ಆ್ಯಪ್ನಗರ

ಆರ್ಥಿಕ ಸ್ವಾವಲಂಬನೆಗೆ ತೋಟಗಾರಿಕೆ ಬೆಳೆ ಸಹಕಾರಿ

ರೈತರು ಆರ್ಥಿಕವಾಗಿ ಸಬಲರಾಗಲು ತೋಟಗಾರಿಕೆ ಬೆಳೆಗಳು ಸಹಕಾರಿ ಯಾಗಿದ್ದು, ಇಂಥ ಬೆಳೆಗಳನ್ನು ಬೆಳೆ ಯುವ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ಸಹಾಯಕ ನಿರ್ದೇಶಕಿ ಭಾರತಿ ಸಲಹೆ ನೀಡಿದರು.

Vijaya Karnataka 1 Jun 2019, 9:05 pm
ಸರಗೂರು : ರೈತರು ಆರ್ಥಿಕವಾಗಿ ಸಬಲರಾಗಲು ತೋಟಗಾರಿಕೆ ಬೆಳೆಗಳು ಸಹಕಾರಿ ಯಾಗಿದ್ದು, ಇಂಥ ಬೆಳೆಗಳನ್ನು ಬೆಳೆ ಯುವ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ಸಹಾಯಕ ನಿರ್ದೇಶಕಿ ಭಾರತಿ ಸಲಹೆ ನೀಡಿದರು.
Vijaya Karnataka Web MYR-MYS SRG NEWS  1-6-19(2)


ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಜನಧ್ವನಿ ಯ ಫೋನ್ ಇನ್ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘‘ಕಡಿಮೆ ನೀರನ್ನು ಉಪಯೋಗಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಅಕ ಲಾಭವನ್ನು ಪಡೆದು ರೈತರು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು. ಇತ್ತೀಚಿನ ದಿನಗಳ ಲ್ಲಿ ನೀರಿನ ಸಮಸ್ಯೆ ಹೆಚ್ಚಿರು ವುದರಿಂದ ರಾಜ್ಯ, ಕೇಂದ್ರ ಸರಕಾರಗಳು ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿವೆ. ಇಂಥ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು,’’ ಎಂದು ತಿಳಿಸಿದರು.

‘‘ರೈತರು ನೀರಿಲ್ಲದೆ ಬೆಳೆಗಳನ್ನು ಬೆಳೆಯಲು ಕಷ್ಟ ಪಡುತ್ತಿದ್ದಾರೆ. ಆದರ ಬದಲು ಈ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಲು ಅನುಕೂಲ ವಾಗಲಿವೆ. ಬೇರೆ ದೇಶಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರಿಗೆ ಉತ್ತಮಗುಣಮಟ್ಟದ ಆಹಾರ ಸಿಗುತ್ತಿಲ್ಲ, ಹೀಗಾಗಿ ರೈತರು ಗುಣಮಟ್ಟದ ಆಹಾರ ಉತ್ಪಾದನೆ ಮಾಡಬೇಕು,’’ ಎಂದು ಹೇಳಿದರು.

‘‘ಮನುಷ್ಯನಿಗೆ ಹಣ್ಣು ಮತ್ತು ತರಕಾರಿಗಳ ಅವಶ್ಯಕತೆ ವರ್ಷಪೂರ್ತಿ ಇರುವುದರಿಂದ ರೈತರು ಇವುಗಳನ್ನು ಬೆಳೆದರೆ ಖಂಡಿತವಾಗಿಯೂ ಸಹ ಅಭಿವೃದ್ಧಿ ಯಾಗುವುದರಲ್ಲಿ ಯಾವುದೇ ಸಂದೇಹ ವಿಲ್ಲ. ಈ ನಿಟ್ಟಿನಲ್ಲಿ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರು ತೋಟಗಾರಿಕೆ ಬೆಳೆಗಳ ನ್ನು ಬೆಳೆಯಲು ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡುತ್ತಿದೆ,’’ ಎಂದು ತಿಳಿಸಿದರು.

‘‘ಶಾಲೆಯಲ್ಲಿ ತರಕಾರಿ ಬೆಳೆಯಲು ನರೇಗಾ ಯೋಜನೆಯನ್ನು ಬಳಸಿ ಕೊಂಡು ಶಾಲೆಗೆ ಬೇಕಾದ ಸೊಪ್ಪು- ತರಕಾರಿ ಗಳನ್ನು ಬೆಳೆದುಕೊಳ್ಳಲು ಅವಕಾಶವಿದೆ. ಜತೆಗೆ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದವರಿಗೆ ಪಾಲಿಹೌಸ್ ನಿರ್ಮಾಣ ಮಾಡಲು ಇಲಾಖೆ ವತಿಯಿಂದ ಶೇ.೯೦ ರಷ್ಟು ಸಹಾಯಧನ ನೀಡಲಾಗುವುದು. ಈ ಯೋಜನೆ ಯನ್ನು ಉಪಯೋಗಿಸಿ ಕೊಳ್ಳವುದರ ಮೂಲಕ ಜೀವನವನ್ನು ಉತ್ತಮ ಪಡಿಸಿ ಕೊಳ್ಳಬಹುದು,’’ ಎಂದು ವಿವರಿಸಿದರು. ಕಾರ‌್ಯಕ್ರಮವನ್ನು ಜನಧ್ವನಿ ಬಾನುಲಿ ಕೇಂದ್ರದ ವ್ಯವಸ್ಥಾಪಕ ಶಿವಕುಮಾರ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ