತೇವೆ. ಹಾಗಾಗಿ ನೇತೃತ್ವ ವಹಿಸಿಕೊಂಡವರು ಗಟ್ಟಿಗರಾಗಿರಬೇಕು,'' ಎಂದು ಕಿವಿಮಾತು ಹೇಳಿದರು.

ಇಂದು ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಹೊಸ ಹೊಸ ಆವಿಷ್ಕಾರಗಳ ಮೂಲಕ ಯುವ ಸಮುದಾಯಕ್ಕೆ ತಲುಪುವಂತಹ ಯೋಜನೆಗಳನ್ನು ರೂಪಿಸಬೇಕು. ಯಾರಲ್ಲಿಗುರಿ ಮತ್ತು ಗೆರೆ ದಾಟುವ ಉತ್ಸಾಹ ಇರುತ್ತದೋ ಅವರು ಇತಿಹಾಸ ಸೃಷ್ಟಿಸುತ್ತಾರೆ. ಇಂದು ಇಡೀ ಜಗತ್ತೆ ಭಾರತವನ್ನು ಒಪ್ಪಿಕೊಂಡಿದೆ. ಯೂರೋಪ್‌, ಅಮೇರಿಕಾ ದೇಶದಂತಹ ಆರ್ಥಿಕ ಸ್ಥಿತಿ ಕೆಳಮಟ್ಟಕ್ಕೆ ತಲುಪಿದ್ದರೂ, ನಮ್ಮ ದೇಶದ ಆರ್ಥಿಕ ಸ್ಥಿತಿ ಕಣ್ತೆರೆಯುತ್ತಿದೆ,'' ಎಂದು ಅಭಿಪ್ರಾಯ ಪಟ್ಟರು.

''ವಿಪ್ರ ಪ್ರೊಷನಲ್‌ ಪೋರಂನಿಂದ ವೃತ್ತಿ ನಿರತ ವಿಪ್ರ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನು ಸ್ಥಾಪಿಸುತ್ತಿರುವುದು ಸಂತೋಷದ ವಿಷಯ. ಇದು ಕೇವಲ ಆದಾಯ ವೃದ್ಧಿಯನ್ನೇ ಮುಖ್ಯ ಧ್ಯೇಯವಾಗಿಸಿಕೊಳ್ಳಬಾರದು. ವ್ಯವಹಾರ ಮತ್ತು ಜ್ಞಾನದಲ್ಲಿಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಹೊಸತನದ ಕಲ್ಪನೆಯನ್ನೂ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಹೊಸ ತಲೆಮಾರಿಗೆ ಅನುಕೂಲವಾಗುವ ಅವಕಾಶಗಳನ್ನು ಸೃಷ್ಟಿಸಬೇಕು,'' ಎಂದು ಸಲಹೆ ನೀಡಿದರು.

ಇಸ್ರೋ ಸಾಧನೆ ಸಣ್ಣದಲ್ಲ!

ಚಂದ್ರಯಾನ-2 ವಿಫಲತೆಯಲ್ಲ. ಆ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ. ಬೆಳಕಿನ ಹಾದಿಯಲ್ಲಿಯಾರು ಬೇಕಾದರೂ ನಡೆಯುತ್ತಾರೆ. ಆದರೆ, ಕತ್ತಲೆಯಲ್ಲಿಸಾಗಿ ಅಂಧಕಾರದ ಅಂತರಾಳವನ್ನು ಭೇದಿಸುವುದು ಸುಲಭದ ಮಾತಲ್ಲ. ಚಂದ್ರಯಾನ-2 ಮೂಲಕ ನಾವು ಶೇ.95ರಷ್ಟು ಸಾಧಿಸಿದ್ದೇವೆ. ವಿಜ್ಞಾನಿಗಳು ನಾವು ಸೋತಿದ್ದೇವೆ ಎಂದು ಎಲ್ಲೂಹೇಳಿಲ್ಲ. ವಿಜ್ಞಾನವೆಂದರೆ ಹಾಗೇ ಅದು ಶೋಧನೆ ಎಂದು ಸಂಸದ ಅನಂತ್‌ಕುಮಾರ್‌ ಹೆಗ್ಡೆ ಅಭಿಪ್ರಾಯ ಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ