ಆ್ಯಪ್ನಗರ

ಕಪಿಲಾ ನದಿಯಿಂದ ಹುರ ಭಾಗದ ಕೆರೆಗಳಿಗೆ ನೀರು..! ಕ್ಯಾಬಿನೆಟ್‌ನಿಂದ ಒಪ್ಪಿಗೆ ಎಂದ ಶಾಸಕ ಹರ್ಷವರ್ಧನ್‌

ಕಪಿಲಾ ನದಿಯಿಂದ ನಂಜಗೂಡು ತಾಲೂಕಿನ ಹುರ ಭಾಗದ ಕೆರೆಗಳಿಗೆ ಕುಡಿಯುವ ನೀರು ತುಂಬಿಸುವ ಯೋಜನೆಗೆ ಕ್ಯಾಬಿನೆಟ್‌ನಿಂದ ಒಪ್ಪಿಗೆ ಸಿಕ್ಕಿದೆ ಎಂದು ನಂಜನಗೂಡು ಶಾಸಕ ಬಿ ಹರ್ಷವರ್ಧನ್‌ ಹೇಳಿದ್ದಾರೆ. ಅದಲ್ಲದೇ 14 ಕೋಟಿ ರೂ. ವೆಚ್ಚದ ಯೋಜನೆಯಿಂದ ಗುಂಡ್ಲುಪೇಟೆ ಭಾಗದ 9 ಹಾಗೂ ಹುರ ಭಾಗದ 3 ಕೆರೆಗಳಿಗೆ ನೀರು ಸಿಗಲಿದೆ ಎಂದು ತಿಳಿಸಿದ್ದಾರೆ.

Vijaya Karnataka Web 25 Jan 2021, 9:38 am
ನಂಜನಗೂಡು (ಮೈಸೂರು): ತಾಲೂಕಿನ ಹುರ ಭಾಗದ ಕೆರೆಗಳಿಗೆ ಕಪಿಲಾ ನದಿಯಿಂದ ಕುಡಿಯುವ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ದೊರೆತಿದ್ದು, 14 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಜಾರಿಯಿಂದ ಗುಂಡ್ಲುಪೇಟೆ ಭಾಗದ 9 ಹಾಗೂ ಹುರ ಭಾಗದ 3 ಕೆರೆಗಳಿಗೆ ನೀರು ಲಭ್ಯವಾಗಲಿದೆ ಎಂದು ಶಾಸಕ ಬಿ.ಹರ್ಷವರ್ಧನ್‌ ತಿಳಿಸಿದರು.
Vijaya Karnataka Web B HARSHAVARDHAN
ಬಿ ಹರ್ಷವರ್ಧನ್‌, ನಂಜನಗೂಡು ಶಾಸಕ (ಸಂಗ್ರಹ ಚಿತ್ರ)


ಭಾನುವಾರ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಹುರ ಗ್ರಾಮದಿಂದ ಯಡಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ಥಳೀಯರ ಬಹು ದಿನಗಳ ಬೇಡಿಕೆಯಾದ ಹುರ ಭಾಗದ 3 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಆ ಮೂಲಕ ಹೊಸಪುರ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದರು.

ಇನ್ನು, ನಂಜನಗೂಡು ಕ್ಷೇತ್ರದ ರೈತರ ಜೀವನಾಡಿಯಾದ ನುಗು ಅಣೆಕಟ್ಟೆಗೆ ಕಪಿಲಾ ನದಿಯಿಂದ ಕುಡಿಯುವ ನೀರು ತುಂಬಿಸುವ ಮೂಲಕ ನುಗು ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿಯವರು ಉತ್ಸುಕರಾಗಿದ್ದಾರೆ. ಹೀಗಾಗಿ ನುಗು ಭಾಗದ ರೈತರ ಕನಸು ನನಸಾಗಲಿದೆ ಎಂದು ಹೇಳಿದರು.
ನಂಜನಗೂಡು: 54 ದಿನಗಳಿಂದ ಅಹೋರಾತ್ರಿ ಧರಣಿ, ಭೂ ಸಂತ್ರಸ್ತ ರೈತರ ಬೇಡಿಕೆಗೆ ಏಶಿಯನ್‌ ಪೇಂಟ್ಸ್‌ ಒಪ್ಪಿಗೆಉಳಿದಂತೆ ತಾಲೂಕಿನ ದೇವಿರಮ್ಮನಹಳ್ಳಿ, ವಳಗೆರೆ, ಅಂಬಳೆ, ಹಲ್ಲರೆ, ಹುರ ಗ್ರಾಮಗಳಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬೀದಿಯಲ್ಲಿ ಕಾಂಕ್ರಿಟ್‌ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ತಿರುಪತಿ ಮಾದರಿಯಲ್ಲಿ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇಗುಲ ಅಭಿವೃದ್ದಿ: ಹರ್ಷವರ್ಧನ್‌ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ಬಿ.ಎಸ್‌.ಮಹದೇವಪ್ಪ, ಸದಸ್ಯರಾದ ಹಗಿನವಾಳು ಮೂಗಶೆಟ್ಟಿ, ಗ್ರಾ.ಪಂ.ಸದಸ್ಯರಾದ ಹುರ ಚಂದ್ರು, ಜಯಲಧಿಕ್ಷ್ಮಿ, ತಾಯಮ್ಮ,ಮಲ್ಲಿಗಮ್ಮ, ಶಿವಬುದ್ದಿ, ಅಬ್ದೂಲ್‌ ರಜಾಕ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ