ಆ್ಯಪ್ನಗರ

ಹೆಂಡತಿ ಮುನಿಸಿಕೊಂಡು ಹೋಗಿದ್ದಕ್ಕೆ ಟವರ್‌ ಏರಿ ಕುಳಿತ ಪತಿರಾಯ..! ಮುಂದೇನಾಯ್ತು..?

ಕೆಲ ದಿನಗಳ ಹಿಂದಷ್ಟೇ ಹೆಂಡತಿ ಬೇಕೆಂದು ಬಳ್ಳಾರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತೆಂಗಿನ ಮರ ಹತ್ತಿರುವ ಘಟನೆ ಹಸಿಯಾಗಿಯೇ ಇದೆ. ಅಂತಹದ್ದೇ ಘಟನೆ ಮೈಸೂರಲ್ಲಿ ರಿಪೀಟ್‌ ಆಗಿದ್ದು, ಹೆಂಡತಿ ಮುನಿಸಿಕೊಂಡು ಹೋಗಿದ್ದಾಳೆ ಎಂಬ ಬೇಸರದಿಂದ ಗಂಡ ಬಿಎಸ್‌ಎನ್‌ಎಲ್‌ ಟವರ್‌ಗೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

Vijaya Karnataka Web 26 Jan 2021, 1:43 pm

ಹೈಲೈಟ್ಸ್‌:


* ಹೆಂಡತಿ ಮುನಿಸಿಕೊಂಡು ಹೋಗಿದ್ದಕ್ಕೆ ಟವರ್‌ ಏರಿ ಕುಳಿತ ಗಂಡ
* ಹೆಂಡತಿ ಬೇಕೆಂದು ಮೈಸೂರಿನಲ್ಲಿ ಟೆಲಿಕಾಂ‌ ಟವರ್‌ ಏರಿದ ಪತಿ
* ಪತಿ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿದ ಪೊಲೀಸರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web telecom tower
ಸಾಂದರ್ಭಿಕ ಚಿತ್ರ
ಮೈಸೂರು: ಕೆಲ ದಿನಗಳ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಹೆಂಡತಿ ಬೇಕೆಂದು ವ್ಯಕ್ತಿಯೊಬ್ಬ ತೆಂಗಿನ ಮರ ಹತ್ತಿ ಕುಳಿತಿದ್ದ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಹೆಂಡತಿ ಮುನಿಸಿಕೊಂಡು ಹೋಗಿದ್ದಾಳೆ ಎಂಬ ಬೇಸರದಿಂದ ಪತಿರಾಯ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹೌದು, ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ವಿದ್ಯಾರಣ್ಯಪುರಂ ನಿವಾಸಿ ಗೌರಿಶಂಕರ್‌ ಎಂಬಾತನೇ ಬಿಎಸ್‌ಎನ್‌ಎಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗಂಡ ಮತ್ತು ಹೆಂಡತಿಯ ನಡುವೆ ಜಗಳ ಆಗಿದ್ದು, ಈ ಕಾರಣ ಗಂಡ ಬೇಡವೆಂದು ಹೆಂಡತಿ ಬಿಟ್ಟು ಹೋಗಿದ್ದಳು.

ಈ ಹಿನ್ನೆಲೆ ಬೇಸರಗೊಂಡ ಗೌರಿಶಂಕರ್‌ ಸೋಮವಾರ ಸಂಜೆ ತನ್ನ ಹೆಂಡತಿ ಬೇಕು, ಕರೆಸಿ ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಟವರ್‌ ಏರಿ ಹೆದರಿಸಿದ್ದಾನೆ. ಸುಮಾರು ಒಂದುವರೆ ಗಂಟೆಗಳ ಕಾಲ ಪ್ರಯತ್ನಪಟ್ಟು ಗೌರಿಶಂಕರ್‌ನನ್ನು ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು: ಬೆಂಗಳೂರಿಗೆ ಹೊರಟಿದ್ದ ಟ್ರ್ಯಾಕ್ಟರ್‌ ಮತ್ತು ರೈತರನ್ನು ಅರ್ಧದಲ್ಲೇ ತಡೆದ ಪೊಲೀಸರು..!ಗೌರಿಶಂಕರ್‌ ವಿರುದ್ಧ ವಿದ್ಯಾರಣ್ಯಪುರಂ ಪೊಲೀಸರು ಐಪಿಸಿ 309 (ಆತ್ಮಹತ್ಯೆಗೆ ಯತ್ನ ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ