ಆ್ಯಪ್ನಗರ

ಘನ ತ್ಯಾಜ್ಯ ನಿರ್ವಹಣೆ: ದಕ್ಷಿಣ ವಲಯದಲ್ಲೇ ಹುಣಸೂರು No 1

ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವಾಲಯ ಶನಿವಾರ ಸ್ವಚ್ಛ ಸರ್ವೇಕ್ಷಣ 2018 ಪ್ರಶಸ್ತಿ ಘೋಷಿಸಿದ್ದು, ಘನ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷಿಣ ವಲಯದ ಅತ್ಯುತ್ತಮ ನಗರವೆಂಬ ಹೆಗ್ಗಳಿಕೆಗೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣ ಪಾತ್ರವಾಗಿದೆ.

TIMESOFINDIA.COM 24 Jun 2018, 3:15 pm
ಬೆಂಗಳೂರು: ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವಾಲಯ ಶನಿವಾರ ಸ್ವಚ್ಛ ಸರ್ವೇಕ್ಷಣ 2018 ಪ್ರಶಸ್ತಿ ಘೋಷಿಸಿದ್ದು, ಘನ ತ್ಯಾಜ್ಯ ನಿರ್ವಹಣೆಯಲ್ಲಿ ದಕ್ಷಿಣ ವಲಯದ ಅತ್ಯುತ್ತಮ ನಗರವೆಂಬ ಹೆಗ್ಗಳಿಕೆಗೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣ ಪಾತ್ರವಾಗಿದೆ.
Vijaya Karnataka Web Mysoore


ವಾರ್ಡ್‌ಗಳಲ್ಲಿ ತ್ಯಾಜ್ಯ ಪ್ರತ್ಯೇಕಿಸುವುದು ಸೇರಿದಂತೆ ಘನ ತ್ಯಾಜ್ಯ ನಿರ್ವಹಣೆ ಸೂಚಕಗಳಲ್ಲಿ ಹುಣಸೂರು ಪಟ್ಟಣ ನಿಗದಿತ 476 ಕ್ಕೆ 280 ಅಂಕ ಪಡೆದಿದೆ.
ನಗರದಲ್ಲಿ ಪ್ರತಿ ದಿನ ಸರಿಸುಮಾರು 21.9 ಟನ್ ಕಸ ಸಂಗ್ರಹವಾಗುತ್ತದೆ.

ಸಂಗ್ರಹಿಸಿದ ದಿನವೇ ತ್ಯಾಜ್ಯ ಸಾಗಣೆ, ತ್ವರಿತ ಸಂಸ್ಕರಣೆ ಸೇರಿದಂತೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನಗರಸಭೆ ದಕ್ಷತೆಯನ್ನು ತೋರುತ್ತಿದೆ. 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಪಟ್ಟಣದಲ್ಲಿ ಮನೆ-ಮನೆ ಕಸ ಸಂಗ್ರಹಣೆ ವ್ಯವಸ್ಥೆ ಇದೆ. ಎಲ್ಲಾ ತೇವ ತ್ಯಾಜ್ಯವನ್ನು ಆಟೋ ಟಿಪ್ಪರ್ ಮತ್ತು ಒಣ ತ್ಯಾಜ್ಯವನ್ನು ಪ್ರತಿ ಸಾಗಣೆ ವಾಹನಕ್ಕೆ ಜೋಡಿಸಲಾದ ಪಾಲಿಥಿನ್ ಚೀಲಗಳಲ್ಲಿ ಸಾಗಿಸಲಾಗುತ್ತದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕೂಡ ದಕ್ಷಿಣ ವಲಯದ ಸ್ವಚ್ಛ ನಗರ (ಎರಡನೇ ಸ್ಥಾನ) ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದು, ತೆಲಂಗಾಣದ ಸಿದ್ದಿಪೇಟ್ ಮೊದಲ ಸ್ಥಾನದಲ್ಲಿದೆ. ಇನ್ನು ಹುಣಸೂರು, ಪುತ್ತೂರು ಹಾಗೂ ಮುಲ್ಕಿ ಪಟ್ಟಣಗಳು ದಕ್ಷಿಣ ವಲಯದ ಟಾಪ್ 20ರ ಪಟ್ಟಿಯಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ